ಅಮರನಾಥ ಯಾತ್ರಿಕರ ಮೇಲೆ ಹರಿದ ಕಾರು, ಓರ್ವ ಸಾವು, ಮೂವರಿಗೆ ಗಾಯ
Team Udayavani, Jul 13, 2018, 3:51 PM IST
ಜಮ್ಮು : ಸಾಂಬಾ ಜಿಲ್ಲೆಯ ಜಮ್ಮು – ಲಖನ್ಪುರ ಹೈವೇಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮರನಾಥ ಯಾತ್ರಿಕರ ಮೇಲೆ ಕಾರೊಂದು ಹರಿದ ಪರಿಣಾಮವಾಗಿ ಓರ್ವ ಯಾತ್ರಿಕ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ವರದಿಯಾಗಿದೆ.
ಮೃತ ಯಾತ್ರಿಕನನ್ನು ಮುಕೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಇಟಾ ಜಿಲ್ಲೆಯ ಯಾತ್ರಿಕರ ಗುಂಪೊಂದು ನಡೆದುಕೊಂಡು ಹೋಗುತ್ತಿದ್ದಾಗ ಬಾರಿ-ಬ್ರಹ್ಮಣ ಫ್ಲೈಓವರ್ ಸಮೀಪ ಭುವಿನ್ ದುಬೆ ಎಂಬ ವ್ಯಕ್ತಿ ಚಲಾಯಿಸಿಕೊಂಡು ಬಂದ ಕಾರು ಪಾದಚಾರಿಗಳ ಮೇಲೆ ಹರಿಯಿತು.
ಮೂವರು ಗಾಯಾಳುಗಳ ಪೈಕಿ ಚಂದರ್ ಪಾಲ್ ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಿದೆ. ವೀರಿ ಸಿಂಗ್ ಮತ್ತು ರಾಮ್ ಪೌಲ್ ಎಂಬವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅವಘಡ ನಡೆದ ವೇಳೆ ಭಾರೀ ಮಳೆ ಸುರಿಯುತ್ತಿತ್ತು. ಕಾರು ಚಾಲಕನಾಗಿರುವ ಸ್ಥಳೀಯ ವ್ಯಕ್ತಿ ದುಬೆಯನ್ನು ಪೊಲೀಸರು ಬಂಧಿಸಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Goa; ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಯುವತಿ ಬಂಧನ
ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು
Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!