ಇಂಗ್ಲೆಂಡ್‌ಗೆ ಸರಣಿ ಕಿರೀಟ : ಕೊಹ್ಲಿ, ಧವನ್‌ ಜತೆಯಾಟ ವ್ಯರ್ಥ


Team Udayavani, Jul 18, 2018, 9:37 AM IST

100.jpg

ಲೀಡ್ಸ್‌: ಜೋ ರೂಟ್‌ (ಅಜೇಯ 100 ರನ್‌) ಮತ್ತು ಇಯಾನ್‌ ಮಾರ್ಗನ್‌ (ಅಜೇಯ 88 ರನ್‌) ನೆರವಿನಿಂದ ನಿರ್ಣಾಯಕ ಪಂದ್ಯದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಆತಿಥೇಯ ಇಂಗ್ಲೆಂಡ್‌ 2-1 ರಿಂದ ಏಕದಿನ
ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 50 ಓವರ್‌ಗೆ 8 ವಿಕೆಟ್‌ಗೆ 256 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌
ಅಗ್ರ ಬ್ಯಾಟ್ಸ್‌ಮನ್‌ ಪ್ರಚಂಡ ಸಾಹಸದಿಂದಾಗಿ 44.3 ಓವರ್‌ ಗೆ ಕೇವಲ 2 ವಿಕೆಟ್‌ ಕಳೆದುಕೊಂಡು 260 ರನ್‌ಗಳಿಸಿ
ಗೆಲುವಿನ ದಡ ಸೇರಿತು. ಆರಂಭದಲ್ಲಿ 2 ವಿಕೆಟ್‌ ಕಳೆದುಕೊಂಡರೂ ರೂಟ್‌ ಮತ್ತು ಮೊರ್ಗನ್‌ ಸಾಹಸಮಯ
ಜತೆಯಾಟದಿಂದ ಇಂಗ್ಲೆಂಡ್‌ ಸುಲಭ ಗೆಲುವು ಸಾಧಿಸಿತು.ಇದರೊಂದಿಗೆ ಟಿ20 ಸರಣಿ ಸೋಲಿಗೆ ಆತಿಥೇಯರು ಸೇಡು
ತೀರಿಸಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತೀಯರು ಅದ್ಭುತ ಆಟ ಪ್ರದರ್ಶಿಸಲಿಲ್ಲ. ಅಗ್ರ ಕ್ರಮಾಂಕದಲ್ಲಿ ವಿರಾಟ್‌
ಕೊಹ್ಲಿ (71 ರನ್‌), ಶಿಖರ್‌ ಧವನ್‌ (44 ರನ್‌) ಉತ್ತಮ ಜತೆಯಾಟ ನೀಡಿದರೂ ಬ್ಯಾಟ್ಸ್‌ಮನ್‌ಗಳ ಹಠಾತ್‌ ಕುಸಿತ
ಪರಿಣಾಮದಿಂದ ಇಂಗ್ಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಾಧಾರಣ ಸವಾಲನ್ನು ನೀಡಲಷ್ಟೇ
ಸಾಧ್ಯವಾಯಿತು.

ಕೊಹ್ಲಿ, ಧವನ್‌ ಜತೆಯಾಟ: ಶಿಖರ್‌ ಧವನ್‌ ಜತೆಗೆ ರೋಹಿತ್‌ ಶರ್ಮ (2 ರನ್‌) ಇನಿಂಗ್ಸ್‌ ಆರಂಭಿಸಿದರು.
ತಂಡದ ಒಟ್ಟು ರನ್‌ 13 ಆಗಿದ್ದಾಗ ವಿಲ್ಲಿ ಎಸೆತದಲ್ಲಿ ಹಿಟ್‌ ಮ್ಯಾನ್‌ ರೋಹಿತ್‌ ಅವರು ವುಡ್‌ ಮ್ಯಾನ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ಹಂತದಲ್ಲಿ ವಿರಾಟ್‌ ಕೊಹ್ಲಿ-ಶಿಖರ್‌ ಧವನ್‌ ಒಂದಾದರು. 81 ರನ್‌ ಜತೆಯಾಟ ಮಾಡಿದರು. ಆರಂಭಿಕ
ಆಘಾತವನ್ನು ಸರಿಪಡಿಸಲು ಪ್ರಯತ್ನಿಸಿದರು. 49 ಎಸೆತ ಎದುರಿಸಿದ್ದ ಧವನ್‌ 7 ಬೌಂಡರಿ ಸಿಡಿಸಿದ್ದಾಗ ಇಲ್ಲದ ರನ್‌ ಕದಿಯಲು ಪ್ರಯತ್ನಿಸಿ ಸ್ಟೋಕ್ಸ್‌ ಎಸೆತದಲ್ಲಿ ರನೌಟಾದರು.

ಆ ಬಳಿಕ ಕೊಹ್ಲಿ ಜತೆಗೆ ದಿನೇಶ್‌ ಕಾರ್ತಿಕ್‌ (21 ರನ್‌) ಜತೆಗೂಡಿದರು. 22 ಎಸೆತದ ಎದುರಿಸಿದ ಕಾರ್ತಿಕ್‌ 3
ಬೌಂಡರಿ ಸಿಡಿಸಿದ್ದಾಗ ರಶೀದ್‌ ಎಸೆತದಲ್ಲಿ ಬೌಲ್ಡ್‌ ಆದರು. ಆಗ ತಂಡದ ಒಟ್ಟು ಮೊತ್ತ 3 ವಿಕೆಟ್‌ಗೆ 125 ರನ್‌ ಆಗಿತ್ತು.
ಕಾರ್ತಿಕ್‌ ಔಟಾದ ಬೆನ್ನಲ್ಲೇ ಅರ್ಧಶತಕ ದಾಖಲಿಸಿ ಶತಕದತ್ತ ಸಾಗುತ್ತಿದ್ದ ವಿರಾಟ್‌ ಕೊಹ್ಲಿ ಕೂಡ ಎಡವಿದರು. ಮತ್ತೂಮ್ಮೆ ಅಪಾಯಕಾರಿಯಾದ ರಶೀದ್‌ ಕೊಹ್ಲಿಯನ್ನು ಬೌಲ್ಡ್‌ ಮಾಡಿದರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 156 ರನ್‌ ಆಗಿತ್ತು. ಈ ಬೆನ್ನಲ್ಲೇ ಸುರೇಶ್‌ ರೈನಾ (1 ರನ್‌) ಕೂಡ ರಶೀದ್‌ ಮ್ಯಾಜಿಕ್‌ ಅರಿಯಲಾಗದೆ ವಿಕೆಟ್‌
ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ಭಾರತ 31 ಓವರ್‌ಗೆ 158 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತ್ತು.
ಮತ್ತೂಮ್ಮೆ ಧೋನಿ ನಿಧಾನ: ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿ ಸಾಮಾಜಿಕ
ಜಾಲತಾಣದಲ್ಲಿ ಟೀಕೆಗೊಳಗಾಗಿದ್ದ ಎಂ.ಎಸ್‌.ಧೋನಿ ಮತ್ತೂಮ್ಮೆ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಬೇಕಾಯಿತು.

66 ಎಸೆತದಿಂದ 4 ಬೌಂಡರಿ ಒಳಗೊಂಡ 42 ರನ್‌ ಅಷ್ಟನ್ನೇ ಧೋನಿಗಳಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ (21
ರನ್‌), ಭುವನೇಶ್ವರ್‌ ಕುಮಾರ್‌ (21 ರನ್‌) ಮತ್ತು ಶಾದೂìಲ್‌ ಠಾಕೂರ್‌ (ಅಜೇಯ 22 ರನ್‌) ಗಳಿಸಿದ್ದರಿಂದ
ಭಾರತ 250 ರನ್‌ ಗಡಿದಾಟಲು ಸಾಧ್ಯವಾಯಿತು

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.