ಶಿರಾಡಿ: ನಿಷೇಧ ಇದ್ದರೂ ಘನ ವಾಹನ ಸಂಚಾರ
Team Udayavani, Jul 19, 2018, 3:42 PM IST
ಪುತ್ತೂರು/ ನೆಲ್ಯಾಡಿ: ನಿಷೇಧ ಆದೇಶದ ಹೊರತಾಗಿಯೂ ಶಿರಾಡಿ ರಸ್ತೆಯಾಗಿ ಸಾಗಲು ಘನ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಬುಧವಾರ ಕಂಡುಬಂದಿದೆ. ಬುಧವಾರ ಸಂಜೆ ವೇಳೆಗೆ ಘನ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಗುಂಡ್ಯ ಬಳಿ 2 ತಾಸು ಟ್ರಾಫಿಕ್ ಜಾಮ್ ಉಂಟಾಯಿತು.
ಮಂಗಳೂರಿನಿಂದ ಹಾಗೂ ಸಕಲೇಶಪುರ ಭಾಗದಿಂದ ಘನ ವಾಹನ ಸಂಚಾರ ಬುಧವಾರವೂ ಮುಂದುವರಿದಿದೆ. ಜುಲೈ 18ರಿಂದ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮಂಗಳವಾರ ಘನ ವಾಹನಗಳು ಸಂಚರಿಸಿದ್ದ ಹಿನ್ನೆಲೆಯಲ್ಲಿ ಬುಧವಾರವೂ ಸಂಚಾರ ಇದೆ ಎಂದೇ ಭಾವಿಸಿದ್ದರು. ಈ ನಡುವೆ ಘನವಾಹನ ಚಾಲಕರು ಸ್ಥಳದಲ್ಲಿ ನಿಯೋಜಿತರಾಗಿದ್ದ ಪೊಲೀಸರೊಂದಿಗೆ ವಾಹನ ಬಿಡುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತ ಪಡಿಸು ತ್ತಿರುವುದೂ ಕಂಡುಬಂದಿದೆ.
ಆದೇಶ ಹೊರಡಿಸಿದ್ದ ಜಿಲ್ಲಾಡಳಿತ, ಇದರ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಲು ವಿಫಲ ಆಗಿರುವುದೇ ಈ ಅವ್ಯವಸ್ಥೆಗೆ ಕಾರಣ ಎಂದು ಗುಂಡ್ಯ ನಿವಾಸಿಗಳು ದೂರಿದ್ದಾರೆ. ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮಾಣಿಯಲ್ಲಿ ತಡೆದು, ಬೇರೆ ದಾರಿ ತೋರಿಸಬೇಕಿತ್ತು. ಹಾಸನ ಕಡೆಯಿಂದ ಬರುವ ವಾಹನಗಳಿಗೆ ಅಲ್ಲಿಯೇ ತಡೆ ಒಡ್ಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು