ಎಚ್ಡಿಕೆ ಅಭಿಮಾನಿ ಕಿಸೆಗೆ ಕತ್ತರಿ: ಬಂಧನ
Team Udayavani, Jul 21, 2018, 1:06 PM IST
ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರಕ್ಕೆ ಬಾಗಿನ ಅರ್ಪಿಸಲು ಬಂದ ಸಿಎಂ ಕುಮಾರಸ್ವಾಮಿ ಅಭಿಮಾನಿಯೊಬ್ಬನ ಕಿಸೆಯಿಂದ ಹಣ ಕದ್ದು ಆತನ ಕೈಗೇ ಸಿಕ್ಕಿಬಿದ್ದ ವ್ಯಕ್ತಿ ಪೊಲೀಸರ ಅತಿಥಿಯಾದ ಘಟನೆ ಕೆಆರ್ಎಸ್ನಲ್ಲಿ ನಡೆದಿದೆ.
ಎಚ್.ಡಿ.ಕೋಟೆಯ ಶಿವಣ್ಣ ಎಂಬ ಜೆಡಿಎಸ್ ಕಾರ್ಯಕರ್ತ ಕೆಆರ್ಎಸ್ ನಲ್ಲಿ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಲು ಆಗಮಿಸಿದ್ದ. ಶಿವಣ್ಣ ಯಾವುದೋ ಸ್ವಂತ ಕಾರ್ಯಮುಗಿಸಿ ಜೇಬಿನಲ್ಲಿ 10 ಸಾವಿರ ಹಣ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ. ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರನ್ನು ನೋಡಿ ಹೋಗಲು ಆಗಮಿಸಿ ವೇಳೆ ಜನರ
ಗುಂಪಿನೊಳಗೆ ನುಸುಳಿಕೊಂಡು ಕುಮಾರಸ್ವಾಮಿ ಅವರನ್ನು ನೋಡುತ್ತಾ ನಿಂತಿದ್ದರು. ಶಿವಣ್ಣ ಜೇಬಿನಲ್ಲಿದ್ದ ಹಣ ದಪ್ಪಗೆ ಕಾಣುತ್ತಿದ್ದು, ಒಂದು ಕೈಯನ್ನು ಅದರ ಮೇಲೆ ಇಟ್ಟುಕೊಂಡೆ ಜನಜಂಗುಳಿಯಲ್ಲಿ ನಿಂತಿದ್ದ ವೇಳೆಯಲ್ಲಿ ಇದನ್ನೇ ಹೊಂಚುಹಾಕಿದ್ದ 55 ವರ್ಷದ ವ್ಯಕ್ತಿಯೊಬ್ಬ ಮೆತ್ತಗೆ ಶಿವಣ್ಣನ ಜೇಬಿಗೆ ಕೈ ಹಾಕಿ ಹಣ ಎಗರಿಸಿ ಕೈಯಲ್ಲಿ ಹಣ ಹಿಡಿದಿದ್ದಾನೆ. ತಕ್ಷಣ ಆತನ ಕೈ ಮತ್ತು ಹಣದ ಸಹಿತವೇ ಕೈ ಹಿಡಿದು ಎರಡು ಗೂಸಾ ಶಿವಣ್ಣ ಕೊಟ್ಟಿದ್ದಾನೆ. ಆತ ಅತ್ತಿತ್ತ ಓಡಿ ಹೋಗಲು ಮುಂದಾದಾಗ ಕತ್ತಿನ ಪಟ್ಟಿ ಹಿಡಿದು ಹಣ ಕಿತ್ತುಕೊಂಡು ಪೊಲೀಸರನ್ನು ಕೂಗಿದ್ದಾನೆ. ನಂತರ ಅಕ್ಕ ಪಕ್ಕದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ