ಶಿವಾಯ ಫೌಂಡೇಶನ್‌: ಬುದ್ಧಿಮಾಂದ್ಯರ ಶಿಕ್ಷಣ ಸಂಸ್ಥೆಗೆ ಆರ್ಥಿಕ ನೆರವು


Team Udayavani, Jul 25, 2018, 4:36 PM IST

2307mum08.jpg

ಮುಂಬಯಿ: ಪ್ರಗತಿ ವಿದ್ಯಾಲಯ ಮುಂಬಯಿ ಮಹಾನಗರದ ವಿಕ್ರೋಲಿಯಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥೆಯಾಗಿದ್ದು,  ಆದರೆ ಸಂಸ್ಥೆಯ ಕಟ್ಟಡ  ತುಂಬ ಹಳೆಯದಾಗಿದ್ದು ಯಾವ ರೀತಿಯಲ್ಲೂ ಪ್ರಗತಿ ಹೊಂದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡ ತುಳು-ಕನ್ನಡಿಗರ ಶಿವಾಯ ಫೌಂಡೇಶನ್‌ನ  ಉತ್ಸಾಹಿ ಯುವಕ-ಯುವತಿಯರ ತಂಡವು ಪ್ರಗತಿ ವಿದ್ಯಾಲಯದ ಅಭಿವೃದ್ಧಿಗೆ  ಪಣತೊಟ್ಟಿದೆ.

ಈ ನಿಟ್ಟಿನಲ್ಲಿ ಜು. 16ರಂದು ಶಾಲೆಗೆ ಭೇಟಿ ನೀಡಿ ಸಮಸ್ಯೆ ಮತ್ತು ಪ್ರಸ್ತುತ  ಪರಿಸ್ಥಿತಿಗಳ ಸಂಪೂರ್ಣ ವಿವರ ಪಡೆದ ಶಿವಾಯ ಫೌಂಡೇಶನ್‌ಸದಸ್ಯರು ವಿದ್ಯಾಲಯದ ಮಕ್ಕಳಿಗೆ ವ್ಯವಸ್ಥಿತ ಕೊಠಡಿ ನಿರ್ಮಿಸುವ ಸಲುವಾಗಿ ಮೊದಲ ಕಂತಿನ ಚೆಕ್ಕನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಹಂತ ಹಂತವಾಗಿ ಚೆಕ್‌ ವಿತರಿಸಿ ವಿದ್ಯಾಲಯದ ಪುನ:ಶ್ಚೇತನದ ಯೋಜನೆಯನ್ನು ಪೂರ್ಣಗೊಳಿಸುವತ್ತ ಫೌಂಡೇಶನ್‌ ಮುಂದಾಗಿದೆ.

ಇಲ್ಲಿ ಶಿಕ್ಷಣಕ್ಕಾಗಿ  ಕಿವುಡ, ಮೂಗ ಮತ್ತು ಅಂಗ ವೈಕಲ್ಯವನ್ನು ಹೊಂದಿದಂತಹ ಮಕ್ಕಳು ಬರುತ್ತಿದ್ದು, ಸರಕಾರದಿಂದ ಸಂಪೂರ್ಣ ರೀತಿ ಯಲ್ಲಿ ನಿರ್ಲಕ್ಷÂಕ್ಕೊಳಗಾದ ಈ ವಿದ್ಯಾಲಯಕ್ಕೆ ಸರಕಾರದ ಗ್ರಾÂಂಟ್‌ ಇದು ವರೆಗೆ ದೊರಕಿಲ್ಲ. ವ್ಯವಸ್ಥಿತ ವಾಗಿದ್ದರೆ ಈ ಶಾಲೆ ಇವತ್ತು ಸುಮಾರು ಇನ್ನೂರು ಮುನ್ನೂರು ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿತ್ತು. ಪ್ರಸ್ತುತ ಈ ವಿದ್ಯಾಲಯವು ಸರಕಾರದ ನಿರ್ಲಕ್ಷÂಕ್ಕೆ ಹಾಗೂ  ಸಮಾಜದ ಅವಗಣನೆಗೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು.

ಈ  ಕಟ್ಟಡವು ಸುಮಾರು 40 ವರ್ಷ ಹಳೆಯದಾಗಿದ್ದು, ಹಲವಾರು ಕಡೆ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಸರಿಯಾದ ಸೂರಿಲ್ಲದೆ ನೆನೆಯುವ ಸ್ಥಿತಿ, ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಬೆಂಚಿನ ಸಮಸ್ಯೆ, ಫ್ಯಾನ್‌ನ ಕೊರತೆ ಮತ್ತು ಶಿಕ್ಷಕರಿಗೆ ವೇತನವಿಲ್ಲದೆ ಕೊರಗುವ ಪರಿಸ್ಥಿತಿ ಹೀಗೆ ಹತ್ತಾರು ಸಮಸ್ಯೆಗಳಿಂದ ಈ ಪ್ರಗತಿ ವಿದ್ಯಾಲಯ ತೊಳಲಾಡುತ್ತಿದೆ.

ಜನ ಸಾಮಾನ್ಯರು ಬಯಸಿದರೆ ಅಸಾಧ್ಯವಾದುದನ್ನು  ಸಾಧಿಸ ಬಹುದು ಎಂಬುವುದನ್ನು ಶಿವಾಯ ಫೌಂಡೇಶನ್‌ ಕಾರ್ಯ ರೂಪದಲ್ಲಿ ನಿರೂಪಿಸುವ ಸಲುವಾಗಿ ಈಗಾಗಲೇ ಮುಂಬಯಿ, ಕರ್ಜತ್‌, ಪುಣೆಯ ಹಲವು ವ್ಯಾಪಾರ ಸ್ಥಳಗಳಲ್ಲಿ ತನ್ನ ದಾನ ಪೆಟ್ಟಿಗೆಗಳನ್ನು ಅಳವಡಿಸಿಕೊಂಡಿದೆ. ಅದರಿಂದ ಬಂದ ಹಣ ಹಾಗೂ ಈ ಸಂಸ್ಥೆಯ ಸದಸ್ಯರು ನಾವು ದುಡಿದ ಒಂದಾಂಶ ಸಮಾಜಕ್ಕೆ ಎಂಬ ಧ್ಯೇಯದೊಂದಿಗೆ  ತಮ್ಮ ತಿಂಗಳ ವೇತನದÇÉೊಂದು ಪಾಲು ನೀಡಿ  ಸೇವಾ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತಿ¨ªಾರೆ.

ಶಿವಾಯ ಫೌಂಡೇಶನ್‌ನ ಜೊತೆ ನಿಂತು, ತಂಡದ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಮತ್ತು ತಮ್ಮ ವ್ಯಾಪಾರ ಸ್ಥಳಗಲ್ಲಿ ದಾನ ಪೆಟ್ಟಿಗೆಗಳನ್ನು ಇಟ್ಟು ತಂಡದ ಮಾನವೀಯ ಕೆಲಸ  ಕಾರ್ಯಗಳಿಗೆ  ತಮ್ಮ ಸಹಕಾರ ನೀಡ ಬಯಸುವವರು ಹೆಚ್ಚಿನ ಮಾಹಿತಿಗಾಗಿ ಈ ನಂಬರನ್ನು ಸಂಪರ್ಕಿಸುವಂತೆ 9152775530 ಶಿವಾಯ ಫೌಂಡೇಶನ್‌ನ ಪದಾ ಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.