ಪೇಜಾವರ ಶ್ರೀಗಳ ರಜತ ತುಲಾಭಾರ ಸೇವೆ, ಅಭಿನಂದನೆ
Team Udayavani, Jul 31, 2018, 11:27 AM IST
ಮುಂಬಯಿ: ಐತಿಹ್ಯ ಪಂಚಮ ಪರ್ಯಾಯ ಪೂರೈಸಿದ ಯತಿವರ್ಯರ ಜೊತೆ ಕಳೆಯುವುದೇ ನಮ್ಮೆಲ್ಲರ ಸೌಭಾಗ್ಯ. ಇಡೀ ವಿಶ್ವಕ್ಕೆ ಸಂಸ್ಕಾರವನ್ನು ಕರುಣಿಸುವ ಅವರ ವಿಚಾರಗಳು ಅತ್ಯದ್ಭುತವಾದುದು. ಇಂತಹ ಸಾಧು-ಸಂತರಿಂದಲೇ ಧರ್ಮ, ಸಂಸ್ಕೃತಿಯಿಂದ ಕೂಡಿದ ರಾಷ್ಟ್ರ ನಿರ್ಮಾಣ ಸಾಧ್ಯ. ಅವರ ಆಗಾಧವಾದ ತಪಸ್ಸು, ಧರ್ಮ ನಿಷ್ಠೆಯಿಂದ ಮನುಕುಲದ ಭವಿಷ್ಯ ಫಲಿಸುವುದು. ಸ್ವಾಮೀಜಿಗಳ ತಪಸ್ಸಿನ ಫಲ ನಿಶ್ಚಿತ ರೂಪದಲ್ಲಿ ನಮಗುಳಿ ಯುವುದು. ಆ ಮೂಲಕವೇ ರಾಷ್ಟ್ರಭಕ್ತಿ ನಿರ್ಮಾಣಗೊಂಡು ರಾಮರಾಜ್ಯ ಸಾಧ್ಯವಾಗುವುದು ಎಂದು ಮಹಾರಾಷ್ಟ್ರ ಸರಕಾರದ ವಸತಿ ಮತ್ತು ಕಾರ್ಮಿಕ ಸಚಿವ ಪ್ರಕಾಶ್ ಮೆಹ್ತಾ ನುಡಿದರು.
ಜು. 28 ರಂದು ಸಂಜೆ ಸಾಂತಾ ಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿ ಪ್ರಥಮ ಬಾರಿಗೆ ಮುಂಬಯಿಗೆ ಆಗಮಿಸಿದ ಯತಿಕುಲ ಚಕ್ರವರ್ತಿ ಪೇಜಾವರ ಸ್ವಾಮಿಗಳ ಅಭಿವಂದನಾ ಸಮಿತಿ ಪೇಜಾವರ ಮಠ ಮುಂಬಯಿ ಮತ್ತು ನಗರದ ತುಳು ಕನ್ನಡಿಗ ಸಂಘ ಸಂಸ್ಥೆಗಳು ಆಯೋಜಿಸಿದ ಅಭಿನಂದನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾನಾಡಿ ಶುಭಹಾರೈಸಿದರು.
ಸಮಾರಂಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಮಹಾಪೌರ ಪ್ರೊ| ವಿಶ್ವನಾಥ್ ಮಹಾದೇಶ್ವರ್ ಮುಖ್ಯ ಅತಿಥಿಯಾಗಿದ್ದರು. ಪೇಜಾ ವರ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ವಿರಾರ್ ಶಂಕರ್ ಬಿ. ಶೆಟ್ಟಿ ಮತ್ತು ಆಲ್ಕಾರ್ಗೋ ಶಶಿಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳು ಮತ್ತು ಮಹಾ ದಾನಿಗಳು, ಭಕ್ತರು ಪೇಜಾವರ ಶ್ರೀಗಳ ರಜತ ತುಲಾಭಾರ ನೆರವೇರಿಸಿ ಸಾರ್ವಜನಿಕವಾಗಿ ಸಮ್ಮಾನಿಸಿ ಅಭಿನಂದಿಸಿ ಗೌರವಿಸಿದರು. ಮಹಾ ನಗರದಲ್ಲಿನ ಉಪಸ್ಥಿತ ತುಳು ಕನ್ನಡಿಗ ಸಂಘ-ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಪುಷ್ಪ ಗೌರವದೊಂದಿಗೆ ಶುಭಹಾರೈಸಿದರು.
ಮಹಾಪೌರ ಮಹಾದೇಶ್ವರ್ ಮಾತ ನಾಡಿ, ನಾನೂ ಮೂಲತಃ ಕರ್ನಾಟಕ ಆಂಧ್ರ ಪ್ರದೇಶದವ. ಗಡಿಭಾಗದಿಂದ ಹೊಟ್ಟೆಪಾಡಿಗಾಗಿ ಮುಂಬಯಿಗೆ ಬಂದು ನೆಲೆಸಿದವ. ಸ್ವಾಮೀಜಿ ಅವರ ಆಶೀರ್ವಾದಗಳಿಂದಲೇ ನಾನೂ ಈ ಮಟ್ಟಕ್ಕೆ ಬೆಳೆದವ. ಲೋಕಾಂತ ಪ್ರಿಯ, ಏಕತೆಯ ಹರಿಕಾರರಾದ ಪೇಜಾವರ ಶ್ರೀಗಳ ಭಗವತøಜ್ಞೆಯ ವಿಶಾಲದೃಷ್ಟಿಯುಳ್ಳ ಇವರ ದರ್ಶನ ಪಡೆಯುವುದೇ ನಮ್ಮ ಭಾಗ್ಯವೇ ಸರಿ ಎಂದರು.
ಸತ್ಯಧ್ಯಾನ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್ ವಿದ್ಯಾ ಸಿಂಹಾ ಚಾರ್ಯ ಅಭಿವಂದನಾ ನುಡಿಗಳನ್ನಾಡಿ, ಮನುಷ್ಯನಿಗೆ ಆಧ್ಯಾತ್ಮಿಕ ಬಲದ ಸಂಪತ್ತಿನ ಅಗತ್ಯ ವಿದೆ. ಸಾತ್ವಿಕವಾದ ಕಾರ್ಯದಲ್ಲಿ ತಮ್ಮ ಶಕ್ತಿಯನ್ನು ಒಲಿಸುವುದು ಶ್ರೀಗಳ ಪರಮ ಕರ್ತವ್ಯವಾಗಿದೆ. ಅವರಲ್ಲಿನ ಹರೆಯದ ಉತ್ಸಾಹ ಈಗಲೂ, ಈಗೀನ ಉತ್ಸಾಹ ಆಗಲೂ ಉಳಿಸಿಕೊಂಡಿ ದ್ದಾರೆ. ಹೇಗೆ ವಾದಿರಾಜರು 125 ವರ್ಷಗಳನ್ನು ಸಂಪನ್ನಗೊಳಿಸಿದರೋ, ಹಾಗೆಯೇ ವಿಶ್ವೇಶತೀರ್ಥರೂ ಆಯು ರಾರೋಗ್ಯವಾಗಿ ಸುದೀರ್ಘ ಆಯುಷ್ಯ ಕಾಣುವಂತಾಗಲಿ. ಶ್ರೀಗಳ ಮಾರ್ಗದರ್ಶನ ಭಕ್ತಾದಿಗಳಿಗೆ ಅನುಕೂಲಕರ ಮತ್ತು ಹಿತವಾಗಿರಲಿ. ಅಖಂಡ ಹಿಂದೂ ಸಮಾಜಕ್ಕೆ, ಹಿಂದೂ ಹೃದಯ ಸಾಮ್ರಾಟ ಗುರುವಾಗಿರಲಿ ಎಂದು ಶುಭಹಾರೈಸಿದರು.
ಸ್ಥಳೀಯ ಬಿಲ್ಲವರ ಭವನ ದಿಂದ ಶ್ರೀಗಳನ್ನು ಭವ್ಯ ಶೋಭಾಯಾತ್ರೆಯಲ್ಲಿ ಮಠಕ್ಕೆ ಭಕ್ತಿಪೂರ್ವಕ ವಾಗಿ ಬರಮಾಡಿಕೊಳ್ಳಲಾಯಿತು. ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಸ್ವಾಗತ ಗೋಪುರಕ್ಕೆ ಶ್ರೀಗಳು ಭೂಮಿಪೂಜೆ ನೆರವೇರಿಸಿ ಬಳಿಕ ಗೋವರ್ಧನಾ ಮೆಡಿಕಲ್ ರಿಸರ್ಚ್ ಕೇಂದ್ರವನ್ನು ಉದ್ಘಾಟಿಸಿದರು. ಭವ್ಯ ಸಮಾರಂಭದಲ್ಲಿ ಕೈರಬೆಟ್ಟು ವಿಶ್ವನಾಥ ಭಟ್, ಕೃಷ್ಣರಾಜ ತಂತ್ರಿ ಅತಿಥಿಗಳನ್ನು ಗೌರವಿಸಿದರು. ಶಾಖೆಯ ಪ್ರಬಂಧಕ ರಾದ ಹರಿ ಭಟ್, ನಿರಂಜನ್ ಗೋಗೆr, ವಿದ್ವಾಂಸರು. ಪುರೋಹಿತರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ. ಎಸ್. ರಾವ್ ಸ್ವಾಗತಿಸಿದರು. ಆನಂದತೀರ್ಥ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್ ನಾಗರಹಳ್ಳಿ ಪ್ರಹ್ಲಾದ್ ಆಚಾರ್ಯ ಪ್ರಸ್ತಾವನೆಗೈದರು.
ಶಾಖೆಯ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಅತಿಥಿ, ಮಹಾನ್ ದಾನಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ರಾಮಕುಂಜ ವಂದಿಸಿದರು.
ಮುಂಬಯಿ ಭಾರತೀಯರ ಆತ್ಮವಾಗಿದೆ. ಇದು ನೂರಾರು ಸಂತರನ್ನು, ವಿದ್ವಾಂಸರು, ಧುರೀಣರು ಕಂಡ ಭೂಮಿ. ನಾನು ಯತಿಕುಲ ಚಕ್ರವರ್ತಿ ಎಂದು ಹೇಳುವಷ್ಟು ಸಾಧಕನಲ್ಲ. ಬರೀ ಭಗವಂತನ ಸೇವಕನಾಗಿದ್ದೇನೆ. ಯತಿಕುಲ ಬಿರುದು ಭಕ್ತರ ಒಂದು ಸಂಕೇತವಷ್ಟೇ. ನನ್ನನ್ನು ಹೊಗಳುವ ಭರದಲ್ಲಿ ಇದ್ದದ್ದನ್ನೂ ಇಲ್ಲದ್ದನ್ನೂ ಹೇಳಿ ಪ್ರಶಂಸಿಸಿದ್ದಾರೆ. ಇದ್ದದ್ದನ್ನು ಸೇವೆಗೆ ಮುಡುಪಾಗಿಸುವೆ. ಇಲ್ಲದ್ದನ್ನು ಹಾಗೂ ಹೇಳಿದ್ದನ್ನು ಪಡೆಯಲು ಪ್ರಯತ್ನಿಸುತ್ತೇನೆ. ಭಗವಂತ ಆಯುಷ್ಯ ಪ್ರಾಪ್ತಿಸಿದ ಫಲವಾಗಿ 5 ಪರ್ಯಾಯ ಸಂಪನ್ನಗೊಳಿಸುವಂತಾಯಿತು. ಸಾರ್ವಜನಿಕ ಸಮ್ಮಾನಕ್ಕಿಂತ ಭಗವದ್ಭಕ್ತರ ಪ್ರೀತಿ-ವಿಶ್ವಾಸವೇ ಪ್ರಧಾನವಾದದ್ದು. ಅದು ಚಿರಕಾಲ ಉಳಿಯುವುದು.
-ಪೇಜಾವರ ಶ್ರೀ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup: 21 ವರ್ಷದ ರೋಹಿತ್ ನೇಪಾಲ ನಾಯಕ
T20 World Cup: ಯುಎಸ್ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳಿಗೆ ಅಮುಲ್ ಪ್ರಾಯೋಜನೆ
Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ