ಮಳೆಯ ನಡುವೆ ಮಲೆ ಸ್ವಾಮಿಯ ದರ್ಶನ 


Team Udayavani, Aug 2, 2018, 4:07 PM IST

2-agust-19.jpg

ಪ್ರತಿ ವರ್ಷದಂತೆ ಈ ಬಾರಿಯೂ 20 ಸದಸ್ಯರನ್ನೊಳಗೊಂಡ ನಮ್ಮ ಶಬರಿಮಲೆ ಯಾತ್ರಾ ತಂಡ ಜು. 19ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಾಲಾಧಾರಣೆ ನಡೆಸಿ, ಅತ್ತಾವರದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಇರುಮುಡಿ ಕಟ್ಟಿ ರಾತ್ರಿ ಫ‌ಲಾಹಾರ ಸೇವಿಸಿ ಮಂಗಳೂರು ರೈಲು ನಿಲ್ದಾಣದ ಮೂಲ ಚೆಂಗನ್ನೂರು ಕಡೆಗೆ ಯಾತ್ರೆ ಪ್ರಾರಂಭಿಸಿದೆವು. ದಾರಿಯುದ್ದಕ್ಕೂ ಸುರಿದ ಭಾರೀ ಮಳೆಯಿಂದಾಗಿ ರೈಲು 2 ಗಂಟೆ ವಿಳಂಬವಾಗಿ ಮುಂಜಾನೆ 4 ಗಂಟೆಗೆ ಚೆಂಗನ್ನೂರು ರೈಲು ನಿಲ್ದಾಣ ತಲುಪಿದಾಗ ಮುಂಜಾನೆಯ ತಣ್ಣನೆಯ ಚಳಿಯ ಸ್ವಾಗತ ನಮಗಾಯಿತು.

ಇಲ್ಲಿ ಮೊದಲೇ ಗೊತ್ತು ಪಡಿಸಿದ ವಾಹನದಲ್ಲಿ ಸುಮಾರು 90 ಕಿ.ಮೀ. ದೂರವಿರುವ ಪಾಂಬಾ ನದಿ ತೀರಕ್ಕೆ ಪ್ರಯಾಣ ನಡೆಸಿದೆವು. ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ, ಅಯ್ಯಪ್ಪ ಸ್ವಾಮಿಯನ್ನು ಮನದಲ್ಲೇ ನೆನೆಯುತ್ತಾ ಸಾಗಿತು ನಮ್ಮ ತಂಡ.

ಶಬರಿಮಲೆಯಲ್ಲಿ ಸತತ ಜಡಿಮಳೆಯಾಗುತ್ತಿದೆ ಎಂದು ಸುದ್ದಿ ತಿಳಿದಿದ್ದ ನಾವು ಮಳೆ ಎದುರಿಸಲು ರೈನ್‌ಕೋಟ್‌ ತಂದಿದ್ದೆವು. ಆದರೆ, ಅದೃಷ್ಟವಶಾತ್‌ ನಮ್ಮ ಪ್ರಯಾಣದುದ್ದಕ್ಕೂ ಮಳೆ ಯಾವುದೇ ತೊಂದರೆ ನೀಡದೆ ಅಚ್ಚರಿ ಮೂಡಿಸಿತ್ತು. ಎರಡು ದಿನಗಳ ಹಿಂದೆ ಚೆಂಗನ್ನೂರು ಪರಿಸರದಲ್ಲಿ ಸುರಿದ ಮಳೆಯ ಬಗ್ಗೆ ಹಾಗೂ ಮುಖ್ಯ ರಸ್ತೆಗೆ ನೆರೆ ನೀರು ನುಗ್ಗಿದ್ದನ್ನು ನಮ್ಮ ವಾಹನದ ಚಾಲಕ ರಸವತ್ತಾಗಿ ವರ್ಣಿಸುವಾಗ ಮನದಲ್ಲಿ ಆತಂಕದ ಮಧ್ಯೆಯೇ ನಮ್ಮಲ್ಲಿ ಸಮಾಧಾನದ ನಿಟ್ಟುಸಿರು!.

ತುಂಬಿ ತುಳುಕಿದ ಪಾಂಬಾ ನದಿ
ಕೇರಳದಾದ್ಯಂತ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಂಪಾ ನದಿ ತುಂಬಿ ತುಳುಕುತ್ತಿತ್ತು. ಹಿಂದಿನ ದಿನವಷ್ಟೇ ನದಿಯಲ್ಲಿ ಸ್ನಾನಕ್ಕಿಳಿದ ಓರ್ವ ನೀರಿನಲ್ಲಿ ಕೊಚ್ಚಿ ಹೋದ ವಿಷಯ ಕೇಳಿದ ನಾವು ಕೊರೆಯುವ ಚಳಿಯ ನಡು ವೆಯೂ ತಣ್ಣನೆಯ ನೀರಿನಲ್ಲಿ ಬಹಳ ಜಾಗರೂಕತೆಯಿಂದಲೇ ಸ್ನಾನ ಮುಗಿಸಿದೆವು. ನದೀ ತೀರದಿಂದ ಹೊರಟ ನಮ್ಮ ತಂಡ ಕಾಲ್ನಡಿಗೆಯ ಮೂಲಕ ಶ್ರೀ ಕನ್ನಿಮೂಲ ಗಣಪತಿ, ಗಣೇಶ ಬೆಟ್ಟ, ನೀಲಿಮಲೆ, ಅಪ್ಪಚಿಮೇಡು ಇಪ್ಪಾಚಿ ಮೇಡು, ಶಬರಿ ಪೀಠದ ದರ್ಶನ ಪಡೆದು ಸುಮಾರು ಒಂದೂವರೆ ಗಂಟೆ ದಟ್ಟ ಕಾನನದ ನಡುವೆ ಪ್ರಕೃತಿಯೊಂದಿಗೆ ಅನುಸಂಧಾನ ನಡೆಸಿದ ಅನುಭೂತಿಯೊಂದಿಗೆ ಶ್ರೀ ಅಯ್ಯಪ್ಪ ಸನ್ನಿಧಾನ ತಲುಪಿದೆವು.

ಮಳೆಗಾಲವಾದ್ದರಿಂದ ಭಕ್ತರ ಸಂಖ್ಯೆ ಬಹಳ ಕಡಿಮೆ ಇತ್ತು. ಶ್ರೀ ಅಯ್ಯಪ್ಪ ಸನ್ನಿಧಾನದ ಮುಂಭಾಗದಲ್ಲಿನ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು (ಪದಿನೆಟ್ಟಾಂಪಡಿ) ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷದೊಂದಿಗೆ ಏರಿದೆವು. ಯಾವುದೇ ನೂಕುನುಗ್ಗಲು ಇಲ್ಲದೇ ಇದ್ದುದರಿಂದ ಸಾವಕಾಶವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದೆವು. ದೇವರಿಗೆ ತುಪ್ಪದ ಅಭಿಷೇಕವೂ ಸಾಂಗವಾಗಿಯೇ ನೆರವೇರಿತು. ದೇವರ ದರ್ಶನ ಪಡೆದು ಸ್ವಲ್ಪ ಸಮಯ ಸಿಕ್ಕಿ ದ್ದರಿಂದ ಅಲ್ಲಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ಬಳಿಕ ಮರಳಿ ಬೆಟ್ಟವಿಳಿದು ಬರುವಾಗ ಮನದಲ್ಲೊಂದು ಸಂತೃಪ್ತಿ ನೆಲೆಯಾಗಿತ್ತು. ಊಟ ಉಪಾಹಾರವನ್ನು ಮುಗಿಸಿ ಜುಲೈ 20ರಂದು ರಾತ್ರಿ ಕಾಯಂಕುಳಂ ರೈಲು ನಿಲ್ದಾಣದ ಮೂಲಕ ಹೊರಟು ಜುಲೈ 21ರ ಬೆಳಗ್ಗೆ ಮಂಗಳೂರಿಗೆ ತಲುಪಿತು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ 442 ಕಿ.ಮೀ. ದೂರದಲ್ಲಿದೆ.
· ಮಂಗಳೂರಿನಿಂದ ಚೆಂಗನ್ನೂರುವರಗೆ ರೈಲು, ಬಸ್‌ ಸೌಲಭ್ಯವಿದೆ.
· ಚೆಂಗನ್ನೂರಿನಿಂದ 90 ಕಿ.ಮೀ. ದೂರದ ಪ್ರಯಾಣ.
· ಖಾಸಗಿ ವಾಹನ ಮೊದಲೇ ಬುಕ್‌ ಮಾಡಿದರೆ ಉತ್ತಮ.
· ಪಾಂಬಾದಲ್ಲಿ ಊಟ, ವಸತಿ ಸೌಲಭ್ಯವಿದೆ. 

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.