ನಾಶಿಕ್ : ಬಾಲಕ ಚಿರತೆಗೆ ಆಹಾರವಾಗುವುದನ್ನು ತಪ್ಪಿಸಿದ ತಾಯಿ, ಅಜ್ಜಿ
Team Udayavani, Aug 3, 2018, 4:48 PM IST
ನಾಶಿಕ್ : ಹೊಲದಲ್ಲಿ ಆಟವಾಡಿಕೊಂಡಿದ್ದ ಮೂರು ವರ್ಷ ಪ್ರಾಯದ ಬಾಲಕನು ಚಿರತೆಗೆ ಆಹಾರವಾಗುವುದನ್ನು ಆತನ ತಾಯಿ ಮತ್ತು ಅಜ್ಜಿ ಎಂಟೆದೆಯಿಂದ ಹೋರಾಡಿ ಪಾರುಗೊಳಿಸಿದ ಘಟನೆ ನಾಶಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ಕೇತಕಿ ಗ್ರಾಮದಲ್ಲಿ ನಡೆದಿದೆ.
ಬಾಲಕನು ಹೊಲದಲ್ಲಿ ಆಟವಾಡಿಕೊಂಡಿದ್ದಾಗ ಅದೆಲ್ಲಿಂದಲೋ ಛಂಗನೆ ಹಾರಿ ಬಂದ ಹೆಣ್ಣು ಚಿರತೆಯೊಂದು ಬಾಲಕನನ್ನು ಕಚ್ಚಿ ತನ್ನ ಬಾಯಲ್ಲಿ ಹಿಡಿದುಕೊಂಡಿತು. ಆಗ ಆತನ ಆಕ್ರಂದನ ಕೇಳಿಸಿಕೊಂಡ ಆತನ ತಾಯಿ ಮತ್ತು ಅಜ್ಜಿ ಧಾವಿಸಿ ಬಂದು ಚಿರತೆ ವಿರುದ್ಧ ಹೋರಾಡಿ ಬಾಲಕನನ್ನು ರಕ್ಷಿಸಿದರು. ಇವರ ಬೊಬ್ಬೆ ಕೇಳಿ ಆಸುಪಾಸಿನ ಜನರೂ ಧಾವಿಸಿ ಬಂದು ನೆರವಾದರು.
ಚಿರತೆ ಬಾಲಕನನ್ನು ಬಿಟ್ಟು ಅರಣ್ಯದೊಳಗೆ ಓಡಿ ಹೋಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?