ನಿತ್ಯಾನಂದ ಸ್ವಾಮಿ ಪ್ರಕರಣ: ಮತ್ತೆ ವಿಚಾರಣೆ ಆರಂಭ
Team Udayavani, Aug 9, 2018, 1:57 PM IST
ರಾಮನಗರ: ತಾಲೂಕಿನ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಐವರು ಅನುಯಾಯಿಗಳ ವಿರುದ್ಧ ಇರುವ ವಿವಿಧ ಪ್ರಕರಣಗಳ ವಿಚಾರಣೆ ಸಂಬಂಧ ದೂರುದಾರ ಲೆನಿನ್ ವಿಚಾರಣೆಯನ್ನು ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆರಂಭಿಸಿತು.
ಬೆಳಗ್ಗೆ ಮತ್ತು ಮಧ್ಯಾಹ್ನದ ಎರಡು ಪಾಳಿಯಲ್ಲಿ ನ್ಯಾ.ಗೋಪಾಲ ಕೃಷ್ಣ ರೈ, ದೂರುದಾರ ಲೆನಿನ್ (ನಿತ್ಯಾನಂದ ಸ್ವಾಮಿ ಮಾಜಿ ಕಾರು ಚಾಲಕ) ಅವರನ್ನು ಇನ್ ಕ್ಯಾಮೆರಾ (ಗೌಪ್ಯ ವಿಚಾರಣೆ) ವಿಚಾರಣೆ ನಡೆಸಿದರು. ಸುದೀರ್ಘ ವಿಚಾರಣೆ ನಂತರ ನ್ಯಾಯಾಧೀಶರು ಮುಂದಿನ ವಿಚಾರಣೆ ಯನ್ನು ಆ.16ಕ್ಕೆ ಮುಂದೂಡಿದರು. ನಿತ್ಯಾನಂದ ಸ್ವಾಮಿ, ಗೋಪಾಲ ಶೀಲಂ ರೆಡ್ಡಿ ಮತ್ತು ರಾಗಿಣಿ ವಿಚಾರಣೆಗೆ ಗೈರಾಗಿದ್ದರು.
ಸಿಐಡಿ ಪರ ವಕೀಲ ಎಸ್.ವಡವಡಗಿ ಸುದ್ದಿಗಾರರೊಂದಿಗೆ ಮಾತನಾಡಿ, ಸೆಷನ್ಸ್ ಕೋರ್ಟ್ನಲ್ಲಿ ಪ್ರಕರಣ ದಾಖಲಾದ ನಂತರ ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ತೀರ್ಪು ನೀಡಿತ್ತು. ಆದರೆ, ಪ್ರಮುಖ ಆರೋಪಿ ನಿತ್ಯಾನಂದ ಸ್ವಾಮಿ ಮತ್ತಿತರರು ಗೈರಾಗುತ್ತಿದ್ದರು. ಪ್ರಕರಣದ ವಿಚಾರಣೆ ತಡವಾಗಬಾ ರದು ಎಂದು ನ್ಯಾಯಾಧೀಶರು ವಿಚಾರಣೆ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದಾಗ ಅದನ್ನು ಮನ್ನಿಸಿ ವಿಚಾರಣೆ ಮುಂದುವರಿ ಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿದೆ. ವಿಚಾರಣೆ ತ್ವರಿತವಾಗಿ ನಡೆಯಬೇಕೆಂಬುದು ನ್ಯಾಯಾಲಯ ಹಾಗೂ ದೂರುದಾರರ ಉದ್ದೇಶವಾಗಿದೆ ಎಂದರು. 2ನೇ ಆರೋಪಿ ಧನಶೇಖರನ್ ಹಾಗೂ 4ನೇ ಆರೋಪಿ ಜಮುನಾರಾಣಿ ಮಾತ್ರವೇ ವಿಚಾರಣೆ ವೇಳೆ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!