ಪಿಂಚಣಿ ಬಾಕಿ ಹಣ ಬಿಟ್ಹಾಕಿ


Team Udayavani, Aug 9, 2018, 4:04 PM IST

9-agust-20.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ವಿಚಾರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿ, ಹಲವು ಸುತ್ತಿನ ಹೋರಾಟಕ್ಕೂ ವೇದಿಕೆಯಾಗಿತ್ತು. ವಿಧಾನಸಭೆ ಚುನಾವಣೆ ವಿಷಯವಾಗಿಯೂ ಬಳಕೆಯಾಗಿತ್ತು. ಅಂದಾಜು 105 ಕೋಟಿ ರೂ. ಬಾಕಿ ಹಣಕ್ಕೆ ಕೊನೆಗೂ ಎಳ್ಳು ನೀರು ಬಿಡುವಂತಾಗಿದೆ.

ಪಿಂಚಣಿ ಬಾಕಿ ಹಣ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರಾಜಕೀಯ ಸಮರ ಸೃಷ್ಟಿಸಿತ್ತು. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಹಣ ನೀಡದೆ ಕಾಂಗ್ರೆಸ್‌ ಸರಕಾರ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿ ಬಿಜೆಪಿಯವರು, ಮುಖ್ಯಮಂತ್ರಿ, ಸಚಿವರ ವಿರುದ್ಧ ಹಲವು ಸುತ್ತಿನ ಹೋರಾಟ ಕೈಗೊಂಡಿದ್ದರೂ ಇದೀಗ ಅಂತಿಮವಾಗಿ ಬಾಕಿ ಹಣದ ಆಸೆ ಬಿಟ್ಟು ಬಿಡಿ ಎಂಬ ಸಂದೇಶವನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಸಾರಿದ್ದಾರೆ.

121 ಕೋಟಿ ರೂ. ಬಾಕಿ ಇತ್ತು: ಕಳೆದ ಏಳೆಂಟು ವರ್ಷಗಳಿಂದ ಪಿಂಚಣಿ ಬಾಕಿ ಸಮಸ್ಯೆ ಸೃಷ್ಟಿಯಾಗಿತ್ತು. ಸುಮಾರು 7-8 ಕೋಟಿ ರೂ.ಗಳ ಪಿಂಚಣಿ ಬಾಕಿ ಇದ್ದಾಗಲೇ ಕೆಲವರು ಇದರ ಬಗ್ಗೆ ಎಚ್ಚರಿಸಿದ್ದರಾದರೂ, ಅಧಿಕಾರಿಗಳು, ಪಾಲಿಕೆ ಆಡಳಿತ ಮಂಡಳಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸರಕಾರ ನೀಡಲಿದೆ, ತಂದರಾಯಿತು ಎಂಬ ಉದಾಸೀನತೆ ತೋರಿದ್ದರು.

ವರ್ಷದಿಂದ ವರ್ಷಕ್ಕೆ ಪಿಂಚಣಿ ಬಾಕಿ ಬಾಲ ಬೆಳೆದು ಅದು 100 ಕೋಟಿ ರೂ. ದಾಟಿದಾಗಲೇ ಎಲ್ಲರಿಗೂ ಇದರ ಬಿಸಿ ತಗುಲಿತ್ತು. ಸಾಮಾನ್ಯ ನಿಧಿ ಹಣ ಪಿಂಚಣಿ ಬಾಬತ್ತಿಗೆ ಹೋಗುತ್ತಿದೆ ಎಂದು ಅರಿತಾಗ, ಸರಕಾರಿದಂದ ಪಿಂಚಣಿ ಬಾಕಿ ಪಡೆಯುವ ಧ್ವನಿ ಹೆಚ್ಚತೊಡಗಿತ್ತು. ಪಿಂಚಣಿ ಬಾಕಿ ಮೊತ್ತ 121 ಕೋಟಿ ರೂ. ದಾಟಿತ್ತು. ಪಾಲಿಕೆ ಸರ್ವಪಕ್ಷ ಸದಸ್ಯರು ಹಾಗೂ ಅವಳಿ ನಗರ ಶಾಸಕರು ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ತೆರಳಿ ಮನವಿ ಮಾಡಿದ್ದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪಿಂಚಣಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಬಾಕಿ ಹಣ ಬಾರದನ್ನು ಖಂಡಿಸಿ ಮಹಾಪೌರರಾಗಿದ್ದ ಡಿ.ಕೆ. ಚವ್ಹಾಣ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಿದ್ದಾಗ ಶಿಷ್ಟಾಚಾರದಂತೆ ಅವರ ಸ್ವಾಗತಕ್ಕೆ ತೆರಳದೆ ಪ್ರತಿಭಟನೆ ತೋರಿದ್ದರು. ಇದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಸರಕಾರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದಲ್ಲಿ 2017ರ ಜೂನ್‌ನಿಂದ ಪಿಂಚಣಿ ಹಣವಾಗಿ ಅಂದಾಜು 16 ಕೋಟಿ ರೂ. ಬಿಡುಗಡೆ ಮಾಡಿ ಕೈ ತೊಳೆದುಕೊಂಡಿತ್ತು. ಪಾಲಿಕೆಗೆ ಬರಬೇಕಾದ 105 ಕೋಟಿ ರೂ. ಬಾಕಿ ರೂಪದಲ್ಲೇ ಉಳಿದಿತ್ತು.

ಬಾಕಿ ಹಣ ಆಸೆ ಬಿಟ್ಟು ಬಿಡಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ಪಿಂಚಣಿ ಬಾಕಿ ಹಣದ ಪ್ರಕರಣಕ್ಕೆ ತೆರೆ ಎಳೆದಿದ್ದು, ಹಿಂದಿನ ಬಾಕಿ ನೀಡಿಕೆ ಅಸಾಧ್ಯ. ಅದರ ಆಸೆ ಬಿಟ್ಟುಬಿಡಿ. ಬೇರೆ ಅಭಿವೃದ್ಧಿ ಯೋಜನೆಗೆ ಪ್ರಸ್ತಾವನೆ ನೀಡಿ ಅನುದಾನ ನೀಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಹಣ ಬರುವ ಆಸೆಗೆ ಇತಿಶ್ರೀ ಹಾಡಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಸರಕಾರ ಇದ್ದ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದ್ದು, ಹಲವು ಗೊಂದಲಗಳನ್ನು ಸುತ್ತಿಕೊಂಡ ಬಾಕಿ ಹಣದ ಪಾವತಿಗೆ ಖಂಡಿತವಾಗಿಯೂ ಮುಂದಾಗದು. ರೈತರ ಸಾಲ ಮನ್ನಾದ ಹಣ ಹೊಂದಾಣಿಕೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಾಕಿ ಹಣಕ್ಕೆ ಸುತಾರಾಂ ಒಪ್ಪುವುದಿಲ್ಲ ಎಂಬ ವಾಸ್ತವದ ಸಂಗತಿ ಅರಿತಿರುವ ಪಾಲಿಕೆ ಆಡಳಿತ ಮಂಡಳಿಯೂ ಸಹ ಪಿಂಚಣಿ ಬಾಕಿ ಆಸೆಯನ್ನು ಕೈ ಬಿಡಲು ಮುಂದಾಗಿದೆ.

ಸರಿದೂಗಿಸುವ ಸವಾಲು
ಪಿಂಚಣಿ ಬಾಕಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಲಿಕೆಯವರಿಗೆ ಇದೀಗ ಬಾಕಿ ಹಣ ಬಾರದು ಎಂಬ ವಾಸ್ತವ ಅರಿವಿಗೆ ಬಂದಿದೆ. ಆದರೆ, ಈಗಾಗಲೇ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವಾಗಿ ನೀಡಿದ ಅಂದಾಜು 105 ಕೋಟಿ ರೂ. ಗಳನ್ನು ಸರಿದೂಗಿಸುವುದು ಯಾವ ಬಾಬತ್ತಿನಿಂದ ಎಂಬ ಸವಾಲು ಎದುರಾಗಿದೆ. ಪಾಲಿಕೆ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆಸ್ತಿಕರ ಹೊರತು ಪಡಿಸಿದರೆ ಜಾಹೀರಾತು, ಭೂ ಬಾಡಿಗೆ, ವಾಣಿಜ್ಯ ಮಳಿಗೆಗಳು, ಕಟ್ಟಡ ಪರವಾನಗಿ ಶುಲ್ಕ, ನೀರಿನ ಬಾಕಿ ಹೀಗೆ ವಿವಿಧ ವಿಭಾಗಗಳಲ್ಲಿ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಕೆಲವೊಂದು ಬಾಬತ್ತುಗಳಿಂದ ನಯಾ ಪೈಸೆಯು ಆದಾಯ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದರಿಲಿ, ನೌಕರರಿಗೆ ವೇತನ ನೀಡುವುದಕ್ಕೂ ಸಂಕಷ್ಟ ಪಡುವ ಸ್ಥಿತಿ ಇದೆ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Anjali Ambigera Case; Protest by BJP workers in Hubli

Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.