ಜೆ.ಪಿ.ನಗರ : ಬರ್ತ್ ಡೇ ಮುಗಿಸಿ ಬರುತ್ತಿದ್ದ ಯುವಕನ ಕೊಚ್ಚಿ ಕೊಲೆ
Team Udayavani, Aug 16, 2018, 12:35 PM IST
ಬೆಂಗಳೂರು: ನಗರದ ಮರಿಯಪ್ಪನಪಾಳ್ಯದಲ್ಲಿ ಬುಧವಾರ ರಾತ್ರಿ ಯುವಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ.
ಜೆ.ಪಿ.ನಗರದ ನಿವಾಸಿ 28 ರ ಹರೆಯದ ಪ್ರತಾಪ್ ಹತ್ಯೆಗೀಡಾದ ಯುವಕ. ಮರಿಯಪ್ಪನ ಪಾಳ್ಯದ 3 ನೇ ಕ್ರಾಸ್ನಲ್ಲಿರುವ ಸ್ನೇಹಿತ ಅರುಣ್ ಹುಟ್ಟುಹಬ್ಬಕ್ಕಾಗಿ ಮನೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆ ನಡೆದಿದೆ.
ಜ್ಞಾನ ಭಾರತಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.