ರಾಮದುರ್ಗ: ರೈತರ ಹೊಲಗಳಿಗೆ ಕೃಷಿ ಅಧಿಕಾರಿ ಭೇಟಿ
Team Udayavani, Aug 18, 2018, 5:31 PM IST
ರಾಮದುರ್ಗ: ರಾಜ್ಯದಲ್ಲಿ ಪ್ರಥಮ ಬಾರಿಗೆ ಗೋವಿನ ಜೋಳದ ಬೆಳೆಯಲ್ಲಿ ಕಾಣಿಸಿಕೊಂಡ ಲದ್ದಿ ಹುಳುವಿನ ಬಾದೆ ಹಿನ್ನೆಲೆಯಲ್ಲಿ ಉಪ ಕೃಷಿ ನಿರ್ದೇಶಕ ಎಚ್.ಡಿ. ಕೊಳೇಕರ ತಾಲೂಕಿನ ಹಲಗತ್ತಿಯ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಯ ಸರ್ವೇಕ್ಷಣೆ ನಡೆಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಯುತ್ತಿರುವ ಗೋವಿನ ಜೋಳದ ಬೆಳೆಯಲ್ಲಿ ಸೈನಿಕ ಹುಳು ಬಾದೆ ಕಂಡು ಬಂದಿದ್ದು, ಕಾರಣ ರೈತರು ಎಮ್ ಮೆಕ್ಟಿನ್ ಬೆಂಜೋಯೇಟ್ ಎಂಬ ಕೀಟ ನಾಶಕವನ್ನು ಪ್ರತಿ ಟ್ಯಾಂಕಿಗೆ 5 ಗ್ರಾಂ ಬೆರೆಯಿಸಿ ಸಿಂಪಡಿಸುವ ಮೂಲಕ ಕೀಟದ ಹತೋಟಿಗೆ ತರಬಹುದು. ಅಲ್ಲದೇ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ. 50 ಸಹಾಯಧನದಲ್ಲಿ ಈ ಕೀಟನಾಶಕ ಲಭ್ಯವಿದ್ದು, ರೈತರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಕೀಟವು ರಾತ್ರಿ ಹೊತ್ತು ಎಲೆ ಮತ್ತು ಸುಳಿಯಲ್ಲಿ ಹಾನಿ ಮಾಡಿ ದಿನದ ಸಮಯದಲ್ಲಿ ಮಣ್ಣಿನ ಕೊರಕಲು ಮತ್ತು ಸುಳಿಯ ಒಳಭಾಗದಲ್ಲಿ ವಿಶ್ರಮಿಸುವದರಿಂದ ರಾಸಾಯನಿಕ ಸಿಂಪರಣೆಯನ್ನು ಸಾಯಂಕಾಲ ಅಥವಾ ಬೆಳಗಿನ ಜಾವದಲ್ಲಿ ಮಾಡುವದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಾದ ಆರ್.ವಿ. ದಾಸರ, ಎ.ಡಿ. ಅಂಗಡಿ, ಬಿ.ಕೆ. ಮುಚಖಂಡಿ, ವಿ.ಎಚ್. ದಾಸರ, ಗೋವಿಂದರಡ್ಡಿ ಜ್ಯಾಯನ್ನವರ, ರೈತರಾದ ಹನಮಂತ ಹೊಸಕೋಟಿ, ಬಿ.ವೈ. ನಡಮನಿ, ಎಸ್.ಎಚ್. ಕಡಕೋಳ, ಮಾರುತಿ ಧರಿಗೋಣಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್