ಸ್ಲಂ ಶೌಚಾಲಯಗಳ ಸ್ಥಿತಿ ಶೋಚನೀಯ


Team Udayavani, Aug 21, 2018, 12:01 PM IST

slum.jpg

ಬೆಂಗಳೂರು: ಮುರಿದ ಬಾಗಿಲು, ಒಡೆದ ನೀರಿನ ಪೈಪುಗಳು, ವಿದ್ಯುತ್‌ ಕಾಣದ ಬಲ್ಬ್ಗಳು, ದೂರದವರೆಗೂ ಹರಡುವ ದುರ್ವಾಸನೆ, ನಸುಕಿನ ನಾಲ್ಕು ಗಂಟೆಗೇ ಸಾಲುಗಟ್ಟಿ ನಿಲ್ಲುವ ಮಹಿಳೆಯರು… ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಕೊಳೆಗೇರಿ ಪ್ರದೇಶಗಳಲ್ಲಿರುವ ಸಮುದಾಯ ಶೌಚಾಲಯಗಳ ಸದ್ಯದ ಸ್ಥಿತಿ ಇದು.

ಇನ್ನು ಇಂತಹ ಶೌಚಾಲಯ ಬಳಸುತ್ತಿರುವ ಮಹಿಳೆಯರು ಮತ್ತು ಮಕ್ಕಳು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರೇತರ ಸಂಘ ಸಂಸ್ಥೆಗಳು (ಎನ್‌ಜಿಒ) ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳಲ್ಲಿ ಪಾಲಿಕೆಯಿಂದ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಹೊಣೆ ವಹಿಸಿಕೊಳ್ಳದಕಾರಣ ಶೌಚಾಲಯಗಳು ಪಾಳುಬಿದ್ದಿವೆ.

ಬಾಗಿಲುಗಳಿಲ್ಲದ ಕಾರಣದಿಂದ ಹಗಲು ಹೊತ್ತು ಮಹಿಳೆಯರು ಶೌಚಾಲಯ ಬಳಸಲು ಸಾಧ್ಯವೇ ಇಲ್ಲ. ಓಕಳಿಪುರ ಬಳಿಯ ಅಂಬೇಡ್ಕರ್‌ ನಗರ ಕೊಳೆಗೇರಿಯಲ್ಲಿ ಸುಮಾರು 250 ಮನೆಗಳಿದ್ದು, ದಿನಗೂಲಿ ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅಲ್ಲಿರುವುದು ಒಂದೇ ಒಂದು ಸಮುದಾಯ ಶೌಚಾಲಯ! ಅದೂ ಸಂಪೂರ್ಣ ಹಾಳಾಗಿದೆ. ನೀರು, ವಿದ್ಯುತ್‌ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ ಜನರಿಗೆ ಬಯಲಲೇ ಶೌಚಾಲಯವಾಗಿದೆ.

ಇದು ಕಾಯಿಲೆಗೆ ಕಾರಣ: ನಿರ್ವಹಣ ಸಮರ್ಪಕವಾಗಿಲ್ಲದೆ ಕಾರಣ ಸಮುದಾಯ ಶೌಚಾಲಯಗಳ ಇಡೀ ಆವರಣ ಅನೈರ್ಮಲ್ಯದಿಂದ ಕೂಡಿರುವುದು ಒಂದೆಡೆಯಾದರೆ, ಸ್ಲಂ ನಿವಾಸಿಗಳು ಸ್ಯಾನಿಟರಿ ನ್ಯಾಪ್‌ಕೀನ್‌ಗಳನ್ನು ಶೌಚಾಲಯಗಳಲ್ಲೇ ಎಸೆಯುತ್ತಾರೆ. ಇಂತಹ ಶೌಚಾಲಯಗಳನ್ನು ಬಳಸುವುದರಿಂದ ಮಹಿಳೆಯರು ಹಾಗೂ ಮಕ್ಕಳು ಚಿಕೂನ್‌ಗುನ್ಯಾ, ಡೆಂಘೀ, ಮಲೇರಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಮೂತ್ರದ ಸೋಂಕು ಹೆಚ್ಚಿನ ಜನರಲ್ಲಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಪಾಲಿಕೆಗೆ ಬೇಕಿರುವುದು ಹಣ ಮಾತ್ರ: ಕರ್ನಾಟಕ ರಾಜ್ಯ ಕೊಳೆಗೇರಿ ಅಭಿವೃದ್ಧಿ ನಿಗದ ಮಾಹಿತಿಯಂತೆ ನಗರದಲ್ಲಿ 597 ಕೊಳೆಗೇರಿಗಳಿವೆ. ಆ ಪೈಕಿ 388 ಅಧಿಕೃತ ಹಾಗೂ 209 ಅನಧಿಕೃತ. ಒಂದೊಂದು ಸ್ಲಂನಲ್ಲೂ ಕನಿಷ್ಠ 100 ಮನೆಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಿಸದ ಕಾರಣ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ. ಪಾಲಿಕೆಯಿಂದ ನಿರ್ಮಿಸಿರುವ ಸಮುದಾಯ ಶೌಚಾಲಯಗಳಲ್ಲಿ ಹಣ ಪಡೆಯುತ್ತಿದ್ದರೂ, ಸ್ವತ್ಛತೆಗೆ ಗಮನಹರಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಎನ್‌ಜಿಒಗಳಿಂದ ಸಮೀಕ್ಷೆ: ನಗರದ ಕೊಳೆಗೇರಿಗಳಲ್ಲಿನ ಸಮುದಾಯ ಶೌಚಾಲಯಗಳ ಸ್ಥಿತಿ ತಿಳಿಯುವ ಉದ್ದೇಶದಿಂದ ಸೆಂಟರ್‌ ಫಾರ್‌ ಅಡ್ವೋಕೆಸಿ ಅಂಡ್‌ ರೀಸರ್ಚ್‌, ಸಹಾಯ, ಹಸಿರು ದಳ ಹಾಗೂ ರೇಡಿಯೊ ಅಕ್ಟೀವ್‌ ಸಿಆರ್‌ 90.4 ಎಂಬ ಸರ್ಕಾರೇತರ ಸಂಸ್ಥೆಗಳು ಸುಮಾರು 15ಕ್ಕೂ ಹೆಚ್ಚು ಕೊಳೆಗೇರಿಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿವೆ. ಶೌಚಾಲಯಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವುದು ಈ ವೇಳೆ ಕಂಡುಬಂದಿದೆ. ಅನೈರ್ಮಲ್ಯದಿಂದಾಗಿ ರೋಗಗಳು ಹರಡುತ್ತಿವೆ ಎಂದು ಎನ್‌ಜಿಒಗಳು ತಿಳಿಸಿವೆ.

ಸಮೀಕ್ಷೆ ನಡೆಸಿದ ಕೊಳೆಗೇರಿಗಳು ಮಾಹಿತಿ: ಅಂಬೇಡ್ಕರ್‌ ನಗರ (ಓಕಳಿಪುರ), ಬೆನ್ನಿಗಾನಹಳ್ಳಿ, ಜೆ.ಸಿ.ರಸ್ತೆ 2ನೇ ಅಡ್ಡರಸ್ತೆ, ಕಲಾಸಿಪಾಳ್ಯ, ವಿನೋಬಣನಗರ, ಜೆ.ಸಿ.ರಸ್ತೆ (ಧರ್ಮರಾಜಸ್ವಾಮಿ ದೇವಸ್ಥಾನ ವಾರ್ಡ್‌), ದೊಡ್ಡಮಾವಳ್ಳಿ, ಟ್ಯಾನರಿ ರಸ್ತೆ, ಬೈಯಪ್ಪನಹಳ್ಳಿ, ಕಾರ್ಟ್‌ ರಸ್ತೆ, ಜೋಲಿ ಮಹಲ್‌, ಕಾಡಿರಪ್ಪ ರಸ್ತೆ, ನಾಗಾವಾರ, ಸುಮ್ಮನಹಳ್ಳಿ, ಅಂಜನಪ್ಪ ಗಾರ್ಡನ್‌.

ನಗರದಲ್ಲಿ ಶೌಚಾಲಯಗಳ ಪರಿಸ್ಥಿತಿಯ ಕುರಿತು ಸಮೀಕ್ಷೆ ನಡೆಸಿ ಸ್ವತ್ಛ ಭಾರತ ಅಭಿಯಾನದ ಸಿಇಒಗೆ ವರದಿ ನೀಡಿದ್ದು, ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಮುದಾಯ ಶೌಚಾಲಯಗಳ ನಿರ್ವಹಣೆ ಕುರಿತು ಕೊಳೆಗೇರಿಯ ಸ್ವಯಂ ಸೇವಕರಿಗೆ ತರಬೇತಿ ನೀಡುವ ಅಗತ್ಯವಿದೆ. 
-ಪ್ರಭಾನಂದ ಹೆಗಡೆ, ಸೆಂಟರ್‌ ಫಾರ್‌ ಅಡ್ವೋಕೆಸಿ ಆ್ಯಂಡ್‌ ರಿಸರ್ಚ್‌

ನಮ್ಮಲ್ಲಿ ಅತ್ಯಂತ ಕೆಟ್ಟದಾಗಿರುವ ಶೌಚಾಲಯಗಳಿವೆ. ಇವುಗಳ ಬಳಕೆಯಿಂದ ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿವೆ. ಹಣ ಪಾವತಿಸಿ ಕೆಟ್ಟ ಶೌಚಾಲಯಗಳನ್ನು ಬಳಸಲು ಇಚ್ಛಿಸದ ಹೆಚ್ಚಿನ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ.
-ರಾಧಾ, ಅಂಬೇಡ್ಕರ್‌ ನಗರ ಕೊಳೆಗೇರಿ ನಿವಾಸಿ

ಸಮುದಾಯ ಶೌಚಾಲಯಗಳಿಗೆ ಕೆಲವೊಮ್ಮೆ ದುರ್ವಾಸನೆಯಿಂದ ಕೂಡಿದ ನೀರು ಬರುತ್ತದೆ. ದನ್ನು ತಡೆಯುವ ಜತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಕೋರಿದ್ದೇವೆ. ಆದರೆ, ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
-ಅಲವೇಲಮ್ಮ, ಬೈಯಪ್ಪನಹಳ್ಳಿ ಕೊಳೆಗೇರಿ ನಿವಾಸಿ

ಸಮೀಕ್ಷೆಯ ಪ್ರಮುಖ ಶಿಫಾರಸ್ಸುಗಳು
-ಹಾಲಿ ಇರುವ ಸಮುದಾಯ ಶೌಚಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು.
-ಪಾಲಿಕೆ, ಸರ್ಕಾರದಿಂದ ಸಮುದಾಯ ಹಾಗೂ ವಯಕ್ತಿಕ ಶೌಚಾಲಯ ನಿರ್ಮಿಸಿಕೊಡುವುದು.
-ಅಗತ್ಯ ನೀರು ಪೂರೈಕೆ ಮಾಡುವ ಮೂಲಕ ಅನೈರ್ಮಲಿಕರಣ ತಡೆಯುವುದು.
-ಜಲಮಂಡಳಿ, ಸ್ಲಂ ಬೋರ್ಡ್‌ ಜತೆ ಪಾಲಿಕೆ ಸಮನ್ವಯ ಸಾಧಿಸಿ ಆರೋಗ್ಯ ಸುಧಾರಣೆ ಮುಂದಾಗುವುದು.
-ಸಮುದಾಯ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಕೊಳೆಗೇರಿ ನಿವಾಸಿಗಳಿಗೇ ವಹಿಸುವುದು.

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.