ಕನೇರಿ ಮಠದಿಂದ ಕೇರಳಕ್ಕೆ 250 ಟನ್‌ ಸಾಮಗ್ರಿ ನೆರವು


Team Udayavani, Aug 23, 2018, 3:10 PM IST

23-agust-19.jpg

ಹುಬ್ಬಳ್ಳಿ: ಕಂಡರಿಯದ ಪ್ರವಾಹದಿಂದ ಚೆಲ್ಲಾಪಿಲ್ಲಿಯಾಗಿರುವ ಕೇರಳದ ಸಂತ್ರಸ್ತರಿಗೆ, ಅದರಲ್ಲೂ ಆದಿವಾಸಿಗಳು ಹಾಗೂ ಗ್ರಾಮೀಣ ಜನತೆಗೆ ಅಗತ್ಯ ನೆರವಿಗೆ ಮುಂದಾಗಿರುವ ಕನೇರಿಮಠ, 100 ಟನ್‌ ಮೇವು, ಪಶು ಆಹಾರ ಸೇರಿದಂತೆ ಸುಮಾರು 250 ಟನ್‌ ಸಾಮಗ್ರಿ, ವೈದ್ಯಕೀಯ ತಂಡದ ನೆರವು ನೀಡುತ್ತಿದೆ.

ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ದಗಿರಿ(ಕನೇರಿ)ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕೇರಳದಲ್ಲಿನ ಆದಿವಾಸಿಗಳು ಹಾಗೂ ಹಳ್ಳಿಗಳ ಜನರಿಗೆ ಪರಿಹಾರ ಸಾಮಗ್ರಿ ವಿತರಿಸಲಾಗುತ್ತದೆ. ವಿಶೇಷವಾಗಿ ಜಾನುವಾರುಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಸ್ವಾಮೀಜಿಯವರ ಕರೆ ಮೇರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತರು ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಕಡೆಯಿಂದ ಶ್ರೀಮಠಕ್ಕೆ ಸುಮಾರು 250 ಟನ್‌ನಷ್ಟು ದೇಣಿಗೆ ಹರಿದು ಬಂದಿದೆ.

ಕೇರಳದ ನೆರೆ ಸಂತ್ರಸ್ತರಿಗೆ ಸದ್ಯಕ್ಕೆ ಬೇಕಾಗಿರುವುದು ಏನು, ಅಲ್ಲಿನ ಸ್ಥಿತಿ ಏನಿದೆ, ಯಾವ ಪ್ರದೇಶಕ್ಕೆ ಸಮರ್ಪಕ ಸಾಮಗ್ರಿಗಳು ಮುಟ್ಟಿಲ್ಲ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಾಗಿದ್ದು, ಅಲ್ಲಿನ ಸ್ಥಿತಿ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಶ್ರೀಮಠದಿಂದ ಪರಿಹಾರ ಸಾಮಗ್ರಿ ವಿತರಣೆ ಕೈಗೊಳ್ಳಲಾಗುತ್ತದೆ. ನೆರೆ ಸಂತ್ರಸ್ತ ಕೇರಳದಲ್ಲಿ ಆದಿವಾಸಿಗಳು, ದಲಿತರು ಹೆಚ್ಚಾಗಿ ವಾಸುಸುವ ಪ್ರದೇಶ, ಹಳ್ಳಿಗಳಿಗೆ ಪರಿಹಾರ ಸಾಮಗ್ರಿಗಳು ಸಮರ್ಪಕ ರೀತಿಯಲ್ಲಿ ತಲುಪಿಲ್ಲ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಸಂಗ್ರಹಿಸಿದ ಸುಮಾರು 250 ಟನ್‌ನಷ್ಟು ಸಾಮಗ್ರಿಗಳನ್ನು ಆ ಪ್ರದೇಶಗಳಲ್ಲೇ ವಿತರಣೆ ಮಾಡಲು ನಿರ್ಧರಿಸಲಾಗಿದೆ.

25 ಟ್ರಕ್‌ಗಳಲ್ಲಿ ಸಾಗಣೆ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ತರಿಗೆ ನೆರವು ನೀಡಿಕೆ ನಿಟ್ಟಿನಲ್ಲಿ ಅಗತ್ಯ ದೇಣಿಗೆ ನೀಡುವಂತೆ ಭಕ್ತ ಸಮೂಹಕ್ಕೆ ವಾಟ್ಸ್‌ ಆ್ಯಪ್‌ ಸಂದೇಶ ರವಾನಿಸಿದ್ದರು. ಸಂಪರ್ಕ ಇರುವ ಗ್ರಾಮಗಳಿಗೆ ಹೇಳಿ ಕಳುಹಿಸಿದ್ದರು. ನಿರೀಕ್ಷೆ ಮೀರಿ ಸ್ಪಂದಿಸಿದ ಭಕ್ತರು ಹಾಗೂ ಸಾರ್ವಜನಿಕರು ಸುಮಾರು 250 ಟನ್‌ ನಷ್ಟು ವಿವಿಧ ಸಾಮಗ್ರಿಗಳನ್ನು ನೀಡಿದ್ದು, ಶ್ರೀಮಠಕ್ಕೆ ಇನ್ನು ಸಹ ದೇಣಿಗೆ ಹರಿದು ಬರತೊಡಗಿದೆ.

ಕೊಡಗಿಗೆ ಸದ್ಯಕ್ಕೆ ಸಾಮಗ್ರಿಗಳ ಅವಶ್ಯಕತೆ ಇಲ್ಲ ಎಂಬ ಅಲ್ಲಿನ ಕೆಲ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶ್ರೀಮಠಕ್ಕೆ ಸಂಪರ್ಕ ಇರುವವರ ಅನಿಸಿಕೆ ಹಿನ್ನೆಲೆಯಲ್ಲಿ ಸಂಗ್ರಹಗೊಂಡ ಸಾಮಗ್ರಿಗಳನ್ನು ಕೇರಳಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೇರಳಕ್ಕೆ ಸುಮಾರು 8 ಟನ್‌ನಷ್ಟು ಅಕ್ಕಿ, ಬೇಳೆ, ಗೋಧಿ ಹಾಗೂ ಬಿಸ್ಕಿಟ್‌, 1 ಟ್ರಕ್‌ ತಾಡಪತ್ರಿ,1 ಟ್ರಕ್‌ ಮಕ್ಕಳಿಗೆ ನೋಟ್‌ಬುಕ್‌, ಲೇಖನ ಸಾಮಗ್ರಿ,1 ಟ್ರಕ್‌ ಬ್ರಶ್‌, ಪೇಸ್ಟ್‌, ಫಿನಾಯಿಲ್‌, ಸಾಬೂನು, 1 ಟ್ರಕ್‌ ಬಟ್ಟೆ, 1 ಟ್ರಕ್‌ನಷ್ಟು ಬ್ಲಾಂಕೆಟ್‌, 50 ಟನ್‌ ಮೇವು ಹಾಗೂ 50 ಟನ್‌ನಷ್ಟು ಪಶು ಆಹಾರ ಹೀಗೆ ಒಟ್ಟು 25 ಲಾರಿಗಳಲ್ಲಿ ಇವುಗಳನ್ನು ಸಾಗಿಸಲಾಗುತ್ತಿದ್ದು, ಬುಧವಾರ ಆರು ಲಾರಿಗಳು ಕೇರಳಕ್ಕೆ ಪ್ರಯಾಣ ಬೆಳೆಸಿವೆ. 

ಜಾನುವಾರುಗಳಿಗೆ ಆದ್ಯತೆ: ಕೇರಳದಲ್ಲಿ ಪ್ರವಾಹದಿಂದಾಗಿ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದ್ದು, ಪ್ರವಾಹಕ್ಕೆ ಸಿಲುಕಿ ಕೆಲವೊಂದು ಗ್ರಾಮಗಳಲ್ಲಿ ಸುಮಾರು 300-400 ಜಾನುವಾರುಗಳು ಮೃತಪಟ್ಟಿವೆ, ಮೇವು ದೊರೆಯದೆ ಇನ್ನಷ್ಟು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬ ಸಮೀಕ್ಷೆ ವರದಿ ಅನ್ವಯ, ಜಾನುವಾರುಗಳಿಗೆ ಮೇವು, ಪಶು ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಅಳಿದುಳಿದ ಜಾನುವಾರುಗಳಿಗೆ ಮೇವು ದೊರೆಯದ್ದರಿಂದ ಪ್ರವಾಹದಲ್ಲಿ ಮುಳಗಿ ಇದೀಗ ಮುಕ್ತವಾಗಿರುವ ಬಾಳೆ ಗಿಡಗಳನ್ನೇ ಕಡಿದು ಅದರ ಕಾಂಡವನ್ನು ಜಾನುವಾರುಗಳಿಗೆ ಮೇವು ರೂಪದಲ್ಲಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆಗೆ ಶ್ರೀಮಠದಲ್ಲಿ ಮೇವು ವಿತರಣೆ ಮಾಡಲಾಗುತ್ತದೆ.

ಮನೆ ಮನೆಗೆ ವಿತರಣೆ: ಶ್ರೀ ಮಠದಿಂದ ತೆಗೆದುಕೊಂಡು ಹೋದ ಸಾಮಗ್ರಿಗಳನ್ನು ಸಂಗ್ರಹಕ್ಕೆ ಕೇರಳದ ಕಾಯನಕೋಲನ್‌ನಲ್ಲಿ ರಾಮಕೃಷ್ಣಮಠದವರು ನೀಡಿದ ಜಾಗದಲ್ಲಿ ಕೇಂದ್ರ ಆರಂಭಿಸಲಾಗಿದ್ದು, ವೈನಾಡುನಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಂದ ಸಂಗ್ರಹಗೊಂಡ ಸುಮಾರು 250 ಟನ್‌ನಷ್ಟು ಸಾಮಗ್ರಿಗಳನ್ನು ಆದಿವಾಸಿಗಳು ಹಾಗೂ ಗ್ರಾಮೀಣ ಜನತೆಗೆ ನೇರವಾಗಿ ತಲುಪಿಸುವ ಕಾರ್ಯ ನಡೆಯಲಿದೆ. ವೈನಾಡು ಅತ್ಯಂತ ತೀವ್ರ ನೆರೆ ಸಂತ್ರಸ್ತ ಪ್ರದೇಶವಾಗಿದ್ದು, ಅಲ್ಲಿನ ಗಡಿ ಹಳ್ಳಿಗಳು ಹೆಚ್ಚು ಹಾನಿಗೀಡಾಗಿದ್ದು, ಆ ಪ್ರದೇಶದಲ್ಲಿ ಸಾಮಗ್ರಿ ವಿತರಿಸಲಾಗುತ್ತದೆ.

ಎರಡು ವೈದ್ಯರ ತಂಡ: ಸಂತ್ರಸ್ತ ಜನರಿಗೆ ವೈದ್ಯಕೀಯ ನೆರವು ಒದಗಿಸುವ ನಿಟ್ಟಿನಲ್ಲಿ ಶ್ರೀ ಕಾಡಸಿದ್ದೇಶ್ವರ ಮಠದ ಆಸ್ಪತ್ರೆಯ ಎರಡು ವೈದ್ಯಕೀಯ ತಂಡಗಳು ಔಷಧಿಗಳೊಂದಿಗೆ ತೆರಳಿವೆ. ಮೊದಲ ತಂಡದಲ್ಲಿ ಆರು ಜನ ವೈದ್ಯರು ಹಾಗೂ ಸಿಬ್ಬಂದಿ ಇದ್ದರೆ, ಇನ್ನೊಂದು ತಂಡದಲ್ಲಿ 8 ಜನ ವೈದ್ಯರು ಸಿಬ್ಬಂದಿ ಇದ್ದಾರೆ. 

ಕೇರಳದ ನೆರೆ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯದ ನಿಟ್ಟಿನಲ್ಲಿ ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ಸಾಮಗ್ರಿ ತಲುಪಿಲ್ಲ ಎಂಬ ಸಮೀಕ್ಷೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಅಲ್ಲಿಗೆ ಆದ್ಯತೆ ನೀಡಲಾಗಿದೆ. ಅಲ್ಲಿನ ಆದಿವಾಸಿಗಳು ಆಫ್ರಿಕಾ ಆದಿವಾಸಿಗಳ ಮಾದರಿಯಲ್ಲಿ ಬದುಕುತ್ತಿದ್ದಾರೆ. ಮೊದಲು ಅವರಿಗೆ ಸಾಮಗ್ರಿ ನೀಡಲಾಗುತ್ತದೆ. ಕೊಡಗಿಗೂ ಸಾಮಗ್ರಿ ನೀಡಿಕೆ ಉದ್ದೇಶ ಶ್ರೀಮಠದ್ದಾಗಿದ್ದು, ಅಲ್ಲಿನ ಕೆಲವರು ಸಾಮಗ್ರಿ ನಿರೀಕ್ಷೆಗೆ ಮೀರಿ ಬಂದಿದೆ ಎಂದು ಹೇಳಿದ್ದರಿಂದ ಮೊದಲಿಗೆ ಕೇರಳಕ್ಕೆ ಹೋಗುತ್ತಿದ್ದೇವೆ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ದಗಿರಿ

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.