ಪೊರಕೆ ಹಿಡಿದು ನಗರದ ಚರಂಡಿ ಸ್ವತ್ಛತೆಗೆ ಮುಂದಾದ ಪೊಲೀಸರು
Team Udayavani, Aug 28, 2018, 4:51 PM IST
ಯಾದಗಿರಿ: ನಿತ್ಯ ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುವ ಪೊಲೀಸರು ಸೋಮವಾರ ಬೆಳಗ್ಗೆ ಪೊರಕೆ ಹಿಡಿದು ಮುಖ್ಯ
ರಸ್ತೆಗಿಳಿದಿದ್ದು ಜನರಲ್ಲಿ ಅಚ್ಚರಿಗೊಳಿಸಿತು. ಯಾದಗಿರಿ ನಗರದ ಮುಖ್ಯ ಬೀದಿಗಳಾದ ಸುಭಾಷ್ ವೃತ್ತ, ಚಿತ್ತಾಪೂರ ರಸ್ತೆ ಸೇರಿದಂತೆ ಹಲವೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಚರಂಡಿ ಸ್ವತ್ಛಗೊಳಿಸಿದರು. ವೈದ್ಯರು ಹಾಗೂ ನಗರಸಭೆ ಪೌರಾಯುಕ್ತರು ಕೂಡ ಸ್ವತ್ಛತಾ ಕಾರ್ಯಕ್ಕೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್, ನಮ್ಮ ಜಿಲ್ಲೆ
ಇತರೆ ಜಿಲ್ಲೆಗಳಿಗೆ ಸ್ವತ್ಛತೆಗೆ ಮಾದರಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ವ್ಯಾಪಾರಸ್ಥರು
ತಪ್ಪದೇ ನಗರಸಭೆ ಗುಂಡಿಗಳಲ್ಲಿ ಕಸ ಹಾಕಿ ಸ್ವತ್ಛತೆ ಕಾಪಾಡಬೇಕು ಎಂದು ಹೇಳಿದರು.
ನಗರವನ್ನು ಸ್ವತ್ಛವಾಗಿಡಲು ಕಸ ಸಂಗ್ರಹಿಸಲು ನಿತ್ಯ ನಗರಸಭೆ ವಾಹನಗಳು ಬಡಾವಣೆಗಳಿಗೆ ತೆರಳುತ್ತಿದೆ. ಬಹುತೇಕರು ವಾಹನಗಳಲ್ಲಿ ಕಸ ಹಾಕುತ್ತಿಲ್ಲ. ಕಸ ಬೇರ್ಪಡಿಸಿ ಪ್ರತಿಯೊಬ್ಬರು ಕಡ್ಡಾಯವಾಗಿ ನಗರಸಭೆ
ವಾಹನಗಳಿಗೆ ಕಸ ಹಾಕಿ ನಗರ ಸ್ವತ್ಛತೆಗೆ ಮುಂದಾಗಬೇಕು.
ಸಂಗಪ್ಪ ಉಪಾಸೆ,ನಗರಸಭೆ ಪೌರಾಯುಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ