ಒಂದುತಿಂಗಳ ವೇತನ, ಚಿನ್ನದಸರ ನೆರೆ ಸಂತ್ರಸ್ತರಿಗೆ ನೀಡಿದ ಶಮೀಮಾ ಟೀಚರ್


Team Udayavani, Aug 29, 2018, 1:55 AM IST

shami-teacher-28-8.jpg

ಕಾಸರಗೋಡು: ಕೇರಳದಲ್ಲಿ ಹಿಂದೆಂದೂ ಕಾಣದ ನೆರೆಯಿಂದ ತತ್ತರಿಸುವ ಸಂತ್ರಸ್ತರಿಗೆ ದೇಶದ ವಿವಿಧ ಭಾಗಗಳಿಂದ ನೆರವು ಹರಿದು ಬರುತ್ತಿದ್ದು, ಟೀಚರೊಬ್ಬರು ತನ್ನ ಒಂದು ತಿಂಗಳ ವೇತನ ಮತ್ತು ಚಿನ್ನದ ಸರವನ್ನು ನೀಡಿ ಮಾದರಿಯಾಗಿದ್ದಾರೆ. ಕಣ್ಣೂರು ತಲಶ್ಯೇರಿ ಇರುವಂಗಾಡ್‌ ಸರಕಾರಿ ಹೆಣ್ಮಕ್ಕಳ ಹೈಯರ್‌ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಶಮೀಮಾ ಟೀಚರ್‌ ತನ್ನ ಒಂದು ತಿಂಗಳ ವೇತನದ ಜತೆಗೆ ತನ್ನ ಕತ್ತಿನಲ್ಲಿದ್ದ 16.280 ಗ್ರಾಂ. ಚಿನ್ನದ ಸರವನ್ನು ದೇಣಿಗೆಯಾಗಿ ನೀಡಿದ್ದಾರೆ.

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ‘ಒನ್‌ ಮಂತ್‌ ಫಾರ್‌ ಕೇರಳ’ ಅಭಿಯಾನದ ಅಂಗವಾಗಿ ಈ ಟೀಚರ್‌ ಒಂದು ತಿಂಗಳ ವೇತನ ಮತ್ತು ಚಿನ್ನದ ಸರವನ್ನು ಸಂತ್ರಸ್ತರ ನಿಧಿಗೆ ಹಸ್ತಾಂತರಿಸಿದರು. ಮಾಹೆ ಪಳ್ಳೂರು ನಿವಾಸಿಯಾದ ಶಮೀಮಾ ಟೀಚರ್‌ ಈ ಮೂಲಕ ಮಾದರಿಯನ್ನು ಸೃಷ್ಟಿಸಿದ್ದಾರೆ. ತನ್ನ ಕೈಯಲ್ಲಿ ಹಣವಾಗಿ ನೀಡಲು ತತ್ಕಾಲ ಇಲ್ಲದಿರುವುದರಿಂದ ಚಿನ್ನದ ಸರವನ್ನು ನೀಡಿದೆ ಎಂದು ವಿದ್ಯಾರ್ಥಿಗಳ ಪ್ರೀತಿಯ ಸುವೋಲಜಿ ಅಧ್ಯಾಪಿಕೆಯಾದ ಶಮೀಮಾ ಹೇಳಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಶಮೀಮಾ ಟೀಚರ್‌ ಡೆಪ್ಯೂಟಿ ಕಲೆಕ್ಟರ್‌ ಸಿ.ಎಂ.ಗೋಪಿನಾಥ್‌ ಅವರಿಗೆ ತನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಹಸ್ತಾಂತರಿಸಿದರು. ಹಲವು ವರ್ಷಗಳಿಂದ ಕತ್ತಿನಲ್ಲಿದ್ದ ಈ ಚಿನ್ನದ ಸರ ತೆಗೆದು ನೀಡಿದ ಬಗ್ಗೆ ಜಿಲ್ಲಾಧಿಕಾರಿ ಶ್ಲಾಘಿಸಿದ್ದಾರೆ. ಕೇರಳ  ಈ ಹಿಂದೆ ಎಂದೂ ಕಾಣದ ನೆರೆಯಿಂದ ಕೇರಳದ ಸ್ಥಿತಿ ದಯನೀಯವಾಗಿದೆ. ನೆರೆಯಿಂದ ತತ್ತರಿಸಿರುವ ಸಂತ್ರಸ್ತರಿಗೆ ಹರಿದು ಬರುತ್ತಿರುವ ನೆರವು ಈ ಹಿಂದೆ ಎಂದೆಂದೂ ಕಂಡಿರಲಿಲ್ಲ. ನೆರವಿನ ಮಹಾಪೂರವೇ ಹರಿದು ಬರುತ್ತಿದೆ ಎಂದು ಸಿ.ಎಂ.ಗೋಪಿನಾಥ್‌ ಅವರು ಹೇಳಿದರು. ಈ ಸಂದರ್ಭದಲ್ಲಿ ಫಿನಾನ್ಸ್‌ ಆಫೀಸರ್‌ ಕೆ.ಪಿ.ಮನೋಜ್‌ ಅವರು ಉಪಸ್ಥಿತರಿದ್ದರು.

ಕೇರಳದ ನೆರೆಯ ಅವಸ್ಥೆಯನ್ನು ಕಂಡಾಗ ಈ ಕೊಡುಗೆ ದೊಡ್ಡ ಸಾಧನೆಯಲ್ಲ. ತನ್ನಿಂದ ಸಾಧ್ಯವಾದ ನೆರವನ್ನು ಮಾತ್ರವೇ ನೀಡಿದ್ದೇನೆ. ಕೇರಳದ ಲಕ್ಷಾಂತರ ಮಂದಿ ನೆರೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಹೋದರ ಸಹೋದರಿಯರಿಗೆ, ಮಕ್ಕಳಿಗೆ ಈ ಕೊಡುಗೆ ಏನೇನು ಸಾಲದು. ಆದರೂ ತನ್ನಿಂದ ಸಣ್ಣ ನೆರವು ನೀಡಲು ಸಾಧ್ಯವಾಗಿದೆ.
– ಶಮೀಮಾ ಟೀಚರ್‌

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.