ಇಲಿ ಕಚ್ಚಿದ್ದಕ್ಕೆ ರೈಲ್ವೆ ಇಲಾಖೆ ಪರಿಹಾರ!
Team Udayavani, Aug 30, 2018, 9:30 AM IST
ಸೇಲಂ: ಅಚ್ಚರಿಯಾದರೂ ಇದನ್ನು ನಂಬಲೇಬೇಕು. ರೈಲಿನಲ್ಲಿ “ಮೂಷಿಕ’ ಕಚ್ಚಿ, ಆದ ಹಾನಿ ಬಗ್ಗೆ ಪ್ರಯಾಣಿಕರು ಗ್ರಾಹಕರ ವೇದಿಕೆಗೆ ದೂರು ನೀಡಿದ್ದಕ್ಕೆ ರೈಲ್ವೆ ಇಲಾಖೆ 25,000 ರೂ. ಪರಿಹಾರ ನೀಡಲು ಆದೇಶಿಸಿದೆ. ಪ್ರಕರಣ ಸಂಬಂಧ ಗಾಹಕರ ವೇದಿಕೆ 2 ಸಾವಿರ ರೂ.ಗಳನ್ನು ವೈದ್ಯಕೀಯ ಚಿಕಿತ್ಸೆಗೆಂದು ಹೆಚ್ಚುವರಿಯಾಗಿ ನೀಡಲು ನಿರ್ದೇಶಿಸಿದೆ. ಇಲಿಯಿಂದಾಗಿ ಪ್ರಯಾಣಿಕ ವೆಂಕಟಾಚಲಮ್ ಮಾನಸಿಕ ಕಿರಿಕಿರಿ ಅನುಭವಿಸಿದ್ದಾರೆ. ಇಲಿ ಕಚ್ಚಿದ್ದರಿಂದ ವೈದ್ಯಕೀಯ ಚಿಕಿತ್ಸೆಗೆ 2000 ರೂ., ದಾವೆಗಾಗಿ 5,000 ರೂ. ಖರ್ಚು ಮಾಡಿದ್ದು, ಅದನ್ನೂ ಭರಿಸಬೇಕೆಂದು ಹೇಳಿದ್ದಾಗಿ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಆರ್.ವಿ. ದೀನದಯಾಳನ್ ತಿಳಿಸಿದ್ದಾರೆ.