ಭೀಮಾ ಕೋರೇಗಾಂವ್: ಈಗ ಮಾವೋವಾದಿ-ಕಾಂಗ್ರೆಸ್ ನಂಟು ಬಹಿರಂಗ
Team Udayavani, Sep 1, 2018, 5:03 PM IST
ಹೊಸದಿಲ್ಲಿ : ಭೀಮಾ ಕೋರೇಗಾಂವ್ ಹಿಂಸೆಗೆ ಸಂಬಂಧಿಸಿದಂತೆ ಭಾರತ ಸರಕಾರದ ವಿರುದ್ಧ ಮಾವೋವಾದಿಗಳು ನಡೆಸಿದ್ದ ಸಂಚಿನ ಎರಡನೇ ಅತೀ ದೊಡ್ಡ ಅನಾವರಣದ ಇನ್ನೊಂದು ವರದಿಯಲ್ಲಿ ಸಿಪಿಐಎಂ ನಗರ-ನಾಯಕತ್ವದ ಉನ್ನತ ಕಾಮ್ರೇಡ್ಗಳು ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಅನೇಕ ಸಭೆ ನಡೆಸಿರುವುದು ಇದೀಗ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾವೋ ಉನ್ನತ ಕಾಮ್ರೇಡ್ಗಳು 2017ರ ನವೆಂಬರ್ನಿಂದ 2018ರ ಮೇ ವರೆಗಿನ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದಾಗಿ ಈ ವರದಿಯು ತಿಳಿಸಿದೆ.
ದಿನಗಳ ಹಿಂದಷ್ಟೇ ಗುಪ್ತಚರ ದಳಕ್ಕೆ ದೊರಕಿದ್ದ ಮಾಹಿತಿಗಳ ಪ್ರಕಾರ ಮಾವೋವಾದಿಗಳು ಭಾರತ ಸರಕಾರದ ವಿರುದ್ಧ ನಡೆಸಿದ ಸಂಚಿನ ಭಾಗವಾಗಿ ಅನೇಕ ಸಂಘಟನೆಗಳೊಂದಿಗೆ ಮ್ಯಾನ್ಮಾರ್ನಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ತರಬೇತಿಯ ಪಡೆಯುವ ನಿಟ್ಟಿನಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದುದಾಗಿ ಬಹಿರಂಗವಾಗಿತ್ತು.
ಅದಾಗಿ ಇದೀಗ ಹೊಸ ವರದಿಯಲ್ಲಿ ಮಾವೋ ಉನ್ನತ ಕಾಮ್ರೇಡ್ಗಳು ಕಾಂಗ್ರೆಸ್ನ ಕೆಲವು ನಾಯಕರೊಂದಿಗೆ 2018ರ ಮೇ ತಿಂಗಳ ವರೆಗೂ ನಿರಂತರ ಸಂಪರ್ಕದಲ್ಲಿದ್ದರೆನ್ನುವುದು ಬಹಿರಂಗವಾಗಿದೆ.
ಕಾಂಗ್ರೆಸ್ ಮತ್ತು ಸಿಪಿಐಎಂ ನ ಅನೇಕ ನಾಯಕರ ನಡುವಿನ ಮಹತ್ವದ ರಹಸ್ಯ ಸಭೆಗಳು ಮುಂಬಯಿ ಮತ್ತು ದಿಲ್ಲಿಯಲ್ಲಿ ನಡೆದಿದ್ದು ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ನಡೆಸುವುದಕ್ಕೆ ಕಾನೂನು ಮತ್ತು ಹಣಕಾಸು ನೆರವು ಪಡೆಯುವುದು ಈ ಸಭೆಗಳ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.
ಆದರೆ ಈ ಮಾತುಕತೆಗಳು ಸರಕಾರವನ್ನು ಉರುಳಿಸುವ ಅಥವಾ ಅದರ ವಿರುದ್ಧ ಸಶಸ್ತ್ರ ಹೋರಾಟವನ್ನು ಕೈಗೊಳ್ಳುವ ಸಂಬಂಧದ್ದಾಗಿರಲಿಲ್ಲ ಎಂದು ವರದಿಯು ಸ್ಪಷ್ಟೀಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ