ಸಿಂಗಾಪುರದಿಂದ ತಷ್ಮಾಗೆ ವಸತಿ ನೆರವು
Team Udayavani, Sep 5, 2018, 6:00 AM IST
ಬೆಂಗಳೂರು: ಕೊಡಗಿನಲ್ಲಿ ಉಂಟಾಗಿದ್ದ ಗುಡ್ಡ ಕುಸಿತದಿಂದ ಮನೆ, ಆಸ್ತಿ-ಪಾಸ್ತಿ, ಕ್ರೀಡಾ ದಾಖಲೆ ಕಳೆದುಕೊಂಡಿದ್ದ ತ್ರೋಬಾಲ್ ಆಟಗಾರ್ತಿ 23 ವರ್ಷದ ತಷ್ಮಾ ಮುತ್ತಪ್ಪ ಅವರಿಗೆ ವಿದೇಶದಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಈ ಕುರಿತಂತೆ ಉದಯವಾಣಿ ಆ. 29ರಂದು “ತ್ರೋಬಾಲ್ ಆಟಗಾರ್ತಿ ಬೀದಿಪಾಲು’ ಎಂಬ ಶೀರ್ಷಿಕೆಯಡಿ ಮುಖ ಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ರಾಜ್ಯ ಮಾತ್ರವಲ್ಲದೇ ಸಿಂಗಾಪುರ, ದುಬಾೖನಲ್ಲಿ ನೆಲೆಸಿರುವ ರಾಜ್ಯದ ಜನತೆ ಕೂಡ ಸಹಾಯ ಮಾಡಿದ್ದಾರೆ. ಸಿಂಗಾಪುರದಲ್ಲಿರುವ ಕೊಡವ ಕುಟುಂಬ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜಂಟಿಯಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ (ಎಫ್ಎಂಸಿ) ಕಾಲೇಜು ರಸ್ತೆಯ ಬಳಿ ಬಾಡಿಗೆ ಮನೆಯೊಂದನ್ನು ಹುಡುಕಿ ತಷ್ಮಾಗೆ ನೀಡಿದೆ. ಇದಕ್ಕೆ ಬೇಕಿದ್ದ ಮುಂಗಡ ಹಣ 50 ಸಾವಿರ ರೂ.ವನ್ನು ಈಗಾಗಲೇ ಪಾವತಿ ಮಾಡಲಾಗಿದೆ. ಮನೆಯ ತಿಂಗಳ 10 ಸಾವಿರ ರೂ. ಬಾಡಿಗೆಯನ್ನು ಕೊಡಲು ಇನ್ನೊಬ್ಬರು ಒಪ್ಪಿದ್ದಾರೆ.
ಸೋಮವಾರ ನಿರಾಶ್ರಿತ ಕೇಂದ್ರಕ್ಕೆ ವಿದಾಯ ಹೇಳಿದ್ದೇನೆ. ಸಿಂಗಾಪುರದ ದಾನಿಗಳು ನೀಡಿರುವ ಬಾಡಿಗೆ ಮನೆಗೆ ಅಪ್ಪ-ಅಮ್ಮನ ಜತೆಗೆ ಬಂದಿದ್ದೇನೆ. ಉದಯವಾಣಿ ಬಳಗಕ್ಕೆ ಜೀವನದುದ್ದಕ್ಕೂ ಆಭಾರಿಯಾಗಿದ್ದೇನೆ.
– ತಷ್ಮಾ, ತ್ರೋಬಾಲ್ ಆಟಗಾರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ