ಜಾಗೃತಿಗಾಗಿಕವನ ರಚಿಸಿದಕಾನ್ಸ್ಟೆಬಲ್
Team Udayavani, Sep 6, 2018, 11:28 AM IST
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ಕುರಿತು ಸಂಚಾರ ಪೊಲೀಸರು ಹಮ್ಮಿಕೊಳ್ಳುತ್ತಿರುವ ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳಿಗೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು “ಜಾಗೃತಿ ಕವನ’ ರಚಿಸುವ ಮೂಲಕ ಸಾಥ್ ನೀಡಿದ್ದಾರೆ.
“ಚಲಿಸುತ್ತಿವೆ ವಾಹನಗಳು ಶರವೇಗದಲ್ಲಿ ನಗರದ ರಸ್ತೆಯೊಂದರ ಜಂಕ್ಷನ್ನಲ್ಲಿ…’ ಎಂದು ಆರಂಭವಾಗುವ ಈ ಕವನ, ವೇಗದ ಸಂಚಾರ, ಆತುರದ ವಾಹನ ಚಾಲನೆ, ಗಾಯಾಳುಗೆ ಸಹಾಯ ಮಾಡದಿರುವುದು, ಮೊಬೈಲ್ನಲ್ಲಿ
ವಿಡಿಯೋ ಮಾಡಿಕೊಳ್ಳುವುದು ಸೇರಿ ಮತ್ತಿತರ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಹೈಗ್ರೌಂಡ್ಸ್ ಸಂಚಾರ ಠಾಣೆ ಕಾನ್ ಸ್ಟೆಬಲ್ ಜಗದೀಶ್ ಮಾದರಹಳ್ಳಿ ಈ ಕವನ ರಚಿಸಿದ್ದು, ಇದೀಗ ಹಿರಿಯ
ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 2009ನೇ ಬ್ಯಾಚ್ನ ಜಗದೀಶ್ ಮಾದರಹಳ್ಳಿ ನಗರದ ವಿವಿಧ ಸಂಚಾರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬಿಡುವಿನ ಸಮಯದಲ್ಲಿ ಕವನ ಬರೆಯುವ ಹವ್ಯಾಸ ಹೊಂದಿದ್ದಾರೆ. ಈ ಹಿಂದೆ ತಾಯಿ, ತಂದೆ, ಪರಿಸರ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕವನ ರಚಿಸಿರುವ ಜಗದೀಶ್, ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಅಪಘಾತಗಳು ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಕವನ ರಚಿಸಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ