ತಾಪಂ ಅಧ್ಯಕ್ಷರ ವಾಹನ ಭಸ್ಮ
Team Udayavani, Sep 9, 2018, 7:00 AM IST
ಕುಣಿಗಲ್: ಮಾನಸಿಕ ಅಸ್ವಸ್ಥನ ಕೀಟಲೆಗೆ ತಾಪಂ ಅಧ್ಯಕ್ಷರ ಜೀಪ್ ಭಸ್ಮವಾಗಿರುವ ಘಟನೆ ಶನಿವಾರ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ತಾಲೂಕಿನ ಗುನ್ನಾಗರೆ ಗ್ರಾಮದ ಪರಶುರಾಮ ಅಲಿಯಾಸ್ ವರಕವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪರಶುರಾಮ ಕೆಲ ವರ್ಷಗಳಿಂದ ಅರೆ ಹುಚ್ಚನಂತೆ ವರ್ತಿಸುತ್ತಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ
ಅನುಭವಿಸಿ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ತಾಪಂ ಆವರಣಕ್ಕೆ ಬಂದ ಪರಶುರಾಮನನ್ನು ಕಚೇರಿಯೊಳಗೆ ಹೋಗಲು ಕಾವಲು ಸಿಬ್ಬಂದಿ ಬಿಡಲಿಲ್ಲ. ಇದರಿಂದ ಕೋಪಗೊಂಡು ಶೆಡ್ನಲ್ಲಿ ನಿಲ್ಲಿಸಿದ ತಾಪಂ ಅಧ್ಯಕ್ಷರ ಹಳೇ ಜೀಪಿಗೆ ಬೆಂಕಿ ಇಟ್ಟಿದ್ದಾನೆ.
ಜೀಪಿನ ಪಕ್ಕ ನಿಲ್ಲಿಸಿದ ಅಧ್ಯಕ್ಷ ಹರೀಶ್ನಾಯ್ಕ ಕಾರಿಗೂ ಬೆಂಕಿ ತಾಕಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ