ವಿದ್ಯುತ್ ಪರಿವರ್ತಕ ಸ್ಥಾಪನೆಗೆ ಮರ ಅಡ್ಡಿ
Team Udayavani, Sep 18, 2018, 2:00 AM IST
ಕಾರ್ಕಳ : ತಾಲೂಕಿನ ಹಾಳೆಕಟ್ಟೆಗೆ 62 ಕಿ.ವಾ. ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕ ಮಂಜೂರಾಗಿದ್ದರೂ ಅದನ್ನು ಸ್ಥಾಪಿಸಲು ಸರಿಯಾದ ಸ್ಥಳವಕಾಶ ಇಲ್ಲದೆ ಸಮಸ್ಯೆಯಾಗಿದೆ. ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿ, ಹಾಲಿನ ಡಿಪೊ, ಬ್ಯಾಂಕ್, ಶಾಲೆಗಳು, ಶಿಶು ಮಂದಿರ, ಪ್ರಾಥಮಿಕ ಚಿಕಿತ್ಸಾ ಕೇಂದ್ರ , ಪಡಿತರ ಅಂಗಡಿ ಸೇರಿದಂತೆ ಹಲವು ಸರಕಾರಿ ಸಂಸ್ಥಾಪನೆಗಳು ಇರುವ ಹಾಳೆಕಟ್ಟೆಗೆ ಹೆಚ್ಚು ಸಾಮರ್ಥ್ಯದ ವಿದ್ಯುತ್ ಪರಿವರ್ತಕದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ಪ್ರತಿಸ್ಪಂದಿಸಿ ವಿದ್ಯುತ್ ಮಂಡಳಿ ಹೊಸ ಪರಿವರ್ತಕವನ್ನು ಮಂಜೂರು ಮಾಡಿದೆ.
ಪ್ರಸ್ತುತ ಹಾಲಿನ ಡಿಪೊದ ಪಕ್ಕದಲ್ಲಿರುವ ಓಣಿಯಲ್ಲಿ ಚಿಕ್ಕ ಪರಿವರ್ತಕ ಇದೆ. ಹೊಸ ಪರಿವರ್ತಕ ಸ್ಥಾಪಿಸಲು ಡಿಪೊದ ಎದುರು ಜಾಗ ಇದ್ದರೂ ಇಲ್ಲಿರುವ ಎರಡು ಮರಗಳು ಅಡ್ಡಿಯಾಗಿವೆ. ಈ ಮರಗಳನ್ನು ತೆರವುಗೊಳಿಸಿದರೆ ವಿದ್ಯುತ್ ಪರಿವರ್ತಕ ಸ್ಥಾಪಿಸಲು ಯಾವುದೇ ಸಮಸ್ಯೆಯಿಲ್ಲ. ಈ ಕುರಿತು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರತಿಸ್ಪಂದನ ವ್ಯಕ್ತವಾಗದ ಕಾರಣ ಪರಿವರ್ತಕ ಅಳವಡಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಅರಣ್ಯ ಇಲಾಖೆ ಶೀಘ್ರವಾಗಿ ಈ ಮರಗಳನ್ನು ಕಡಿಯಲು ಅನುಮತಿ ಕೊಡಬೇಕೆಂದು ಪಂಚಾಯತ್ ಸದಸ್ಯರೂ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !