ಏಕಕಾಲಕ್ಕೆ ಭಾರತ-ಬಾಂಗ್ಲಾ; ಪಾಕ್‌-ಅಫ್ಘಾನ್‌ ಸ್ಪರ್ಧೆ


Team Udayavani, Sep 21, 2018, 6:00 AM IST

asia-ban-ind-pak-af.jpg

ದುಬಾೖ: ಬಿಡುವಿಲ್ಲದ ವೇಳಾಪಟ್ಟಿಗೆ ಆಕ್ಷೇಪ ವ್ಯಕ್ತವಾಗುತ್ತಲೇ “ಏಶ್ಯ ಕಪ್‌’ ಕ್ರಿಕೆಟ್‌ ಪಂದ್ಯಾವಳಿ “ಸೂಪರ್‌ ಫೋರ್‌’ ದಿಕ್ಕಿನತ್ತ ಮುಖ ಮಾಡಿದೆ. 

ಗುರುವಾರದ ಅಂತಿಮ ಗ್ರೂಪ್‌ ಪಂದ್ಯ ಮುಗಿಯುತ್ತಿದ್ದಂತೆಯೇ ಶುಕ್ರವಾರದಿಂದಲೇ ಮುಂದಿನ ಸುತ್ತಿನ ಹಣಾಹಣಿ ಮೊದಲ್ಗೊಳ್ಳಲಿದೆ. ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳು ಈ ಹಂತದಲ್ಲಿ ಪರಸ್ಪರ ಮುಖಾಮುಖೀಯಾಗಲಿವೆ.

ಶುಕ್ರವಾರ ಮತ್ತು ರವಿವಾರ ಏಕಕಾಲಕ್ಕೆ 2 ಪಂದ್ಯಗಳು ನಡೆಯುವುದು ಈ ಕೂಟದ ವೇಳಾಪಟ್ಟಿಯ ಮತ್ತೂಂದು ಎಡವಟ್ಟು. ಸೂಪರ್‌ ಫೋರ್‌ ಹಂತದ ಒಂದು ಸುತ್ತಿನ ಪಂದ್ಯದ ಬಳಿಕ ಶನಿವಾರ ಕೂಟಕ್ಕೆ ವಿರಾಮ ನೀಡಲಾಗಿದೆ. ಕೊನೆಯ 2 ಸೂಪರ್‌ ಫೋರ್‌ ಪಂದ್ಯಗಳು ಮಂಗಳವಾರ ಹಾಗೂ ಬುಧವಾರ ನಡೆಯಲಿವೆ.

ಭಾರತ ಗ್ರೂಪ್‌ ಹಂತದಲ್ಲಿ ಸತತ 2 ದಿನ 2 ಪಂದ್ಯಗಳನ್ನಾಡುವ ಅನಿವಾರ್ಯತೆಗೆ ಸಿಲುಕಿತ್ತು. ಈಗ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನಕ್ಕೂ ಈ ಒತ್ತಡ ಎದುರಾಗಿದೆ. ಗುರುವಾರ ಕೊನೆಯ ಗ್ರೂಪ್‌ ಪಂದ್ಯ ಆಡಲಿರುವ ಈ ತಂಡಗಳು ಶುಕ್ರವಾರವೇ ಸೂಪರ್‌ ಫೋರ್‌ ಮುಖಾಮುಖೀಗೆ ಅಣಿಯಾಗಬೇಕಿದೆ!

ಭಾರತಕ್ಕೆ ಬಾಂಗ್ಲಾ ಸವಾಲು
ದುಬಾೖಯಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್‌ ಇಂಡಿಯಾ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಅಬುಧಾಬಿಯಲ್ಲಿ ಪಾಕಿಸ್ಥಾನ-ಅಫ್ಘಾನಿಸ್ಥಾನ ಸೆಣಸಾಡಲಿವೆ. ಹಾಂಕಾಂಗ್‌ ಮತ್ತು ಶ್ರೀಲಂಕಾ ಕೂಟದಿಂದ ಹೊರಬಿದ್ದಿವೆ.

ಹಾಂಕಾಂಗ್‌ ವಿರುದ್ಧ ಪರದಾಡಿ, ಪಾಕಿಸ್ಥಾನದ ಸದ್ದಡಗಿಸಿದ ರೋಹಿತ್‌ ಶರ್ಮ ನಾಯಕತ್ವದ ಭಾರತ, ಶುಕ್ರವಾರದ ಸೂಪರ್‌ ಫೋರ್‌ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಮಶ್ರಫೆ ಮೊರ್ತಜ ನಾಯಕತ್ವದ ಬಾಂಗ್ಲಾ ಏಕದಿನ ಮಟ್ಟಿಗೆ ಬಲಿಷ್ಠ ಹಾಗೂ ಸಶಕ್ತ ತಂಡವೇ ಆಗಿದೆ. ಭಾರತ ಸ್ವಲ್ಪವೇ ಯಾಮಾರಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇಲ್ಲದಿಲ್ಲ.

ಪಾಕನ್ನು ಮಣಿಸಿದ ಹುರುಪು
ಇತ್ತ ಬದ್ಧ ಎದುರಾಳಿ ಪಾಕ್‌ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನವಿತ್ತು ಗೆದ್ದು ಬಂದ ಭಾರತ ಹೊಸ ಹುರುಪಿನಲ್ಲಿದೆ. ಬಾಂಗ್ಲಾ ವಿರುದ್ಧವೂ ಇದೇ ಲಯವನ್ನು ಕಾಯ್ದುಕೊಳ್ಳುವುದು ರೋಹಿತ್‌ ಪಡೆಯ ಮುಂದಿರುವ ಯೋಜನೆ.

ಆರಂಭಿಕರಾದ ರೋಹಿತ್‌ ಶರ್ಮ-ಶಿಖರ್‌ ಧವನ್‌ ಎರಡೂ ಪಂದ್ಯಗಳಲ್ಲಿ ಉತ್ತಮ ಅಡಿಪಾಯ ನಿರ್ಮಿಸಿದ್ದಾರೆ. ವಿರಾಟ್‌ ಕೊಹ್ಲಿ ಗೈರಲ್ಲಿ ಅಂಬಾಟಿ ರಾಯುಡು ಆಟ ಭರವಸೆದಾಯಕವಾಗಿದೆ. ಹೀಗಾಗಿ ಕೆ.ಎಲ್‌. ರಾಹುಲ್‌ ವೇಟಿಂಗ್‌ ಲಿಸ್ಟ್‌ನಲ್ಲೇ ಇರಬೇಕೋ ಏನೋ. ದಿನೇಶ್‌ ಕಾರ್ತಿಕ್‌ ಮೇಲೆ ಆಡಳಿತ ಮಂಡಳಿಗೆ ಭಾರೀ ವಿಶ್ವಾಸ ಇರುವುದರಿಂದ ಮನೀಷ್‌ ಪಾಂಡೆಗೆ ಅವಕಾಶ ದೂರ ಎಂದೇ ಭಾವಿಸಬೇಕಾಗುತ್ತದೆ. ಹಾಂಕಾಂಗ್‌ ಎದುರು ಸೊನ್ನೆ ಸುತ್ತಿದ ಅನುಭವಿ ಧೋನಿ ಅವರ ಬ್ಯಾಟಿಂಗ್‌ ಫಾರ್ಮ್ ಹೇಗೆ ಎಂಬುದನ್ನು ತಿಳಿಯಬೇಕಿದೆ. ಕೇದಾರ್‌ ಜಾಧವ್‌ ಅವರ ಆಲ್‌ರೌಂಡ್‌ ಯಶಸ್ಸು ಭಾರತದ ಪಾಲಿಗೊಂದು ಬೋನಸ್‌ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಹಾರ್ದಿಕ್‌ ಪಾಂಡ್ಯ ಗೈರು ಭಾರತಕ್ಕೆ ದೊಡ್ಡ ಹೊಡೆತವೇನೂ ಅಲ್ಲ. ಇವರ ಬದಲು ಮತ್ತೆ ಖಲೀಲ್‌ ಅಹ್ಮದ್‌ ಆಡುವ ಸಾಧ್ಯತೆ ಇದೆ.
ಪಾಕಿಸ್ಥಾನವನ್ನು ಉರುಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಭುವನೇಶ್ವರ್‌ ಆ್ಯಂಡ್‌ ಕಂಪೆನಿ ತನ್ನ “ಘಾತಕ ಮಟ್ಟ’ವನ್ನು ಉಳಿಸಿಕೊಂಡೀತೆಂಬ ವಿಶ್ವಾಸ ಇದೆ.

ಏಶ್ಯ ಕಪ್‌: ಸೂಪರ್‌-4 ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ

ಸೆ. 21 (ಶುಕ್ರವಾರ)    ಭಾರತ-ಬಾಂಗ್ಲಾದೇಶ    ದುಬಾೖ    ಸಂಜೆ 5.00
ಸೆ. 21 (ಶುಕ್ರವಾರ)    ಪಾಕಿಸ್ಥಾನ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
ಸೆ. 23 (ರವಿವಾರ)    ಭಾರತ-ಪಾಕಿಸ್ಥಾನ    ದುಬಾೖ        ಸಂಜೆ 5.00
ಸೆ. 23 (ರವಿವಾರ)    ಬಾಂಗ್ಲಾದೇಶ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
ಸೆ. 25 (ಮಂಗಳವಾರ)    ಭಾರತ-ಅಫ್ಘಾನಿಸ್ಥಾನ    ದುಬಾೖ    ಸಂಜೆ 5.00
ಸೆ. 26 (ಬುಧವಾರ)    ಪಾಕಿಸ್ಥಾನ-ಬಾಂಗ್ಲಾದೇಶ    ಅಬುಧಾಬಿ    ಸಂಜೆ 5.00
* ಸಮಯ: ಭಾರತೀಯ ಕಾಲಮಾನ
* ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.