ಗೊಂದಲದ ಗೂಡಾದ ಹೆಸರು ಖರೀದಿ


Team Udayavani, Sep 27, 2018, 9:48 AM IST

bid-1.jpg

ಬೀದರ: ಸರಕಾರ ಹೊರಡಿಸಿರುವ ಹೊಸ ಆದೇಶದಿಂದಾಗಿ ಬೆಂಬಲ ಬೆಲೆಯಲ್ಲಿ ಮಾರಲು ಹೆಸರು ಮುಂದಾದ ರೈತರು ಗೊಂದಲ ಗೂಡಿನಲ್ಲಿ ಸಿಲುಕಿದ್ದಾರೆ. ಕಳೆದ ತಿಂಗಳಲ್ಲಿ ಹೆಸರು ರಾಶಿ ಮಾಡಿರುವ ರೈತರು ಬೆಂಬಲ ಬೆಲೆಯಡಿ ಮಾರಾಟ ಮಾಡುವ ನಿಟ್ಟಿನಲ್ಲಿ ತಿಂಗಳಿಂದ ಸಂರಕ್ಷಿಸಿ ಇಟ್ಟಿದಾರೆ. 6,975 ರೂ. ನಂತೆ ಪ್ರತಿ ಕ್ವಿಂಟಲ್‌ ಹೆಸರು ಮಾರಾಟ ಮಾಡುವ ನಿರೀಕ್ಷೆಯಲ್ಲಿದ ರೈತರಿಗೆ ಸದ್ಯ ಸರ್ಕಾರದ ಹೊಸ ಆದೇಶ ಬರೆ ಎಳೆದಂತಾಗಿದೆ.

ಕಳೆದ ಸಾಲಿನಲ್ಲಿ ತಲಾ ರೈತರಿಂದ 20 ಕ್ವಿಂಟಲ್‌ ವರೆಗೆ ಹೆಸರು ಖರೀದಿಸಲಾಗಿತ್ತು. ಆದರೆ, ಪ್ರಸಕ್ತ ವರ್ಷ ಕೇಂದ್ರ ಸರ್ಕಾರದ ಆದೇಶಗಳು ರೈತರನ್ನು ಗೊಂದಲಕ್ಕಿಡು ಮಾಡಿವೆ. ಪ್ರಾರಂಭದಲ್ಲಿ 10 ಕ್ವಿಂಟಲ್‌ ಖರೀದಿಗೆ ಆದೇಶ ನೀಡಿದ್ದ ಕೇಂದ್ರ ಸರ್ಕಾರ ಕೇವಲ 4 ಕ್ವಿಂಟಲ್‌ ಖರೀದಿಸುವಂತೆ ಇದೀಗ ಮತ್ತೂಂದು ಸುತ್ತೋಲೆ ಹೊರಡಿಸಿ ರುವುದು ರೈತರನ್ನು ಧೃತಿಗೆಡಿಸಿದೆ.

ಜಿಲ್ಲೆಯಲ್ಲಿ ಸದ್ಯ ಒಟ್ಟು 30 ಖರೀದಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ರೈತರಿಂದ ಒಟ್ಟು 22, 880 ಕ್ವಿಂಟಲ್‌ ಹೆಸರು ಖರೀದಿಗೆ ಸರ್ಕಾರ ಮುಂದಾಗಿದೆ. ಈವರೆಗೆ 21,951 ರೈತರು ಹೆಸರು ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರದ ಹೊಸ ಆದೇಶದ ಪ್ರಕಾರ ನೋಂದಣೆಯಾದ 21,951 ರೈತರಿಂದ 1.04 ಕ್ವಿಂಟಲ್‌ ಹೆಸರು ಮಾತ್ರ ಖರೀದಿ ಮಾಡಲು ಸಾಧ್ಯವಿದೆ. ಈ ಪೈಕಿ ಹುಮನಾಬಾದ ತಾಲೂಕಿನಲ್ಲಿ 4,750, ಭಾಲ್ಕಿ ತಾಲೂಕಿನಲ್ಲಿ 7,320, ಬಸವಕಲ್ಯಾಣ ತಾಲೂಕಿನಲ್ಲಿ 3,883, ಔರಾದ ತಾಲೂಕಿನಲ್ಲಿ 3,179, ಬೀದರ ತಾಲೂಕಿನಲ್ಲಿ 2,819 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ.

ರೈತರ ನೋಂದಣೆ: ಬೀದರ ತಾಲೂಕು ಚಿಮಕೋಡ ಖರೀದಿ ಕೇಂದ್ರದಲ್ಲಿ 612, ಜನವಾಡ ಕೇಂದ್ರದಲ್ಲಿ 502, ಬಗದಲ್‌ ಕೇಂದ್ರದಲ್ಲಿ 492, ಖೇಣಿ ರಂಜೋಳ 507, ಮನ್ನಳ್ಳಿ 316, ಅಣದೂರ 390 ರೈತರು ಹೆಸರು ಮಾರಾಟಕ್ಕೆ ನೋಂದಣೆ ಮಾಡಿದಿಕೊಂಡಿದ್ದಾರೆ.  ಔರಾದ: ಚಿಂತಾಕಿ ಕೇಂದ್ರದಲ್ಲಿ 606, ವಡಗಾಂವ(ದೆ) ಕೇಂದ್ರದಲ್ಲಿ 878, ಎಕಂಬಾ 291, ಬಗದಲಗಾಂವ 228, ಹೆಡಗಾಪುರ 640, ಕಮಲನಗರ 536 ರೈತರು ನೋಂದಣೆ ಮಾಡಿಸಿಕೊಂಡಿದ್ದಾರೆ.

ಬಸವಕಲ್ಯಾಣ: ಹುಲಸೂರು ಕೇಂದ್ರದಲ್ಲಿ 1049, ಮುಡಬಿ 849, ಹಾರಕೂಡ 349, ರಾಜೇಶ್ವರ 764, ಲಾಡವಂತಿ 401, ಕೋಹಿನೂರ 471. ಭಾಲ್ಕಿ: ಕೆ.ಚಿಂಚೋಳಿ 922, ಕುರುಬಖೇಳಗಿ 1510, ನಿಟ್ಟೂರು 1510, ಬ್ಯಾಲಹಳ್ಳಿ 882, ಧನ್ನೂರು 777, ಡೊಣಗಾಪುರ 1719. ಹುಮನಾಬಾದ: ಹಳ್ಳಿಖೇಡ(ಬಿ) 616, ಘಾಟಬೋರಳ 984, ದುಬಲಗುಂಡಿ 920, ಬೇಮಳಖೇಡಾ 390, ಉಡಮನಳ್ಳಿ 338, ಚಿಟಗುಪ್ಪ ಕೇಂದ್ರದಲ್ಲಿ 1502 ರೈತರು ನೋಂದಣೆ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕೇವಲ 22,880 ಕ್ವಿಂಟಲ್‌ ಖರೀದಿಗೆ ಸರ್ಕಾರ ಮುಂದಾಗಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನಾಲ್ಕು ಕ್ವಿಂಟಲ್‌ ಮತ್ತು ಹತ್ತು ಕ್ವಿಂಟಲ್‌ ಸಾಗಾಟದ ವೆಚ್ಚ ಒಂದೇ ಆಗುತ್ತದೆ. ಕಡಿಮೆ ಪ್ರಮಾಣದಲ್ಲಿ ಹೆಸರು ಖರೀದಿಸಿದರೆ ನಮ್ಮನ್ನು ಮತ್ತಷ್ಟು ಶೋಷಿಸಿದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ದಲ್ಲಾಳಿಗಳ ಹಾವಳಿ: ಸರ್ಕಾರ ನಿಗದಿತ ಪ್ರಮಾಣದಲ್ಲಿ ಹೆಸರು ಖರೀದಿಗೆ ಮುಂದಾಗಿರುವುದು ಸದ್ಯ ದಲ್ಲಾಳಿಗಳಿಗೆ ಸಂತಸ ತಂದಿದೆ. ಎಪಿಎಂಸಿಯಲ್ಲಿ ಹೆಸರು ಕಾಳಿಗೆ 4,000ರಿಂದ 4,500 ಸಾವಿರ ರೂ. ವರೆಗೆ ಖರೀದಿ ಮಾಡಲಾಗುತ್ತಿದೆ. ಇದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೆಸರು ಕಾಳು ರಾಶಿಯಾಗಿ ತಿಂಗಳು ಕಳೆದಿದ್ದು, ಬೆಂಬಲ ಬೆಲೆ ಮೂಲಕ ಹೆಸರು ಮಾರಾಟಕ್ಕೆ ಬಹುತೇಕ ರೈತರು ನಿರ್ಧರಿಸಿದ್ದರು. ಆದರೆ, ತಲಾ ರೈತರಿಂದ ಕೇವಲ 4 ಕ್ವಿ. ಮಾತ್ರ ಖರೀದಿಗೆ ಸರ್ಕಾರ ನಿರ್ಧರಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರ ತಕ್ಷಣ ಖರೀದಿ ಪ್ರಮಾಣ ಏರಿಕೆ ಮಾಡದಿದ್ದರೆ ಇನ್ನಷ್ಟು ರೈತರು ಅನಿವಾರ್ಯವಾಗಿ ದಲ್ಲಾಳಿ ಕೇಂದ್ರಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ರೈತ ಸಂಘದ ಪ್ರಕಾರ ಜಿಲ್ಲೆಯಲ್ಲಿ 40 ಸಾವಿರ ರೈತರು ಹೆಸರು ಬೆಳೆ ಬೆಳೆದಿದ್ದಾರೆ. ಸುಮಾರು ಎರಡು ಲಕ್ಷ ಕ್ವಿಂಟಲ್‌ ಹೆಸರು ಬೆಳೆದಿದೆ. ಇನ್ನು ಕೃಷಿ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ 1.5 ಲಕ್ಷ ಕ್ವಿಂಟಲ್‌ ಹೆಸರು ಉತ್ಪಾದನೆಯಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಮಾಹಿತಿ ನೀಡಿದ ರೈತ ಸಂಘದ ಪ್ರಮುಖರು, ಬಹುತೇಕ ರೈತರು ಹೆಸರು ಬಿತ್ತನೆಗೆ ಮನೆ ಬೀಜಗಳನ್ನೇ ಬಳಸುತ್ತಾರೆ. ಹೊರಗಿನ ಬೀಜ ಖರೀದಿಸುವುದಿಲ್ಲ. ಹಾಗಾಗಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಬೆಳೆ ಪ್ರಮಾಣದ ಪೂರ್ಣ ಮಾಹಿತಿ  ಸಿಗುವುದಿಲ್ಲ ಎನ್ನುತ್ತಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಹೆಸರು ಖರೀದಿ ಕೇಂದ್ರಗಳ ಸ್ಥಾಪನೆ, ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಹಾಗೂ ಹೆಸರು ನೋಂದಣಿ ಅವಧಿ ವಿಸ್ತರಣೆ ಮಾಡುವಲ್ಲಿ ಸಹಕಾರ ಖಾತೆ ಹಾಗೂ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯ ಇಬ್ಬರೂ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಮನವಿ ಮಾಡಲಾಗಿತ್ತು. ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು ಕೂಡ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅ. 1ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಈಗಾಗಲೇ ಹಲವು ಸಭೆಗಳು ನಡೆಸಲಾಗಿದೆ. ಅಲ್ಲದೆ, ಜಿಲ್ಲೆಯ ಇಬ್ಬರು ಸಚಿವರು ಹಾಗೂ ಸಂಸದರಿಗೆ ಘೇರಾವ ಹಾಕಲು ತಿರ್ಮಾನಿಸಲಾಗಿದೆ. 
 ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಅಧ್ಯಕ್ಷ

„ದುರ್ಯೋಧನ ಹೂಗಾರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.