ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
Team Udayavani, Oct 3, 2018, 1:19 PM IST
ಕೊಪ್ಪಳ: ಸಾಲಬಾಧೆ ತಾಳದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯತ್ನಟ್ಟಿ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ನಡೆದಿದೆ. ಯಲ್ಲಪ್ಪ ಸಿದ್ದಪ್ಪ ಬಂಡಿ (55) ಮೃತ ರೈತ. ಮೂಲತಃ ತಾಲೂಕಿನ ಕುಣಕೇರಿ ಗ್ರಾಮದ ನಿವಾಸಿಯಾಗಿದ್ದು, ಪಕ್ಕದ ಯತ್ನಟ್ಟಿ ಗ್ರಾಮದ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕುಣಕೇರಿ ಕೆನರಾ ಬ್ಯಾಂಕ್ನಲ್ಲಿ 1.5 ಲ. ರೂ. ಸಾಲ ಮಾಡಿಕೊಂಡಿದ್ದರು.
ಅಲ್ಲದೇ ಇಬ್ಬರು ಪುತ್ರಿಯರ ಮದುವೆಗೆ ಸಾಲ ಮಾಡಿದ್ದರು. ಹೊಲದಲ್ಲಿನ ಮೆಕ್ಕೆಜೋಳವು ನೀರಿಲ್ಲದೆ ಒಣಗುತ್ತಿ ದ್ದುದಲ್ಲದೆ, ಕೀಟಬಾಧೆ ಕಾಣಿಸಿಕೊಂಡಿತ್ತು. ಇದರಿಂದ ಮನನೊಂದು ಹೊಲದಲ್ಲಿಯೇ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.