ದೀಪಿಕಾ ಈಗ ಚಿತ್ರ ನಿರ್ಮಾಪಕಿ: acid attack ಸಂತ್ರಸ್ತೆಯ ಪಾತ್ರ
Team Udayavani, Oct 5, 2018, 11:57 AM IST
ಮುಂಬಯಿ : ಮೇಘನಾ ಗುಲ್ಜಾರ್ ನಿರ್ದೇಶನದ ಮುಂದಿನ ಚಿತ್ರವನ್ನು ನಟಿ ದೀಪಿಕಾ ಪಡುಕೊಣೆ ನಿರ್ಮಿಸಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ, ಆ್ಯಸಿಡ್ ಅಟ್ಯಾಕ್ ಮಹಿಳೆಯ ಪಾತ್ರವನ್ನು ವಹಿಸಲಿದ್ದಾರೆ.
32ರ ಹರೆಯದ ದೀಪಿಕಾ ಅವರು ಇನ್ನಷ್ಟೇ ಹೆಸರಿಡಬೇಕಿರುವ ಚಿತ್ರದಲ್ಲಿ ಲಕ್ಷ್ಮೀ ಅಗರ್ವಾಲ್ ಅವರ “ಆ್ಯಸಿಡ್ ದಾಳಿ ಸಂತ್ರಸ್ತೆ’ಯ ಪಾತ್ರವನ್ನು ವಹಿಸುವರು.
2005ರಲ್ಲಿ ಲಕ್ಷ್ಮೀ ಅಗರ್ವಾಲ್ ಷವರು ದಿಲ್ಲಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆಕೆಯ ಮೇಲೆ, ಆಕೆಯ ಎರಡು ಪಟ್ಟು ಹೆಚ್ಚು ಪ್ರಾಯದ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿದ್ದ. ಆ ದಾಳಿಕೋರ ಲಕ್ಷ್ಮೀ ಅವರ ಮನೆಯವರಿಗೆ ತಿಳಿದವನೇ ಆಗಿದ್ದು ಮತ್ತು ತನ್ನನ್ನು ವರಿಸುವ ಆತನ ಪ್ರಸ್ತಾವವನ್ನು ಲಕ್ಷ್ಮೀ ತಿರಸ್ಕರಿಸಿದ್ದಳು.
“ಲಕ್ಷ್ಮೀ ಅಗರ್ವಾಲ್ ಕಥೆ ಕೇಳಿ ನಾನು ದಂಗಾದೆ. ಮನಸ್ಸಿಗೆ ತೀವ್ರವಾದ ನೋವಾಯಿತು. ಇದು ಕೇವಲ ಒಂದು ಹಿಂಸೆಯ ಘಟನೆಯಲ್ಲ; ಧೈರ್ಯ, ಸ್ಥೈರ್ಯ, ಭರವಸೆ ಮತ್ತು ವಿಜಯದ ಘಟನೆ ಎಂದು ನನ್ನಗನ್ನಿಸಿತು. ಇದು ನನ್ನ ಮೇಲೆ ಅಪಾರವಾದ ಪರಿಣಾಮ ಉಂಟು ಮಾಡಿತು. ನಾನೇ ಲಕ್ಷ್ಮಿ ಯ ಪಾತ್ರ ವಹಿಸಿ ನಟಿಸಬೇಕೆಂದು ತೀರ್ಮಾನಿಸಿದೆ; ಮಾತ್ರವಲ್ಲ ಚಿತ್ರವನ್ನು ನಾನೇ ನಿರ್ಮಿಸಬೇಕೆಂದು ನಿರ್ಧರಿಸಿದೆ’ ಎಂದು ದೀಪಿಕಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್