ಶಿವಕುಮಾರ್ಗೆ ಶ್ರೀರಾಮುಲು ಸವಾಲು
Team Udayavani, Oct 14, 2018, 6:45 AM IST
ಹೊಸಪೇಟೆ: ಬಳ್ಳಾರಿಗೆ ಯಾವುದೇ ನಾಯಕರು ಬರಲಿ, ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈ ಉಪಚುನಾವಣೆಯಲ್ಲಿ ಮಣ್ಣಿನ ಮಗಳು (ಜೆ.ಶಾಂತ) ಗೆಲ್ಲುತ್ತಾಳ್ಳೋ,ಕನಕಪುರದ ಡಿಕೆಶಿ ಗೆಲ್ಲುತ್ತಾರೋ ನೋಡೋಣ ಎಂದು ಶಾಸಕ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿ, ಬಳ್ಳಾರಿಗೆ ಎಂತಹ ನಾಯಕರೇ ಬರಲಿ, ಎದುರಿಸುವಷ್ಟು ಶಕ್ತಿ ನನಗಿದೆ. ಡಿ.ಕೆ.ಶಿವಕುಮಾರ್
ಅವರಿಗೇನು ಎರಡು ಕೊಂಬುಗಳಿವೆಯೇ?ಕನಕಪುರದ ಡಿಕೆಶಿ ಗೆಲ್ಲುತ್ತಾರೋ, ಬಳ್ಳಾರಿ ಮನೆ ಮಗಳು ಶಾಂತಾ ಗೆಲ್ಲುತ್ತಾರೋ
ನೋಡೋಣ ಎಂದರು. ಕಳೆದ ಉಪಚುನಾವಣೆಯಲ್ಲಿ ಡಿಕೆಶಿ ಕುತಂತ್ರ ಮಾಡಿ ಗೆದ್ದಿದ್ದಾರೆ. ಅವರ ಭವಿಷ್ಯ ಅವರಿಗೇ ಗೊತ್ತಾಗಿಲ್ಲ. ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಹಣ ಇದೆ ಎಂಬ ಅಹಂನಿಂದ ಅವರು ಮೆರೆಯುತ್ತಿದ್ದಾರೆ. ದೇವರು ನನ್ನ ಪಾಲಿಗೆ ಕಣ್ಣು ತೆರೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೆಸೆಯುವ ತಾಕತ್ತಿದೆ ಎಂದು ಗುಡುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್