ಕ್ರೈಸ್ತ ಸನ್ಯಾಸಿನಿ ರೇಪ್ ಕೇಸ್: ಆರೋಪಿ ಬಿಷಪ್ ಮುಲಕ್ಕಳಗೆ ಜಾಮೀನು
Team Udayavani, Oct 15, 2018, 12:09 PM IST
ಕೊಚ್ಚಿ : ಕ್ರೈಸ್ತ ಸೈನ್ಯಾಸಿನಿ (ನನ್) ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರ್ಯಾಂಕೋ ಮುಲಕ್ಕಳ್ ಅವರಿಗೆ ಕೇರಳ ಹೈಕೋರ್ಟ್ ಇಂದು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ಮಾಡಿದ ಜಸ್ಟಿಸ್ ರಾಜಾ ವಿಜಯರಾಘವನ್ ಅವರು ಈ ಕೆಳಗಿನ ಶರತ್ತುಗಳು ವಿಧಿಸಿದರು : 1. ಬಿಷಪ್ ಅವರು ಪಾಸ್ ಪೋರ್ಟ್ ಒಪ್ಪಿಸತಕ್ಕದ್ದು; 2. ತನಿಖಾಧಿಕಾರಿ ಮುಂದೆ ಎರಡು ವಾರಗಳಲ್ಲಿ ಒಂದು ಬಾರಿ ಶನಿವಾರದಂದು ಹಾಜರಾಗುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಕೇರಳ ರಾಜ್ಯವನ್ನು ಪ್ರವೇಶಿಸಕೂಡದು; 3. ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲ್ಪಡುವ ತನಕವೂ ಈ ಶರತ್ತುಗಳು ಅನ್ವಯವಾಗುತ್ತವೆ.
ಆರೋಪಿ ಬಿಷಪ್ಗೆ ಜಾಮೀನು ಮಂಜೂರಾದಲ್ಲಿ ಸಮಾಜದಲ್ಲಿ ಅತ್ತಂತ ಪ್ರಭಾವೀ ಸ್ಥಾನದಲ್ಲಿರುವ ಅವರು ಪ್ರಕರಣದ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ; ಆದುದರಿಂದ ಅವರಿಗೆ ಜಾಮೀನು ನೀಡಕೂಡದು ಎಂದು ಪ್ರಾಸಿಕ್ಯೂಶನ್ ವಾದಿಸಿದ ನೆಲೆಯಲ್ಲಿ ಕಳೆದ ಅ.3ರಂದು ಹೈಕೋರ್ಟ್ 54ರ ಹರೆಯದ ಬಿಷಪ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿತ್ತು.
ಪ್ರಕೃತ ಆರೋಪಿ ಬಿಷಪ್ ಅವರನ್ನು ಕೋಟ್ಟಯಂ ಜಿಲ್ಲೆಯ ಉಪ ಬಂಧೀಖಾನೆಯಲ್ಲಿ ಇರಿಸಲಾಗಿದೆ.ಇವರ ನ್ಯಾಯಾಂಗ ರಿಮಾಂಡನ್ನು ಮ್ಯಾಜಿಸ್ಟ್ರೇಟರು ವಿಸ್ತರಿಸಿದ ಒಡನೆಯೇ ಅವರು ಜಾಮೀನು ಬಿಡುಗಡೆ ಕೋರಿ ಪುನಃ ಅರ್ಜಿ ಸಲ್ಲಿಸಿದ್ದರು.
ಕಳೆದ ಜೂನ್ನಲ್ಲಿ ಸಂತ್ರಸ್ತ ನನ್ ಕೋಟ್ಟಯಂ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿ ಬಿಷಪ್ ಮುಲಕ್ಕಳ್ ಅವರು 2014ರ ಮೇ ತಿಂಗಳಲ್ಲಿ ಕುರವಿಲಂಗಡ ಗೆಸ್ಟ್ ಹೌಸ್ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದುದಾಗಿ ಮತ್ತು ಅನಂತರದಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ