ಮಧು ಬಂಗಾರಪ್ಪ ಆಸ್ತಿ ಮೌಲ್ಯ 61 ಕೋಟಿ
Team Udayavani, Oct 17, 2018, 6:00 AM IST
ಶಿವಮೊಗ್ಗ: ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಕುಟುಂಬ 61 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ 67 ಕೋಟಿ ರೂ.ಮೌಲ್ಯದ ಆಸ್ತಿಯಲ್ಲಿ 6 ಕೋಟಿ ರೂ.ಮೌಲ್ಯದ ಆಸ್ತಿ ಕಡಿಮೆಯಾಗಿದೆ. ಇವರ ಕುಟುಂಬದ ಒಟ್ಟು ವಾರ್ಷಿಕ ಆದಾಯ 77.17 ಲಕ್ಷ ರೂ. ಮಧು ಮತ್ತು ಅವರ ಪತ್ನಿ ಅನಿತಾ ಅವರು 20.38 ಕೋಟಿ ರೂ.ಮೌಲ್ಯದ ಚರಾಸ್ತಿ, ಮಧು ಮತ್ತು ಅವರ ಪುತ್ರ ಸೂರ್ಯ ಅವರು 41.70 ಕೋಟಿ ರೂ.ಸ್ಥಿರಾಸ್ತಿ ಹೊಂದಿದ್ದಾರೆ. 63.60 ಲಕ್ಷ
ರೂ.ಮೌಲ್ಯದ ಎರಡು ಕಾರುಗಳಿವೆ. ಸೊರಬ ತಾಲೂಕಿನ ತಲಗಡ್ಡೆಯಲ್ಲಿ 50 ಎಕರೆ, ಕೋಡಿಕೊಪ್ಪದಲ್ಲಿ 59 ಎಕರೆ, ಕುಬಟೂರಲ್ಲಿ 6 ಎಕರೆ, ಲಕ್ಕವಳ್ಳಿಯಲ್ಲಿ 35 ಎಕರೆ ಮತ್ತು ದೇವಸ್ಥಾನದ ಹಕ್ಕಲಲ್ಲಿ 2 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳು ಮಧು ಬಂಗಾರಪ್ಪ ಮತ್ತು ಅವರ ಪುತ್ರ ಸೂರ್ಯನ ಹೆಸರಲ್ಲಿವೆ. ಬೆಂಗಳೂರು ಕುಮಾರಪಾರ್ಕ್ನಲ್ಲಿ 6 ಕೋಟಿ ರೂ. ಮೌಲ್ಯದ
ನಿವೇಶನ, ಆರ್ಎಂವಿ ಎಕ್ಸ್ಟೆನನ್, ಶಿವಮೊಗ್ಗ ಚನ್ನಪ್ಪ ಬಡಾವಣೆ, ಸೊರಬ ತಾಲೂಕು ಕುಬಟೂರಲ್ಲಿ ಮನೆಗಳನ್ನು ಹೊಂದಿದ್ದಾರೆ.
ಆನಂದ ಕೋಟಿ ಒಡೆಯ, ಶ್ರೀಕಾಂತಟ್ರ್ಯಾಕ್ಟರ್ ಮಾಲೀಕ
ಜಮಖಂಡಿ: ಜಮಖಂಡಿ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಒಟ್ಟು 97,84,266 ರೂ. ಚರಾಸ್ತಿ ಮತ್ತು 4,26,40,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆನಂದ ಅವರ ಪತ್ನಿ ಕೀರ್ತಿ 10,10,000 ರೂ.ಚರಾಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರ ಹೆಸರಿನಲ್ಲಿ 1.08 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 33.89 ಲಕ್ಷ ಚರಾಸ್ತಿ ಇದೆ. ಪತ್ನಿ ಶ್ರೀದೇವಿ ಹೆಸರಿನಲ್ಲಿ 3,72,636 ರೂ.ಮೊತ್ತದ ಚರಾಸ್ತಿ, ಪುತ್ರ ಸಚಿನ್ 41.03 ಲಕ್ಷ ಚರಾಸ್ತಿ, ಇನ್ನೋರ್ವ ಪುತ್ರ ಸಮೀರ 12.64 ಲಕ್ಷ ಮೊತ್ತದ ಚರಾಸ್ತಿ ಹೊಂದಿದ್ದಾರೆ. ಮತ್ತೂಬ್ಬ ಪುತ್ರ ಭರತ 29.42 ಲಕ್ಷ ಚರಾಸ್ತಿ ಹೊಂದಿದ್ದಾರೆ. ಶ್ರೀಕಾಂತ ಕುಲಕರ್ಣಿ ಹೆಸರಿನಲ್ಲಿ ಒಂದು ಟ್ರ್ಯಾಕ್ಟರ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ