ಸೌಕರ್ಯಗಳಿಲ್ಲದ ತಹಶೀಲ್ದಾರ್‌ ಕಚೇರಿ


Team Udayavani, Oct 17, 2018, 3:58 PM IST

17-october-17.gif

ಗುಳೇದಗುಡ್ಡ: ಗುಳೇದಗುಡ್ಡ ತಾಲೂಕು ಕೇಂದ್ರದ ತಹಶೀಲ್ದಾರ್‌ ಕಚೇರಿಯಲ್ಲಿ ಸೌಲಭ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ. ಗುಳೇದಗುಡ್ಡ ಪಟ್ಟಣ ತಾಲೂಕು ಕೇಂದ್ರವಾಗಿ ರಚನೆಯಾಗಿದ್ದರೂ ತಾಲೂಕು ಕಚೇರಿ ಆರಂಭವಾಗಿಲ್ಲ. ಸದ್ಯದ ತಹಶೀಲ್ದಾರ್‌ ಕಚೇರಿಯಲ್ಲಿ ಯಾವುದೇ ಸೌಲಭ್ಯಗಳು ಸಮರ್ಪಕವಾಗಿಲ್ಲ.

ಒಂದಿದ್ದರೇ ಇನ್ನೊಂದಿಲ್ಲ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಒಂದಿದ್ದರೇ ಇನ್ನೊಂದಿಲ್ಲ ಎನ್ನುವಂತಾಗಿದೆ. ಸದ್ಯ ಮೂರ್‍ನಾಲ್ಕು ಕಿಬೋರ್ಡ್‌ಗಳು ಕೆಟ್ಟು ಹೋಗಿದ್ದು, ಜಾತಿ ಆದಾಯ ಪ್ರಮಾಣ ಪತ್ರ ಅರ್ಜಿ ಸ್ವೀಕರಿಸುವ ಆಪರೇಟರ್‌ ಹತ್ತಿರ ಇರುವ ಕಿಬೋರ್ಡ್‌ನ್ನೆ ಕಚೇರಿಯಲ್ಲಿ ಮೂರ್‍ನಾಲ್ಕು ಸಿಬ್ಬಂದಿ ಉಪಯೋಗಿಸುತ್ತಾರೆ. ಒಬ್ಬರ ಕೆಲಸ ಮುಗಿಯುವವರೆಗೂ ಕೀಬೋರ್ಡ್‌ಗಾಗಿ ಕಾಯಬೇಕು. 

ಕಂದಾಯ ನಿರೀಕ್ಷಕರಿಗಿಲ್ಲ ಕಿಬೋರ್ಡ್‌: ಸಾರ್ವಜನಿಕರು ಸಲ್ಲಿಸಿದ ಅರ್ಜಿ ಪರಿಶೀಲಿಸಿ, ತಂಬ್‌ ನೀಡಲು ಕಂದಾಯ ನಿರೀಕ್ಷಕರಿಗೆ ಕೀಬೋರ್ಡ್‌ ಇಲ್ಲ. ಆಪರೇಟರ್‌ ಹತ್ತಿರ ಇರುವ ಒಂದೇ ಕೀಬೋರ್ಡ್‌ ತರಿಸಿಕೊಂಡು ಅವರು ಕೆಲಸ ಮಾಡುತ್ತಾರೆ. ಕೇಳಿದರೆ ಇಲಾಖೆಯವರು ಕಳಿಸಿಲ್ಲ ಎಂದು ಸಿಬ್ಬಂದಿ ಉತ್ತರಿಸುತ್ತಾರೆ.

ವಿಶೇಷ ತಹಶೀಲ್ದಾರ್‌ ಕಚೇರಿಯಿದ್ದಾಗಲೂ ಸಮರ್ಪಕ ಸೌಲಭ್ಯಗಳಿರಲಿಲ್ಲ. ಆಗಲೂ ಕೂಡಾ ಕೀಬೋರ್ಡ್‌, ಪ್ರಿಂಟರ್‌ ಒಂದೇ ಇರುತ್ತಿತ್ತು. ಇದರಿಂದ ಸಿಬ್ಬಂದಿ ಇರುವುದರಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರಿಂಟರ್‌ ಅಷ್ಟೇ ಅಲ್ಲ ಕೆಲವು ಸಲ ಪ್ರಿಂಟ್‌ ಕೊಡುವ ಪೇಪರ್‌ ಗಳೇ ಇರುತ್ತಿರಲಿಲ್ಲ. ಸಾರ್ವಜನಿಕರೇ ಹೊರಗಿನಿಂದ ತಂದು ಪ್ರಮಾಣ ಪತ್ರ ಪಡೆದ ಉದಾಹರಣೆಗಳಿವೆ. ಜಿಲ್ಲಾಧಿಕಾರಿಗಳ ಕಚೇರಿಯವರು ಸ್ಟೇಶನರಿ ಸಾಮಗ್ರಿ ಒದಗಿಸಲು ಹಿಂದೇಟು ಹಾಕುತ್ತಾರೆಯೇ ಎಂಬ ಅನುಮಾನ ಮೂಡಿದೆ. ದುರಸ್ತಿಯಾಗದ ಜನರೇಟರ್‌: ತಹಶೀಲ್ದಾರ್‌ ಕಚೇರಿಗೆ ವಿದ್ಯುತ್‌ ಕೈ ಕೊಟ್ಟಾಗ ತೊಂದರೆಯಾಗಬಾರದೆಂದು ಜನರೇಟರ್‌ ಅಳವಡಿಸಲಾಗಿದೆ. ಅದು ಕೆಟ್ಟು ನಿಂತಿದ್ದರೂ ಅದರ ದುರಸ್ತಿಗೆ ಮುಂದಾಗಿಲ್ಲ.

ಶೌಚಾಲಯದ ವ್ಯವಸ್ಥೆ ಇಲ್ಲ: ಪಟ್ಟಣದ ತಹಶೀಲ್ದಾರ್‌ ಕಚೇರಿಯ ಪಕ್ಕದಲ್ಲಿ ಸಿಬ್ಬಂದಿಗೆ ಶೌಚಾಲಯವಿದೆ. ಆದರೆ ಅದು ಸ್ವಚ್ಛಗೊಳಿಸದ್ದಕ್ಕೆ ಗಬ್ಬೆದ್ದು ನಾರುತ್ತಿದೆ. ಪ್ಲಾಸ್ಟಿಕ್‌ ಹಾಳೆ ಸೇರಿದಂತೆ ಕಸಬಿದ್ದು ಬಿದ್ದು ಹಾಳಾಗಿ ಹೋಗಿದೆ. ಅದರ ಸ್ವತ್ಛತೆಗೆ ಗಮನವೇ ಹರಿಸಿಲ್ಲ. ಇದರಿಂದ ಶೌಚಾಲಯ ಇದ್ದು ಇಲ್ಲದಂತಾಗಿದೆ.ತಹಶೀಲ್ದಾರ್‌ ಕಚೇರಿಗೆ ಇದುವರೆಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. 

ತಹಶೀಲ್ದಾರ್‌ ಕಚೇರಿಗೆ ಮೂಲಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಚೇರಿಯ ಸ್ಟೇಶನರಿ ಸಾಮಗ್ರಿಗಳಿಗೆ ಟೆಂಡರ್‌ ಕರೆಯಲಾಗಿದೆ. ವಾರದಲ್ಲಿ ಪೂರೈಸಲಾಗುವುದು.
ಎಸ್‌.ಎಸ್‌. ಇಂಗಳೆ,
ಬಾದಾಮಿ-ಗುಳೇದಗುಡ್ಡ
ತಹಶೀಲ್ದಾರ್‌ರು

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.