ದಿ ವಿಲನ್:ಸುದೀಪ್ ಕಟೌಟ್ಗೆ ಮೇಕೆ ಬಲಿ!;ಚಿತ್ರ ಮಂದಿರವೇ ಧ್ವಂಸ
Team Udayavani, Oct 20, 2018, 12:05 PM IST
ಬೆಂಗಳೂರು: ಬಹುನಿರೀಕ್ಷಿತ ದಿ ವಿಲನ್ ಚಿತ್ರ ಭಾರೀ ಸದ್ದು ಮಾಡುತ್ತಿದ್ದು, ಕೆಲ ವಿವಾದಗಳಿಗೂ ಗುರಿಯಾಗಿದೆ. ಕೆಲವೆಡೆ ಅಭಿಮಾನಿಗಳು ಅಂಧಾಭಿಮಾನ ತೋರಿದ ಘಟನೆಯೂ ನಡೆದಿದೆ.
ನೆಲಮಂಗಲ ಭಾಗದಲ್ಲಿ ಚಿತ್ರಮಂದಿರವೊಂದರ ಎದುರು ಸುದೀಪ್ ಅವರ ಕಟೌಟ್ಗೆ ಅಭಿಮಾನಿಗಳು ಮೇಕೆಯನ್ನು ಬಹಿರಂಗವಾಗಿ ಬಲಿ ನೀಡಿ ಕ್ರೌರ್ಯ ಮೆರೆದಿದ್ದಾರೆ. ಈ ಬಗ್ಗೆ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೇಕೆ ಬಲಿ ನೀಡಿ ರಕ್ತದ ಅಭಿಷೇಕ ಮಾಡುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಚಿತ್ರ ಮಂದಿರ ಧ್ವಂಸ
ಮೈಸೂರಿನ ಟಿ.ನರಸೀಪುರದಲ್ಲಿರುವ ಮುರುಗನ್ ಚಿತ್ರಮಂದಿರದಲ್ಲಿ ಶುಕ್ರವಾರ ರಾತ್ರಿ ಅಟ್ಟಹಾಸ ಮೆರೆದಿದ್ದು ಕ್ಷುಲ್ಲಕ ಕಾರಣಕ್ಕೆ ಪೀಠೊಪಕರಣಗಳನ್ನು ಧ್ವಂಸಗೈದಿದ್ದಾರೆ.
ಸೌಂಡ್ ಸಿಸ್ಟಂ ಸರಿಯಾಗಿಲ್ಲ ಎಂದು ರೊಚ್ಚಿಗೆದ್ದ ಪ್ರàಕ್ಷಕರು ಕೃತ್ಯ ಎಸಗಿದ್ದಾರೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.