ಇನ್ನೂ ಹಾಕಿಲ್ಲ ವಾರಾಹಿ ಗೇಟು: ಕುಡಿಯುವ ನೀರಿಗೆ ಸಂಕಷ್ಟ !


Team Udayavani, Oct 30, 2018, 2:25 AM IST

varahi-water-29-10.jpg

ಕುಂದಾಪುರ: ಭೀಕರ ಮಳೆಗೆ ತೆರೆದ ವಾರಾಹಿ ನದಿಯ ಉಪನದಿ ಜಂಬೂ ನದಿಯ ಗೇಟು ಮುಚ್ಚದಿದ್ದ ಕಾರಣ ಕುಂದಾಪುರ ಪುರಸಭೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹವಾಗದಿದ್ದರೆ ಈ ಬಾರಿಯ ಬೇಸಗೆ ಕಡು ಕಷ್ಟಕಾಲ ತರಲಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ತೆರೆದ ಗೇಟು
ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಂಬೂ ನದಿ ತುಂಬಿ ಹರಿದಿತ್ತು. ಆ.14ರಂದು ವಾರಾಹಿ ಜಲವಿದ್ಯುತ್‌ ಯೋಜನೆ ವತಿಯಿಂದ ಗೇಟು ತೆರೆಯುವ ಪ್ರಕಟನೆ ನೀಡಲಾಗಿತ್ತು. ತದನಂತರದ ದಿನಗಳಲ್ಲಿ ಗೇಟು ಮುಚ್ಚದ ಕಾರಣ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿತ್ತು. ರವಿವಾರ ರಾತ್ರಿ ಪುರಸಭೆಗೆ ಕುಡಿಯುವ ನೀರಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾದಾಗ ಅವಾಂತರ ಗಮನಕ್ಕೆ ಬಂದಿದೆ.

ಏನು ಸಮಸ್ಯೆ
ಹೊಳೆಯಲ್ಲಿ ನೀರು ಖಾಲಿಯಾದರೆ ಐದು ಪಂಚಾಯತ್‌ ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆೆ ಕುಡಿಯುವ ನೀರಿಗೆ ಇರುವ ಏಕೈಕ ಆಧಾರ ಕೈ ಕೊಟ್ಟಂತಾಗುತ್ತದೆ. ಈಗಲೇ ನೀರಿನ ಹರಿವು ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಬರಬಹುದು. 

ಸಮುದ್ರದ ಉಬ್ಬರ ಇಳಿತದ ಸಂದರ್ಭ ಈ ಪ್ರದೇಶಕ್ಕೆ ಹಿನ್ನೀರು ಹೋಗುತ್ತದೆ. ಆಗ ಕೂಡಾ ಗೇಟಿನ ಆವಶ್ಯಕತೆ ಇರುತ್ತದೆ. ಉಪ್ಪುನೀರು ನದಿಯೊಳಗೆ ಮರಳಿ ಹರಿದಾಗ ಗೇಟು ಹಾಕಿರದಿದ್ದರೆ ಕುಡಿಯುವ ನೀರಿನ ಜತೆ ಉಪ್ಪು ನೀರು ಸೇರಿ ಸಮಸ್ಯೆ ಬಿಗಡಾಯಿಸುತ್ತದೆ. ಹಾಗೇನೂ ಸಮಸ್ಯೆಯಾಗಲು ಬಿಡುವುದಿಲ್ಲ. ಕುಡಿಯುವ ನೀರಿನ ಅಗತ್ಯವಿದೆ ಎಂದ ಕೂಡಲೇ ನಮ್ಮಲ್ಲಿ ನೀರಿನ ಲಭ್ಯತೆಯಿದ್ದು ತತ್‌ಕ್ಷಣ ಗೇಟು ಹಾಕಿ ಸಹಕರಿಸುತ್ತೇವೆ ಎಂದು ವಾರಾಹಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಹೆಗಡೆ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕುಂದಾಪುರಕ್ಕೆ ನೀರು
ಜಂಬೂ ನದಿಯಿಂದ ಜಪ್ತಿ ಎಂಬಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ಪುರಸಭೆ ನಾಗರಿಕರಿಗೆ ಕುಡಿಯಲು ನೀರು ಕೊಡಲಾಗುತ್ತದೆ. ಹೀಗೆ ಪೈಪ್‌ಲೈನ್‌ ಮೂಲಕ ನೀರು ತರುವಾಗ ಪೈಪ್‌ಲೈನ್‌ ಹಾದುಹೋಗುವ ಆನಗಳ್ಳಿ, ಬಸ್ರೂರು, ಕೋಣಿ, ಹಂಗಳೂರು, ಕಂದಾವರ, ಭಾಗಶಃ ಕೋಟೇಶ್ವರ ಪಂಚಾಯತ್‌ನ ಜನತೆಗೆ ನೀರು ಒದಗಿಸಲಾಗುತ್ತದೆ. ಪುರಸಭೆಯಲ್ಲಿ 2,815 ಮನೆಗಳಿಗೆ, 35 ಇತರ, 169 ವಾಣಿಜ್ಯ ಸಂಪರ್ಕಗಳಿವೆ. ಅಗ್ನಿಶಾಮಕ ಠಾಣೆ ಹಾಗೂ ಎಂಜಿನಿಯರಿಂಗ್‌ ಕಾಲೇಜಿಗೆ ಕೂಡಾ ಇದೇ ನೀರಿನ ಸಂಪರ್ಕವಿದೆ. 

ರಾಜ್ಯಕ್ಕೆ ನಂ.1
ನೀರಿನ ವಿತರಣೆ ಹಾಗೂ ಬಿಲ್ಲು ಸಂಗ್ರಹದಲ್ಲಿ ಶೇ.85 ವಸೂಲಿ ಮಾಡಿದ ಇಲ್ಲಿನ ಪುರಸಭೆ ರಾಜ್ಯದಲ್ಲಿ ನಂ.1 ಸ್ಥಾನ ಗಳಿಸಿದ ಹೆಗ್ಗಳಿಕೆಯಲ್ಲಿದೆ. 2017-18ರಲ್ಲಿ 1.15 ಕೋ.ರೂ. ನೀರಿನ ಬಿಲ್ಲು ಸಂಗ್ರಹಿಸಿದ್ದು ಈ ವರ್ಷ ಎಪ್ರಿಲ್‌ನಿಂದ ಅ.25ರವರೆಗೆ 59.54 ಲಕ್ಷ ರೂ. ಸಂಗ್ರಹಿಸಿದೆ. ಈ ವರ್ಷ ಈಗಾಗಲೇ 65,12,38,912ಲೀ. ನೀರು ಖರ್ಚಾಗಿದೆ. ಕಳೆದ ವರ್ಷ 102,08,88,741 ಲೀ. ನೀರು ಖರ್ಚಾಗಿದೆ. 

ದಿನವಿಡೀ ನೀರು
ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ ಗಳಿದ್ದು ಈಗ 3 ವಾರ್ಡ್‌ಗಳಿಗೆ ದಿನವಿಡೀ ನೀರು ಪೂರೈಸಲಾಗುತ್ತಿದೆ. ಉಳಿದ 17 ವಾರ್ಡ್‌ಗಳಿಗೆ 8 ಗಂಟೆ ನೀರು ಕೊಡಲಾಗುತ್ತಿದ್ದು ಕೋಡಿಯ ಮೂರು ವಾರ್ಡ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಇಲ್ಲಿಗೆ 17 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ. ಇದಾದ ಬಳಿಕ ಇಡೀ ಪುರಸಭೆ ವ್ಯಾಪ್ತಿಗೆ ದಿನದ 24 ತಾಸು ನೀರು ಕೊಡಲು ಪುರಸಭೆ ಚಿಂತನೆ ನಡೆಸಿದೆ.

ಕ್ರಮ ವಹಿಸಲಾಗುವುದು
ಸಾಮಾನ್ಯವಾಗಿ ವರ್ಷವೂ ನ.15ರ ನಂತರ ಗೇಟು ಹಾಕಲಾಗುತ್ತದೆ. ಹಿನ್ನೀರು ಬಂದಿದೆಯೇ ಎಂದು ಪರಿಶೀಲಿಸಲಾಗುತ್ತಿದ್ದು ಉಪ್ಪುನೀರು ಬಂದ ಕೂಡಲೇ ಗೇಟು ಹಾಕಲಾಗುತ್ತದೆ. ಪುರಸಭೆಗೆ ನೀರು ಕಡಿಮೆಯಾಗಿದೆ ಎಂದು ಮಾಹಿತಿ ತಿಳಿದ ಕೂಡಲೇ ಗೇಟು ಹಾಕಲು ಕ್ರಮ ವಹಿಸಲಾಗುವುದು.
– ಅಶೋಕ್‌, ಸಹಾಯಕ ಎಂಜಿನಿಯರ್‌, ವಾರಾಹಿ ಯೋಜನೆ

ಮಾಹಿತಿ ಕೊಡಲಾಗಿದೆ
ವಾರಾಹಿ ಯೋಜನೆಯವರಿಗೆ ನೀರು ಕಡಿಮೆಯಾದ ಕುರಿತು ಮಾಹಿತಿ ಕೊಡಲಾಗಿದೆ. ಅವರು ಗೇಟು ಹಾಕಿದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ.
– ಮಂಜುನಾಥ್‌ ಶೆಟ್ಟಿ, ಎಂಜಿನಿಯರ್‌, ಪುರಸಭೆ, ಕುಂದಾಪುರ

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.