ಪರಭಾಷಿಗರಿಂದ ಕನ್ನಡದ ಕೆಲಸ


Team Udayavani, Oct 30, 2018, 11:52 AM IST

parabhashi.jpg

ಬೆಂಗಳೂರು: ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಕೇವಲ ಕನ್ನಡಿಗರಿಂದ ಆಗುತ್ತಿದೆಯೇ? ಇಲ್ಲ, ಕನ್ನಡೇತರರೂ ಕನ್ನಡದ ಕಾವಲುಗಾರರಾಗಿ ದಶಕಗಳಿಂದ ಶ್ರಮಿಸುತ್ತಿದ್ದಾರೆ. ಕಾವೇರಿ ವಿವಾದ, ಗಡಿ ಸಮಸ್ಯೆ ಎದುರಾದಾಗ ಕನ್ನಡದ ದನಿಯಾಗುವ ಪರಭಾಷಿಗರು, ಸೌಹಾರ್ದತೆ ಸಾರುತ್ತಿದ್ದಾರೆ.

ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ಬದುಕು ಕಟ್ಟುಕೊಂಡವರು ಭಾಷಾ ಸೌಹಾರ್ದ ಸಮಿತಿ, ಸಂಘ, ಕೂಟಗಳನ್ನೂ ಕಟ್ಟಿಕೊಂಡು ಕನ್ನಡ ಸಾಹಿತ್ಯ ಅಧ್ಯಯನ, ಕವಿ-ಸಾಹಿತಿಗಳ ಸ್ಮರಣೆ, ಉತ್ತಮ ಕೃತಿಗಳ ಪರಸ್ಪರ ಅನುವಾದ ಸೇರಿದಂತೆ ಸಂಸ್ಕೃತಿ ವಿನಿಮಯ ಮಾಡಿಕೊಳ್ಳುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಅವುಗಳಲ್ಲಿ ತೆಲುಗು ವಿಜ್ಞಾನ ಸಮಿತಿ, ಕರ್ನಾಟಕ ತೆಲುಗು ಅಕಾಡೆಮಿ, ಕನ್ನಡ ತಮಿಳು ಸಂಘ, ಕೈಕಾಳಿ ಸಂಘ, ಈಸ್ಟರ್ನ್ ಕಲ್ಚರ್‌ ಅಸೋಸಿಯೇಷನ್‌, ಕರ್ನಾಟಕ ಕೇರಳ ಸೌಹಾರ್ದ ಸಂಘಗಳು ಪ್ರಮುಖವಾಗಿವೆ.

ತೆಲುಗು ವಿಜ್ಞಾನ ಸಮಿತಿಯು ಕಳೆದ ಆರು ದಶಕಗಳಿಂದ ಕನ್ನಡ ತೆಲುಗು ಸೌಹಾರ್ದತಾ ಕಾರ್ಯದಲ್ಲಿ ತೊಡಗಿದೆ. 2,500ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಹೊಂದಿರುವ ಸಮಿತಿ, ನಾಡಹಬ್ಬಗಳ ಆಚರಣೆ, ಕನ್ನಡ ನಾಟಕೋತ್ಸವ, ವಿಚಾರ ಸಂಕಿರಣ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತೆಲುಗು ಭಾಷಿಕರಿಗೆ ಕನ್ನಡದ ಕಂಪು ಪಸರಿಸುತ್ತಿದೆ.

ಜತೆಗೆ ಕನ್ನಡದ ಪ್ರತಿಷ್ಠಿತ ಪುಸ್ತಕಗಳನ್ನು ತೆಲುಗು ಭಾಷೆಗೆ, ಅಲ್ಲಿನ ಶ್ರೇಷ್ಠ ಕವಿಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ. ಸಮಿತಿಯಿಂದ ತಿರುಮಲ ವಿದ್ಯಾನಿಕೇತನ ಶಾಲೆ ಆರಂಭಿಸಿದ್ದು, ಇಲ್ಲಿ ಕಡ್ಡಾಯ ಕನ್ನಡ ಜಾರಿಗೊಳಿಸಲಾಗಿದೆ. ಅಲ್ಲದೆ, ಕರ್ನಾಟಕದಿಂದ ಒಬ್ಬರನ್ನು ಆಂಧ್ರಪ್ರದೇಶದಿಂದ ಒಬ್ಬ ಸಾಧಕರನ್ನು ಆಯ್ಕೆ ಮಾಡಿ ಪ್ರತಿವರ್ಷ “ಶ್ರೀ ಕೃಷ್ಣದೇವರಾಯ’ ಪ್ರಶಸ್ತಿ ನೀಡುತ್ತಿದೆ.

“ನಾವೂ ಕನ್ನಡಿಗರೇ. ನಾಡು-ನಡಿಯ ವಿಚಾರ ಬಂದಾಗ ನಾವು ಕರ್ನಾಟಕದ ಪರ ನಿಲ್ಲುತ್ತೇವೆ’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಡಾ.ರಾಧಾಕೃಷ್ಣರಾಜು. ಇದರಂತೆಯೇ ತಮಿಳು ಸಂಘವು ಕನ್ನಡ ಶಾಲೆ, ಗ್ರಂಥಾಲಯ ನಡೆಸುತ್ತಿದೆ. ಕನ್ನಡ-ತಮಿಳು ಪುಸ್ತಕ ಅನುವಾದ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಿವೆ.

ಕನ್ನಡದ‌ ಗಡಿಯಂಕರು: ಕಾಸರಗೋಡು ಕೇರಳದ ಪಾಲಾಗಿದ್ದರೂ, ಅಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮರೆಯಾಗಿಲ್ಲ. ಇಂದಿಗೂ ಬಹುತೇಕ ಕನ್ನಡಿಗರು ಕೇರಳ ನಾಗರಿಕರಾಗಿ ಅಲ್ಲಿದ್ದಾರೆ. ಅವರಲ್ಲಿನ ಕನ್ನಡವನ್ನು ಜೀವಂತವಾಗಿಸುವ ಹಾಗೂ ಕನ್ನಡ ಜಾನಪದ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ.

ಹತ್ತು ಮಂದಿ ಸ್ಥಳೀಯರು ಸೇರಿಕೊಂಡು ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಕಟ್ಟಿಕೊಂಡಿದ್ದು, ಗಡಿಭಾಗದ ಮಲಯಾಳಂ ಹಾಗೂ ಕನ್ನಡ ಶಾಲೆಗಳಿಗೆ ಪ್ರತಿ ತಿಂಗಳಿಗೊಮ್ಮೆ ತೆರಳಿ ಜಾನಪದ ಪಯಣ, ಚಿನ್ನರ ಕಲರವ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅಲ್ಲದೆ, ಗಡಿನಾಡು ಸಾಹಿತ್ಯ ಸಂಸ್ಕೃತಿ ಪಯಣ ಎಂಬ ಕಾರ್ಯಕ್ರಮದ ಮೂಲಕ ಕಾಸರಗೋಡು ಸುತ್ತಮುತ್ತಲ ಪ್ರದೇಶದಲ್ಲಿ ಸಾಹಿತಿಗಳನ್ನು ಕೂಡಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದೆ ಎನ್ನುತ್ತಾರೆ ಅಕಾಡೆಮಿ ಮುಖ್ಯಸ್ಥ ಎ.ಆರ್‌.ಸುಬ್ಬಯ್ಯ ಕಟ್ಟೆ.

ಈಗಾಗಲೇ ಕಾಸರಗೋಡು ಕನ್ನಡ ಸಾಹಿತಿಗಳ 20ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಕಾಸರಗೋಡಿನ ಹಿನ್ನೆಲೆ ಹೊಂದಿದ 600ಕ್ಕೂ ಹೆಚ್ಚು ಸಾಹಿತಿಗಳನ್ನು ಗುರುತಿಸಿದ್ದು, ಮೂರು ಹಂತಗಳಲ್ಲಿ ಪುಸ್ತಕಗಳನ್ನು ಹೊರತರುತ್ತಿದೆ. ಮೊದಲ ಹಂತದ ಪುಸ್ತಕವು ರಾಜ್ಯೋತ್ಸವದ ಅಂಗವಾಗಿ ನ.14ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಸಾಹಿತ್ಯ ಮಂದಿರ: ಕಳೆದ ಎಂಟು ದಶಕಗಳಿಂದ ಹೈದರಾಬಾದ್‌ ನಗರದಲ್ಲಿ ಕನ್ನಡ ಸೇವೆಯಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ನಿರತವಾಗಿದೆ. ಅಲ್ಲಿ ಕರ್ನಾಟಕದಿಂದ ಹೋದವರಿಗೆ ಹಾಗೂ ಆಸಕ್ತರಿಗಾಗಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ. ಕನ್ನಡದ ಉಚಿತ ತರಗತಿಗಳನ್ನು ನಡೆಸಿ, ಪರಿಚಯ ಎಂಬ ಹೆಸರಿನ ಕನ್ನಡ ಮಾಸ ಪತ್ರಿಕೆ ಸಹ ತರುತ್ತಿದೆ.

ಇಲ್ಲಿನ ಸದಸ್ಯರು ನಾಟಕತಂಡ ಮಾಡಿಕೊಂಡು ಟಿ.ಪಿ.ಕೈಲಾಸಂ, ಶ್ರೀರಂಗ, ಬೀಚಿ, ಕಂಬಾರರ ನಾಟಕಗಳನ್ನು ಹೈದರಾಬಾದ್‌ ಸುತ್ತಮುತ್ತ ಪ್ರದರ್ಶಿಸುತ್ತಿದ್ದಾರೆ. ಜತೆಗೆ ದಸರಾ ಸಮಯದಲ್ಲಿ “ನಾಡಹಬ್ಬ’ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸಿಕೊಡಲಾಗುತ್ತಿದೆ ಎನ್ನುತ್ತಾರೆ ಮಂದಿರ ಅಧ್ಯಕ್ಷ ವಿಠuಲ ಜೋಶಿ. 

ಎಚ್‌ಎಎಲ್‌ ಕನ್ನಡ ಸಂಘ: ಕನ್ನಡಿಗರಿಗೆ ಉದ್ಯೋಗ, ಕನ್ನಡ ಅನುಷ್ಠಾನ, ಕನ್ನಡ ನಾಡ ಕಲೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಎಚ್‌ಎಲ್‌ ಕೇಂದ್ರೀಯ ಕನ್ನಡ ಸಂಘ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತರೆ ಭಾಷಿಕರಿಗೆ ಕನ್ನಡ ಕಲಿಸಲು ದಿನ ಬಿಟ್ಟು ದಿನ ಕನ್ನಡ ತರಗತಿ ನಡೆಸಲಾಗುತ್ತದೆ. ವಾರ್ಷಿಕ 400ಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಲಾಗುತ್ತಿದೆ.

ಜತೆಗೆ ಪ್ರತಿ ತಿಂಗಳು ಸಾಹಿತಿ, ಕವಿಗಳನ್ನು ಕರೆಸಿ ಮನದ ಮಾತು, ಮನೆ ಮನೆ ಕನ್ನಡ ವಿಶೇಷ ಕಾರ್ಯಕ್ರಮ ಮಾಡುತ್ತಾರೆ. ಪ್ರತಿ ವರ್ಷ ಅ.31ರಂದು ಪಂಜಿನ ಮೆರವಣಿಗೆ ಮಾಡಿ, ಸಂಶೋಧಕ ಡಾ.ಚಿದಾನಂದಮೂರ್ತಿ ಅವರ ಗರಿಮೆ-ಹಿರಿಮೆ ಪುಸ್ತಕದ ಎರಡು ಸಾವಿರ ಪುಸ್ತಕ ಹಂಚುತ್ತೇವೆ ಎಂದು ಸಂಘದ ಅಧ್ಯಕ್ಷ ರಾಮಸ್ವಾಮಿ ತಿಳಿಸುತ್ತಾರೆ. ಇದೇ ರೀತಿ ಬಿಇಎಲ್‌, ಎಚ್‌ಎಂಟಿ, ಮೈಕೋ ಸಂಸ್ಥೆಗಳಲ್ಲಿಯೂ ಕನ್ನಡ ಪರ ಕಾರ್ಯಚಟುವಟಿಕೆಗಳು ಸಾಗುತ್ತಿವೆ.

ಸೌಹಾರ್ದತೆಯೇ ಭಾಷೆಯ ಬೆಳವಣಿಗೆಗೆ ಮೂಲಕಾರಣ. ಇಲ್ಲಿರುವ ಅನ್ಯಭಾಷಿಕರು ಕನ್ನಡಿಗರೇ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿಗಳು, ಸಾಹಿತ್ಯ ಬರಹಗಳನ್ನು ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ಸೌಹಾರ್ದತೆ ಮೆರೆಯುತ್ತಿದ್ದಾರೆ.
-ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.