ಉಡುಪಿ ಜಿಲ್ಲೆಯ 21 ಸರಕಾರಿ ಆಸ್ಪತ್ರೆಗೆ ಇಸಿಜಿ ಯಂತ್ರ


Team Udayavani, Nov 3, 2018, 10:34 AM IST

cord.jpg

ಕುಂದಾಪುರ: ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌ ಅವರು ರೂಪಿಸಿದ “ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌’ (ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ) ವಾಟ್ಸಾಪ್‌ ವೈದ್ಯಕೀಯ ಬಳಗದ ಮೂಲಕ ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರ ನೀಡುವ ಕಾರ್ಯ ಮುಂದುವರಿದಿದ್ದು, ಈ ದೀಪಾವಳಿಗೆ ಉಡುಪಿ ಜಿಲ್ಲೆಯ 21 ಸರಕಾರಿ ಆಸ್ಪತ್ರೆಗಳಿಗೆ ವಿತರಣೆ ನಡೆಯಲಿದೆ. 

ಡಾ| ಕಾಮತರು ಈ ವಾಟ್ಸಾಪ್‌ ಬಳಗ ರಚಿಸಿದ್ದು, ಕೊಡಗು, ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡದ 250 ವೈದ್ಯರು, ಈ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಸದಸ್ಯರಾಗಿದ್ದರು. ಮಂದಾರ್ತಿ, ಶಂಕರನಾರಾಯಣ, ತ್ರಾಸಿ, ತೆಕ್ಕಟ್ಟೆ, ತಲ್ಲೂರು, ಬಾಕೂರು, ಉಪ್ಪುಂದ, ಸಿದ್ದಾಪುರದಂತಹ ಗ್ರಾಮಾಂತರ ಪ್ರದೇಶದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ಐದು ಜಿಲ್ಲೆಗಳ ಆ್ಯಂಬುಲೆನ್ಸ್‌ ಚಾಲಕರಿದ್ದಾರೆ. ಎಂಬಿಬಿಎಸ್‌, ಆಯುಷ್‌ನ ಆಯುರ್ವೇದ, ಯುನಾನಿ, ಅಲೋಪತಿಯವರಿಗೂ ಸದಸ್ಯತ್ವದ ಅವಕಾಶ ಇದೆ. ವೈದ್ಯಕೀಯ ಹಾಗೂ ಹೃದ್ರೋಗ ಸಂಬಂಧಿ ಮಾಹಿತಿ ವಿನಿಮಯಕ್ಕಷ್ಟೇ ಸೀಮಿತವಾಗಿ ಮನೆಬಾಗಿಲಿನಲ್ಲಿ ಹೃದ್ರೋಗ ಚಿಕಿತ್ಸೆ ನೀಡುತ್ತಿದೆ. ಈ ಬಳಗ ಅನಂತರದ ದಿನಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದೆ. 

ಬೆಳವಣಿಗೆ
ಬಳಗ ಆರಂಭವಾದ ಆರೇ ತಿಂಗಳಲ್ಲಿ 6 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳನ್ನು ಕರ್ಣಾಟಕ ಬ್ಯಾಂಕ್‌ ಸಹಿತ ವಿವಿಧ ದಾನಿಗಳ ನೆರವಿನಿಂದ ನೀಡ ಲಾಗಿದೆ. ಈ ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲಿ, ಸರಕಾರಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿ ಕೊಳ್ಳ ಬಹುದು. ಇದನ್ನನುಸರಿಸಿ ಹೃದಯದ ಸ್ಥಿತಿಗತಿ ಗಮನಿಸಿ ಅಗತ್ಯ ಚಿಕಿತ್ಸೆ ಅಲ್ಲೇ ಲಭ್ಯವಿದ್ದರೆ ದೊಡ್ಡ ಆಸ್ಪತ್ರೆಗಳ ಸಹವಾಸ ತಪ್ಪುತ್ತದೆ. ಈ ವಾಟ್ಸಾಪ್‌ ಗ್ರೂಪ್‌ ಆರಂಭಿಸಿ ದಾಗ “ಉದಯವಾಣಿ’ ವರದಿ ಮಾಡಿತ್ತು.

ಎಲ್ಲೆಲ್ಲಿ ?
ದೀಪಾವಳಿಗೆ ಕಾರ್ಕಳ ತಾ|ನ ಹಿರ್ಗಾನ, ಮಾಳ, ಇರ್ವತ್ತೂರು, ಬೈಲೂರು, ಈದು, ಕುಕ್ಕುಂದೂರು, ಕುಂದಾಪುರ ತಾ|ನ ಬೈಂದೂರು, ಶಿರೂರು, ಕಿರಿಮಂಜೇಶ್ವರ, ಗಂಗೊಳ್ಳಿ, ಕುಂಭಾಶಿ, ಬಸ್ರುರೂ, ಕಂಡೂರು, ಸಿದ್ದಾಪುರ, ಹಳ್ಳಿಹೊಳೆ, ಹಾಲಾಡಿ, ಬೆಳ್ವೆ, ಬಿದ್ಕಲ್‌ಕಟ್ಟೆ, ನಾಡ, ಕೊರ್ಗಿ, ಉಡುಪಿ ತಾ|ನ ಕೆಮ್ಮಣ್ಣು ಆಸ್ಪತ್ರೆಗಳಿಗೆ ನ.6, 7, 8ರಂದು ವಿತರಿಸಲಾಗುವುದು.

ಶತಕದೆಡೆಗೆ
ಡಿಸೆಂಬರ್‌ ಅಂತ್ಯದೊಳಗೆ 100 ಇಸಿಜಿ ಯಂತ್ರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಕಾಸರಗೋಡು, ದ.ಕ. ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದ 34 ಕಡೆ ಇಸಿಜಿ ಯಂತ್ರ ನೀಡಲಾಗಿದೆ. ಕಾಸರಗೋಡಿನಲ್ಲಿ 15, ಕುಂದಾಪುರ 15, ಕಾರ್ಕಳ 8, ಉತ್ತರಕನ್ನಡ 8, ಚಿಕ್ಕಮಗಳೂರು 7, ಶಿವಮೊಗ್ಗ 5, ತೀರ್ಥಹಳ್ಳಿ 7, ಮಂಗಳೂರಿನ ಬೀಡಿ ಕಾರ್ಮಿಕರ ಆಸ್ಪತ್ರೆಗೆ 2 ಇಸಿಜಿ ಯಂತ್ರಗಳನ್ನು ನೀಡಲಾಗುತ್ತಿದೆ. 

ದೇಶಾದ್ಯಂತ ಆಗಲಿ
ಜನೌಷಧಿ ಕೇಂದ್ರಗಳಿಗೂ ಇಸಿಜಿ ಯಂತ್ರ ವಿತರಿಸಲಾಗಿದೆ. ಅನೇಕ ದಾನಿಗಳು ಇಸಿಜಿ ಯಂತ್ರ ನೀಡುತ್ತಿದ್ದು, ಯಾರಿಗೂ ಹೊರೆಯಾಗುವುದಿಲ್ಲ. ಈ ಅಭಿಯಾನ ದೇಶಾದ್ಯಂತ ನಡೆಯಬೇಕು. ಸೌಲಭ್ಯ ಇಲ್ಲದೆಡೆ ಹೃದ್ರೋಗಿಗಳು ಜೀವ ಕಳೆದುಕೊಳ್ಳುವಂತಾಗಬಾರದು. ಅಂತಹವರಿಗೆ ನೆರವಾಗಬೇಕು.
ಡಾ| ಪದ್ಮನಾಭ ಕಾಮತ್‌, ಹೃದ್ರೋಗ ವಿಭಾಗ ಮುಖ್ಯಸ್ಥರು, ಕೆಎಂಸಿ

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

14-

Kundapura ಭಾಗದ ಅಪರಾಧ ಸುದ್ದಿಗಳು

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.