ಗಲ್ಫ್ ರಾಷ್ಟ್ರಗಳಲ್ಲಿ ಪ್ರತಿನಿತ್ಯ 10 ಭಾರತೀಯ ಕಾರ್ಮಿಕರ ಸಾವು!
Team Udayavani, Nov 6, 2018, 6:05 AM IST
ಹೊಸದಿಲ್ಲಿ: ಗಲ್ಫ್ ದೇಶಗಳಿಗೆ ಭಾರತೀಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಅರಸಿ ತೆರಳುತ್ತಿದ್ದಾರಾದರೂ, ಅಲ್ಲಿ ಕಳೆದ ಆರು ವರ್ಷಗಳಲ್ಲಿ ಸರಾಸರಿ ದಿನಕ್ಕೆ 10 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಆರ್ಟಿಐ ಪ್ರತಿ ಕ್ರಿಯೆಗಳಿಂದ ತಿಳಿದುಬಂದಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಎಂಬ ಸಂಸ್ಥೆಯ ವೆಂಕಟೇಶ್ ನಾಯಕ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಿಂದ ಪಡೆದ ಆರ್ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಬಹರೈನ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾದ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆಯಲಾಗಿದೆ.
2012 ಮತ್ತು 2018ರ ಅವಧಿಯಲ್ಲಿ 24570 ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಕಳುಹಿಸುವ ಹಣದ ಪೈಕಿ ಗಲ್ಫ್ ದೇಶಗಳದ್ದೇ ಅರ್ಧ ಕ್ಕಿಂತಲೂ ಹೆಚ್ಚಿರುತ್ತದೆ. 28 ಲಕ್ಷ ಕೋಟಿ ರೂ. 2012 ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ವಿದೇಶಗಳಿಂದ ಹರಿದು ಬಂದಿದ್ದು, ಈ ಪೈಕಿ 14 ಲಕ್ಷ ಕೋಟಿ ರೂ. ಗಲ್ಫ್ ದೇಶಗಳಿಂದ ಬಂದಿದೆ. ಹೀಗಾಗಿ ಒಮನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ ಹೋಲಿಸಿದರೆ 187 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಾಯಕ್ ಹೇಳಿದ್ದಾರೆ. ಇದೇ ರೀತಿ, ಬಹರೈನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ 183 ಜನರು ಸಾವನ್ನಪ್ಪಿದ್ದಾರೆ.
ಗಲ್ಫ್ ದೇಶಗಳಿಗೆ ಭಾರತೀಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಅರಸಿ ತೆರಳುತ್ತಿದ್ದಾರಾದರೂ, ಅಲ್ಲಿ ಕಳೆದ ಆರು ವರ್ಷಗಳಲ್ಲಿ ಸರಾಸರಿ ದಿನಕ್ಕೆ 10 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಆರ್ಟಿಐ ಪ್ರತಿ ಕ್ರಿಯೆಗಳಿಂದ ತಿಳಿದುಬಂದಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಎಂಬ ಸಂಸ್ಥೆಯ ವೆಂಕಟೇಶ್ ನಾಯಕ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಿಂದ ಪಡೆದ ಆರ್ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಬಹರೈನ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾದ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆಯಲಾಗಿದೆ.
2012 ಮತ್ತು 2018ರ ಅವಧಿಯಲ್ಲಿ 24570 ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಕಳುಹಿಸುವ ಹಣದ ಪೈಕಿ ಗಲ್ಫ್ ದೇಶಗಳದ್ದೇ ಅರ್ಧ ಕ್ಕಿಂತಲೂ ಹೆಚ್ಚಿರುತ್ತದೆ. 28 ಲಕ್ಷ ಕೋಟಿ ರೂ. 2012 ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ವಿದೇಶಗಳಿಂದ ಹರಿದು ಬಂದಿದ್ದು, ಈ ಪೈಕಿ 14 ಲಕ್ಷ ಕೋಟಿ ರೂ. ಗಲ್ಫ್ ದೇಶಗಳಿಂದ ಬಂದಿದೆ. ಹೀಗಾಗಿ ಒಮನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ ಹೋಲಿಸಿದರೆ 187 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಾಯಕ್ ಹೇಳಿದ್ದಾರೆ. ಇದೇ ರೀತಿ, ಬಹರೈನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ 183 ಜನರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ