ಪಟಾಕಿ ಸದ್ದಿಗೆ ನಲುಗಿದ ಮೂಕ ಜೀವ


Team Udayavani, Nov 9, 2018, 11:47 AM IST

pata-saddige.jpg

ಬೆಂಗಳೂರು: ಉದ್ಯಾನ ನಗರಿ ತನ್ನದೇ ಆದ ರೀತಿಯಲ್ಲಿ ಪ್ರಾಣಿಪಕ್ಷಿಗಳಿಗೂ ತನ್ನೊಡಲಲ್ಲಿ ರಕ್ಷಣೆ ನೀಡಿದೆ. ಆದರೆ ಕಳೆದ ಮೂರು ದಿನಗಳಿಂದ ಸಂಭ್ರಮ ಸಡಗರಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದು, ಹಬ್ಬದ ಹಿನ್ನೆಲೆಯಲ್ಲಿ ಸಿಡಿಯುತ್ತಿರುವ ಪಟಾಕಿಗಳಿಗೆ ಹತ್ತಾರು ಜನರು ಕಣ್ಣು ಕಳೆದುಕೊಂಡಿರುವುದು ಒಂದೆಡೆಯಾದರೆ, ಪಟಾಕಿ ಸಿಡಿದು ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಂಡ ಹಾಗೂ ಗಾಯ ಮಾಡಿಕೊಂಡು ನೋವು ಅನುಭವಿಸಿದ ಘಟನೆಗಳು ನಗರದಲ್ಲಿ ನಡೆದಿವೆ. 

ಪಟಾಕಿ ಸಿಡಿತದಿಂದಾಗಿ ಇಬ್ಬರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದು, 66 ಜನರಿಗೆ ಸುಟ್ಟ ಗಾಯಗಳಾಗಿವೆ. ಅದೇ ರೀತಿ ಹತ್ತಾರು ಮೂಕ ಪ್ರಾಣಿಗಳಿಗೆ ಗಂಭೀರ ಗಾಯಗಳಾಗಿದ್ದು, ಥಣಿಸಂದ್ರದಲ್ಲಿ ಪಟಾಕಿ ಸಿಡಿತದಿಂದ ಕೋತಿಯೊಂದು ಪ್ರಾಣ ಕಳೆದುಕೊಂಡಿದೆ. ಇದರೊಂದಿಗೆ ರಾತ್ರಿ ಸಂಚಾರ ಮಾಡುವಂತಹ ಗೋಬೆ ಹಾಗೂ ಬಾವಲಿಗಳು ಕಳೆದ ಎರಡು ಮೂರು ದಿನಗಳಿಂದ ಊಟವಿಲ್ಲದೆ ನರಳುತ್ತಿರುವುದು ಕಂಡುಬಂದಿದೆ. 

ಕಿಡಿಗೇಡಿಗಳು ಬನಶಂಕರಿಯಲ್ಲಿ ಪಟಾಕಿಯನ್ನು ಕೋತಿಯ ಮೇಲೆ ಎಸೆದ ಪರಿಣಾಮ ಕೋತಿಯ ಎಡಗೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ತ್ರಾವವಾಗಿದೆ. ಪ್ರಾಣಿ ಪ್ರೇಮಿಗಳು ಸ್ಥಳಕ್ಕೆ ಧಾವಿಸುವ ವೇಳೆ ಭಯಗೊಂಡ ಕೋತಿ ಅಲ್ಲಿಂದ ಓಡಿ ಹೋಗಿದೆ. ಅದೇ ರೀತಿ ಥಣಿಸಂದ್ರದಲ್ಲಿ ಕೋತಿ ಮೃತಪಟ್ಟಿದ್ದು, ಜಿಗಣಿಯಲ್ಲಿ ಕಾಲಿಗೆ ಗಾಯಗೊಂಡಿದ್ದ ಕೋತಿಯನ್ನು ರಕ್ಷಣೆ ಮಾಡಲಾಗಿದೆ. 

ಇದರೊಂದಿಗೆ ಕಳೆದ ಎರಡು ಮೂರು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾವು ಹಾಗೂ ಇಲಿಗಳ ಹಾವಳಿ ಹೆಚ್ಚಾಗಿದ್ದು, ಹಲವಾರು ಭಾಗಗಳಲ್ಲಿ ಮನೆಗಳಿಗೆ ಹಾವು ನುಗ್ಗಿದ ಪ್ರಕರಣಗಳು ವರದಿಯಾಗಿವೆ. ಶಬ್ದ, ಹೊಗೆ ಹಾಗೂ ಜನರ ಕಿರುಚಾಟ ಹಾಗೂ ಓಡಾಟದಿಂದ ಭಯಭೀತಗೊಂಡಿರುವ ಮೂಕ ಪ್ರಾಣಿಗಳು ಗಲಿಬಿಲಿಗೊಂಡು ಒಂದೆ ಇರಲಾಗದೆ ಮನೆಗಳಿಗೆ ನುಗ್ಗುವಂತಹ ವಾತಾವರಣ ಸೃಷ್ಟಿಯಾಗಿತ್ತು. 

ದಾರಿ ಕಾಣದೆ ಕಂಗಾಲಾದ ಕೊಕ್ಕರೆ!: ಬುಧವಾರ ಸಂಜೆ ವೇಳೆಗೆ ಆಕಾಶದ ಹೊಕ್ಕ ರಾಕೆಟ್‌ಗಳ ಹಾವಳಿಯಿಂದ ತೀವ್ರ ಹೊಗೆ ಸೃಷ್ಟಿಯಾಗಿತ್ತು. ಇದರಿಂದಾಗಿ ನಾಗಾವಾರ ಕೆರೆಯಿಂದ ಗೂಡಿಗೆ ಮರಳುತ್ತಿದ್ದ ಕೊಕ್ಕರೆಯ ಗುಂಪಿನಲ್ಲಿದ್ದ ಒಂದು ಕೊಕ್ಕರೆ ದಾರಿ ಕಾಣದೆ ಆಕಾಶದಲ್ಲಿ ತಿರುಗಾಡಿದ ಘಟನೆ ನಡೆದಿದೆ. ಹೊಗೆಯಿಂದ ಉಸಿರುಗಟ್ಟಿದಂತಾಗಿ ಹಾಗೂ ಗೂಡಿಗೆ ಹೋಗುವ ದಾರಿ ಕಾಣದೇ ಅಲ್ಲೇ ಸುತ್ತು ಹೊಡೆಯುವ ಕೊಕ್ಕರೆಯನ್ನು ರಸ್ತೆಯಲ್ಲಿ ನಿಂತು ಸಾರ್ವಜನಿಕರು ನೋಡಿದ ಘಟನೆ ನಡೆದಿದ್ದು, ಸುಮಾರು ಅರ್ಧಗಂಟೆಯ ಬಳಿಕ ಚೇತರಿಸಿಕೊಂಡ ಕೊಕ್ಕರೆ ಕೊನೆಗೂ ಗೂಡು ಸೇರಿದೆ. 

ಮೂರ್‍ನಾಲ್ಕು ದಿನಗಳಿಂದ ಊಟವಿಲ್ಲ!: ದೀಪಾವಳಿ ಹಬ್ಬ ಆರಂಭವಾದ ದಿನಗಳಿಂದ ನಗರದ ಯಾವುದೇ ಭಾಗದಲ್ಲಿ ಗೋಬೆಗಳಾಗಲಿ, ಬಾವಲಿಗಳಾಗಿ ಕಾಣಿಸಿಕೊಂಡಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದಂದು ಸಿಡಿಯುವಂತಹ ಪಟಾಕಿಗಳ ಸದ್ದು ಹಾಗೂ ಬೆಳಕಿಗೆ ತೀವ್ರ ಭಯಭೀತಗೊಳ್ಳುತ್ತವೆ. ಈ ಕಾರಣಗಳಿಂದ ರಾತ್ರಿ ಆಹಾರ ಹುಡುಕಿ ಹೋಗುವ ಪಕ್ಷಿಗಳು ಎರಡು ಮೂರು ದಿನಗಳಿಂದ ಎಲ್ಲಿಯೂ ಕಾಣಸುತ್ತಿಲ್ಲ ಎನ್ನುತ್ತಾರೆ ವನ್ಯಜೀವಿ ಸಂರಕ್ಷಕರು. 

ನಾಯಿಗಳ ಗೋಳು ಹೇಳತೀರದು!: ನಗರದಲ್ಲಿ ಸಿಡಿಯುತ್ತಿರುವ ಪಟಾಕಿಗಳ ಸದ್ದಿಗೆ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಶ್ವಾನಗಳು. ಪಟಾಕಿಗಳ ಸದ್ದಿಗೆ ಕಂಗಾಲಾದ ನಾಯಿಗಳು ವಿಚಿತ್ರವಾಗಿ ವರ್ತಿಸಿ, ಜೋರಾಗಿ ಬೊಗಳುತ್ತಿದ್ದ ದೃಶ್ಯಗಳು ನಗರದ ಹಲವಾರು ಕಡೆಗಳಲ್ಲಿ ನಡೆದಿವೆ. ಇನ್ನು ಕೆಲ ಬಡಾವಣೆಗಳಲ್ಲಿ ಸಾಕು ನಾಯಿಗಳು ಪಟಾಕಿ ಸದ್ದಿಗೆ ಗಾಬರಿಗೊಂಡು ಮನೆ ಬಿಟ್ಟು ಓಡಿ ಹೋಗಿರುವುದು, ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಕ್ಯೂಪ ಸಂಸ್ಥೆಯ ಟ್ರಸ್ಟಿ ಸುಪರ್ಣ ಗಂಗೋಲಿ ಮಾಹಿತಿ ನೀಡಿದರು. 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ 10ಕ್ಕೂ ಹೆಚ್ಚು ಕೋತಿಗಳಿಗೆ ಗಾಯಗಳಾಗಿದ್ದು, ಥಣಿಸಂದ್ರದಲ್ಲಿ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟಿದೆ. ಇದರೊಂದಿಗೆ ನಗರದ ಹಲವಾರು ಕಡೆಗಳಲ್ಲಿ ಹಾವುಗಳು ಹಾಗೂ ಇಲಿಗಳು ಮನೆಯೊಳಗೆ ಬಂದಿರುವ ಬಗ್ಗೆ ಕರೆಗಳು ಬಂದಿದ್ದು, ಪಟಾಕಿ ಶಬ್ದಕ್ಕೆ ಗೋಬೆಗಳು ಹಾಗೂ ಬಾವಲಿಗಳು ಆಹಾರಕ್ಕಾಗಿ ಹೊರಗೆ ಬಂದಿಲ್ಲ.
-ಕೆ.ಮಹೇಶ್‌, ವಜ್ಯಜೀವ ಸಂರಕ್ಷಕರು

* ವೆಂ. ಸುನೀಲ್‌ಕುಮಾರ್‌

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.