ಆಹಾರ್: ಉಚಿತ ಆರೋಗ್ಯ ತಪಾಸಣೆ ಶಿಬಿರ
Team Udayavani, Nov 13, 2018, 4:32 PM IST
ಮುಂಬಯಿ: ಆಹಾರ್ವಲಯ 10ರ ಆಶ್ರಯದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಶಿಬಿರವು ಇತ್ತೀಚೆಗೆ ದಹಿಸರ್ ಪೂರ್ವದ ಹೊಟೇಲ್ ಗೋಕುಲಾನಂದ ಸಭಾಂಗಣದಲ್ಲಿ ನಡೆಯಿತು.
ಹೊಟೇಲ್ ಕಾರ್ಮಿಕರಿಗಾಗಿ ನಡೆದ ಈ ಶಿಬಿರದಲ್ಲಿ ರಹೇಜಾ ಹಾಸ್ಪಿಟಲ್ ಮಾಹೀಮ್ ಇಲ್ಲಿನ ವೈದ್ಯರು ಪಾಲ್ಗೊಂಡು ಹೊಟೇಲ್ ಕಾರ್ಮಿಕರ ಆರೋಗ್ಯ ತಪಾಸಣೆಗೈದರು. ನೇತ್ರ ಪರೀಕ್ಷೆಯ ಬಳಿಕ ಅರ್ಹರಿಗೆ ಕನ್ನಡಕ ವಿತರಿಸಲಾಯಿತು. ವೈದ್ಯರು ಆರೋಗ್ಯ ತಪಾಸಣೆಯ ಅನಂತರ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಹಾರ್ನ ವಲಯ 10ರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಆಹಾರ್ನ ಪೊಲೀಸ್ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತೀಶ್ ಬಿ. ಶೆಟ್ಟಿ, ಆಹಾರ್ನ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯರು, ಬೊರಿವಲಿ-ದಹಿಸರ್ ಪರಿಸರದ ಹೊಟೇಲ್ ಉದ್ಯಮಿಗಳು, ಹೊಟೇಲ್ ಆಡಳಿತಗಾರರು, ಗೋಕುಲಾನಂದ ಹೊಟೇಲ್ನ ಮಾಲಕ ರಾಜೇಶ್ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
ದಹಿಸರ್-ಬೊರಿವಲಿ ಪರಿಸರದ ಹೊಟೇಲ್ ಕಾರ್ಮಿಕರು ಆಹಾರ್ನ ವಲಯ ಹತ್ತರ ವತಿಯಿಂದ ನಡೆದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವೈದ್ಯರು, ಅತಿಥಿಗಳನ್ನು ಪುಷ್ಪ ಗುತ್ಛವನ್ನಿತ್ತು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ