ಕುಸ್ತಿಗಿಂತ ಮೊದಲು ವಿಜಯ್ ಮಸ್ತಿ
Team Udayavani, Nov 15, 2018, 3:56 PM IST
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ “ದುನಿಯಾ’ ವಿಜಯ್ ನಟನೆಯ “ಕುಸ್ತಿ’ ಚಿತ್ರ ಶುರುವಾಗಬೇಕಿತ್ತು. ವಿಜಯ್ ಹಾಗೂ ಅವರ ಮಗ ಸಾಮ್ರಾಟ್ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಕೇಸು, ಕೋರ್ಟ್, ಜೈಲು ಎಂದು ವಿಜಯ್ ಓಡಾಡಿಕೊಂಡ ಕಾರಣ ಸಿನಿಮಾ ಸಾಕಷ್ಟು ತಡವಾಗಿದ್ದು ಸುಳ್ಳಲ್ಲ. ಈ ನಡುವೆಯೇ ಗಾಂಧಿನಗರದಲ್ಲಿ ಸುದ್ದಿಯೊಂದು ಹರಿದಾಡಿದೆ. ಅದು “ಕುಸ್ತಿ’ ಸಿನಿಮಾ ನಿಂತು ಹೋಯಿತಂತೆ ಎನ್ನುವುದು. ಏಕೆಂದರೆ ಇಷ್ಟು ದಿನವಾದರೂ ಸಿನಿಮಾದ ಯಾವುದೇ ಕೆಲಸಗಳಿಗೆ ಚಾಲನೆ ಸಿಗದ ಹಿನ್ನೆಲೆಯಲ್ಲಿ ಈ ಸುದ್ದಿ ಹರಿದಾಡಲಾರಂಭಿಸಿದೆ. ಆದರೆ, ನಿರ್ದೇಶಕ ರಾಘು ಶಿವಮೊಗ್ಗ ಮಾತ್ರ ಈ ಸುದ್ದಿಯನ್ನು ಒಪ್ಪುವುದಿಲ್ಲ. ಸಿನಿಮಾ ನಿಂತಿಲ್ಲ, ಮುಂದೆ ಹೋಗಿದೆಯಷ್ಟೇ ಎನ್ನುತ್ತಾರೆ ರಾಘು.
ಹೌದು, ರಾಘು ಶಿವಮೊಗ್ಗ ಹೇಳುವಂತೆ, “ಕುಸ್ತಿ’ ಚಿತ್ರ ಮುಂದಕ್ಕೆ ಹೋಗಿದೆ. ಎಷ್ಟು ಮುಂದಕ್ಕೆ ಎಂದರೆ ಒಂದು ಆರು ತಿಂಗಳು ಎಂಬ ಉತ್ತರ ಅವರಿಂದ ಬರುತ್ತದೆ. ಹಾಗಾದರೆ ವಿಜಯ್ ಬೇರೆ ಸಿನಿಮಾ ಮಾಡುತ್ತಾರಾ, ಇಷ್ಟು ದಿನ “ಕುಸ್ತಿ’ಗಾಗಿ ಬೆವರು ಸುರಿಸಿದ್ದ ರಾಘು ಶಿವಮೊಗ್ಗ ಏನು ಮಾಡುತ್ತಾರೆ ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಬರುತ್ತದೆ. “ಕುಸ್ತಿ’ಗಿಂತ ಮುಂಚೆ ವಿಜಯ್ ಹೊಸ ಸಿನಿಮಾವೊಂದರಲ್ಲಿ ನಟಿಸಲಿದ್ದು, ಆ ಚಿತ್ರವನ್ನು ರಾಘು ಶಿವಮೊಗ್ಗ ನಿರ್ದೇಶಿಸಲಿದ್ದಾರಂತೆ.
“ವಿಜಯ್ “ಕುಸ್ತಿ’ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದರು. ಜಿಮ್ನಲ್ಲಿ ವಕೌìಟ್ ಮಾಡಿ ಅದಕ್ಕೆ ಬೇಕಾದ ರೀತಿ ಸಿದ್ಧರಾಗಿದ್ದರು. ಆದರೆ, ಅವರ ಜೀವನದಲ್ಲಿ ನಡೆದ ಘಟನೆಯಿಂದ ಬಾಡಿ ಬಿಲ್ಡ್ ಕಡೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಮತ್ತೆ ಆ ತರಹದ ಫಿಟ್ನೆಸ್ ಮಾಡಿಕೊಳ್ಳಲು ಸುಮಾರು ಆರು ತಿಂಗಳು ಬೇಕೇ ಬೇಕು. ಏಕೆಂದರೆ “ಕುಸ್ತಿ’ಯಲ್ಲಿ ಅವರ ದೇಹದಾಡ್ಯìತೆ ಕೂಡಾ ಮುಖ್ಯವಾಗುತ್ತದೆ. ಆ ಕಾರಣದಿಂದ ಸಿನಿಮಾ ಮುಂದೆ ಹೋಗಿದೆಯೇ ಹೊರತು ಬೇರೆ ಯಾವ ಕಾರಣದಿಂದ ಅಲ್ಲ, ಮುಂದೆ “ಕುಸ್ತಿ’ ಆಗೋದು ಪಕ್ಕಾ. ಅದಕ್ಕಿಂತ ಮುಂಚೆ ವಿಜಯ್ ಅವರೊಂದು ಸಿನಿಮಾ ಮಾಡಲಿದ್ದು, ಅದನ್ನು ನಾನು ನಿರ್ದೇಶನ ಮಾಡಲಿದ್ದೇನೆ. ಈಗಾಗಲೇ ಆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸದ್ಯಕ್ಕೆ ಕಥೆಯಾಗಲೀ, ಇತರ ಅಂಶಗಳಾಗಲೀ ಯಾವುದೂ ಅಂತಿಮವಾಗಿಲ್ಲ’ ಎನ್ನುತ್ತಾರೆ ರಾಘು ಶಿವಮೊಗ್ಗ. ಹೊಸ ಚಿತ್ರವನ್ನು ವಿಜಯ್ ತಮ್ಮ ಬ್ಯಾನರ್ನಲ್ಲೇ ನಿರ್ಮಿಸಲಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು