ಗುರುವಾರ ರಾತ್ರಿ ತ.ನಾ. ಕರಾವಳಿಗೆ ಅಪ್ಪಳಿಸುವ ಪ್ರಬಲ ಗಜ ಚಂಡಮಾರುತ
Team Udayavani, Nov 15, 2018, 3:59 PM IST
ಚೆನ್ನೈ : ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಗಜ ಚಂಡಮಾರುತ ಇಂದು ಗುರುವಾರ ರಾತ್ರಿ ದಕ್ಷಿಣ ತಮಿಳು ನಾಡು ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ.
ಅಂತೆಯೇ ಈ ಚಂಡಮಾರುತದ ದಾಳಿಗೆ ಗುರಿಯಾಗುವ ಜಿಲ್ಲೆಗಳಲ್ಲಿ ಸರಕಾರಿ ಆಡಳಿತೆಯು ಕಟ್ಟೆಚ್ಚರ ಘೋಷಿಸಿದ್ದು ರಕ್ಷಣೆ ಮತ್ತು ಪರಿಹಾರ ವ್ಯವಸ್ಥೆಯನ್ನ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಪ್ರಕೃತ ಚಂಡಮಾರುತವು ಇಲ್ಲಿಂದ 258 ಕಿ.ಮೀ. ದೂರದ ನೈಋತ್ಯ ಕೊಲ್ಲಿಯಲ್ಲಿ ಇದೆ ಮತ್ತು ನೆರೆಯ ಪುದುಚೇರಿಯಿಂದ 225 ಕಿ.ಮೀ. ದೂರದ ಕಾರೈಕಲ್ನಲ್ಲಿ ಕ್ರಿಯಾಶೀಲವಾಗಿದೆ.
ಇದು ಕಡಲೂರು ಮತ್ತು ಪಾಂಬನ್ ನಡುವೆ, ನಾಗಪಟ್ಟಿಣಂ ಆಸುಪಾಸಿನಲ್ಲಿ ಗುರುವಾರ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಅದಾದ ಬಳಿಕ ಅದು ದುರ್ಬಲಗೊಳ್ಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಜ ಚಂಡಮಾರುತದ ತೀವ್ರತೆಯಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಕರಾವಳಿಗೆ ಅಪ್ಪಳಿಸುವ ವೇಳೆ ಚಂಡಮಾರುತವು ಗಂಟೆಗೆ 80ರಿಂದ 90 ಕಿ.ಮೀ. ವೇಗವನ್ನು ಹೊಂದಿರುತ್ತದೆ; ಇದು 100 ಕಿ.ಮೀ. ಕೂಡ ದಾಟಬಹುದಾಗಿದೆ. ಇದರೊಂದಿಗೆ ಈ ಪ್ರಾಂತ್ಯದ ಉದ್ದಗಲದಲ್ಲಿ ಜಡಿ ಮಳೆ ಕೂಡ ಆಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು