ನರಕಯಾತನೆ ತಪ್ಪಿಸಿ, ನ್ಯಾಯ ಕೊಡಿಸಿ
Team Udayavani, Nov 15, 2018, 5:40 PM IST
ಕುಮಟಾ: ತಾಲೂಕಿನಲ್ಲಿ ಪ್ರಮುಖವಾಗಿ ಅಂಬಿಗ ಸಮಾಜದಲ್ಲಿ ಸಾಕಷ್ಟು ಕಡೆ ಜಾತಿ ಬಹಿಷ್ಕಾರದ ಪ್ರಕರಣಗಳು ಕಂಡುಬಂದಿರುವುದರಿಂದ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ದಿವಗಿಯ ಬಹಿಷ್ಕಾರಗೊಂಡ ಕುಟುಂಬದವರು ಸಹಾಯಕ ಆಯುಕ್ತೆ ಪ್ರೀತಿ ಗೆಲ್ಹೋಟ್ ರಿಗೆ ಬುಧವಾರ ಮನವಿ ಸಲ್ಲಿಸಿದರು.
ದೀವಗಿಯ ಸಂತೋಷ ಅಂಬಿಗ ಹಾಗೂ ಸಹೋದರ ಸಂದೀಪ ಅಂಬಿಗ ಕುಟುಂಬದವರಿಗೆ ಅಂಬಿಗ ಸಮಾಜದ ಯಜಮಾನನಿಂದ ಜಾತಿ ಬಹಿಷ್ಕಾರದ ಕುರಿತು ಮನವಿಯಲ್ಲಿ ಉಲ್ಲೇಖೀಸಲಾಗಿದೆ. ಜಾತಿ ಬಹಿಷ್ಕಾರದಿಂದ ನರಕಯಾತನೆ ಅನುಭವಿಸುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಕೋರಲಾಗಿದೆ.
ಇದಕ್ಕೆ ಸಹಾಯಕ ಆಯುಕ್ತೆ ಪ್ರೀತಿ ಗೆಲ್ಹೋಟ್ ಪ್ರತಿಕ್ರಿಯಿಸಿ, ದಿವಗಿ ಹಾಗೂ ಉಪ್ಪಿನಪಟ್ಟಣದಲ್ಲಿ ಇಂಥ ಬಹಿಷ್ಕಾರದ ಪ್ರಕರಣಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿಗೆ ಹೋಗಿ ಪಂಚಾಯಿತಿ ಸದಸ್ಯರು ಹಾಗೂ ಜಾತಿ ಮುಖಂಡರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಇನ್ನು ಮುಂದೆ ಬಹಿಷ್ಕಾರ ಪದವನ್ನು ಬಳಸದಂತೆ ಹೇಳುತ್ತೇನೆ. ಶೀಘ್ರದಲ್ಲೇ ಪೊಲೀಸ್ ಹಾಗೂ ತಹಶೀಲ್ದಾರರ ಜೊತೆಗೂಡಿ ಸ್ಥಳಕ್ಕೆ ತೆರಳುತ್ತೇನೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಾಸಕ ದಿನಕರ ಶೆಟ್ಟಿ, ಇಂತಹ ಆಚರಣೆಯನ್ನು ನಾನು ಹಲವಾರು ವರ್ಷಗಳ ಹಿಂದೆಯೇ ವಿರೋಧಿಸಿಕೊಂಡು ಬರುತ್ತಿದ್ದೇನೆ. ಕೆಲವು ಸಮಾಜಗಳಲ್ಲಿ ಇಂಥ ಆಚರಣೆಗಳು ಜಾರಿಯಲ್ಲಿರುವುದು ದುರದೃಷ್ಟಕರ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಇಂಥ ಆಚರಣೆಗಳು ಮುಕ್ತಾಯ ಆಗಬೇಕು. ಪ್ರಕರಣದಲ್ಲಿ ಎರಡೂ ಕಡೆಯವರು ಕುಳಿತು ಚರ್ಚಿಸಿ ಬಗೆಹರಿಸಬೇಕಾದ ವಿಚಾರ ಇದಾಗಿದ್ದು, ಈ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತೇನೆ ಎಂದರು.
ಚುರುಕಾದ ತಾಲೂಕಾಡಳಿತ
ಈ ನಡುವೆ ಉಪ್ಪಿನಪಟ್ಟಣ ಹಾಗೂ ದಿವಗಿಯಲ್ಲಿ ಜಾತಿ ಬಹಿಷ್ಕಾರದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಚುರುಕಾದ ತಾಲೂಕಾಡಳಿತ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಮಾಹಿತಿ ಲಭಿಸಿದೆ. ತಹಶೀಲದಾರ ಮೇಘರಾಜ ನಾಯ್ಕ, ಉಪ್ಪಿನಪಟ್ಟಣಕ್ಕೆ ತೆರಳಿ ಬಹಿಷ್ಕಾರಗೊಂಡ ಕುಟುಂಬಗಳನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಸಭೆ ನಡೆಸಿ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ