ರೈತರಿಗೂ ಬಂತು ಬಾಡಿ ಲೋಷನ್!
Team Udayavani, Nov 16, 2018, 11:38 AM IST
ಬೆಂಗಳೂರು: ಮಾರುಕಟ್ಟೆಯಲ್ಲಿ ರೈತರಿಗೂ ಈಗ ಬಾಡಿ ಲೋಷನ್ ಬರುತ್ತಿದೆ. ಹಾಗಂತ, ಇದು ಸೌಂದರ್ಯವರ್ಧಕ ಬಳಕೆಗಾಗಿ ಅಲ್ಲ; ರಾಸಾಯನಿಕ ಸಿಂಪರಣೆ ವೇಳೆ ದೇಹವನ್ನು ಸೇರುವ ವಿಷಕಾರಿ ಪದಾರ್ಥಗಳಿಂದ ರಕ್ಷಣೆ ಪಡೆಯಲು.
ಇನ್ಸ್ಟೆಮ್ ಸಿ-ಕ್ಯಾಂಪ್ ಸ್ಟಾರ್ಟ್ಅಪ್ ಕೀಟನಾಶಕ ರಕ್ಷಣೆಗಾಗಿ ಲೋಷನ್ ಅಭಿವೃದ್ಧಿಪಡಿಸಿದೆ. ರೈತರು ರಾಸಾಯನಿಕ ಸಿಂಪರಣೆ ವೇಳೆ ತಮ್ಮ ಸುರಕ್ಷತೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ತುಂಬಾ ಕಡಿಮೆ.
ಹೀಗೆ ಸಿಂಪರಣೆ ಮಾಡಿದಾಗ, ಅದು ಚರ್ಮದ ಮೇಲೆ ಬೀಳುತ್ತದೆ. ಅಷ್ಟೇ ಅಲ್ಲ, ಮುಖಕ್ಕೆ ಟವಲ್ ಮಾತ್ರ ಮುಚ್ಚಿಕೊಂಡಿರುತ್ತಾರೆ. ಅಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ. ನಂತರ ಅದೇ ಟವಲ್ನಿಂದ ರೈತರು ಮುಖ ಒರೆಸಿಕೊಳ್ಳುತ್ತಾರೆ. ಹೀಗೆ ವಿಷಕಾರಿ ವಸ್ತುಗಳು ರೈತರ ದೇಹ ಪ್ರವೇಶಿಸುತ್ತವೆ.
ಇದನ್ನು ತಪ್ಪಿಸಲು “ಇನ್ಸ್ಟೆಮ್ ಸಿ-ಕ್ಯಾಂಪ್’ ಕ್ರೀಂ ಅಭಿವೃದ್ಧಿಪಡಿಸಲಾಗಿದೆ ಎಂದು ಇನ್ಸ್ಟೆಮ್ನ ಪಿಎಚ್ಡಿ ವಿದ್ಯಾರ್ಥಿ ಕೇತನ್ ಥೋರಟ್ ತಿಳಿಸಿದರು. ಔಷಧ ಸಿಂಪರಣೆಗೆ ಮೊದಲು ಕ್ರೀಂ ಹಚ್ಚಿಕೊಳ್ಳಬೇಕು. ಜತೆಗೆ ವಿಶೇಷ ಬಟ್ಟೆ ತಯಾರಿಸಲಾಗಿದ್ದು, ಅದನ್ನು ಧರಿಸಬೇಕು. ಈ ಲೋಷನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು