ಕಾನಕೆರೆ ಬಾವಿಯ ತೈಲ ಬಂಕ್ ಟ್ಯಾಂಕ್ನಿಂದ ಸೋರಿದ್ದು
Team Udayavani, Nov 20, 2018, 9:52 AM IST
ಉಳ್ಳಾಲ: ದೇರಳಕಟ್ಟೆಯ ಕಾನಕೆರೆ ಬಾವಿಯಲ್ಲಿ ಪತ್ತೆಯಾದ ತೈಲಕ್ಕೆ ಸಂಬಂಧಿಸಿ ಪರಿಸರ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳೀಯ ಪೆಟ್ರೋಲ್ ಪಂಪ್ನ ಟ್ಯಾಂಕ್ ಮರು ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್ ಪಂಪ್ನಿಂದ ಸೋರಿಕೆಯೇ ಬಾವಿ ನೀರಿಗೆ ತೈಲ ಮಿಶ್ರಣಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಪತ್ತೆಯಾಗಿದ್ದು, ಮಂಗಳವಾರ ಐಒಸಿಎಲ್ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಲಿದ್ದಾರೆ.
ಎರಡು ವಾರಗಳ ಹಿಂದೆ ಕಾನಕೆರೆಯ ಮೂರು ಬಾವಿಗಳಲ್ಲಿ ತೈಲ ಅಂಶ ಪತ್ತೆಯಾಗಿ ಜನರು ಆತಂಕಪಟ್ಟಿದ್ದರು. ಸ್ಥಳೀಯ ಪೆಟ್ರೋಲ್ ಪಂಪ್ ಇದಕ್ಕೆ ಕಾರಣ ಎಂಬ ಹಿನ್ನೆಲೆಯಲ್ಲಿ ಒಂದು ದಿನ ವ್ಯವಹಾರ ಸ್ಥಗಿತಗೊಳಿಸಿ ಪರಿಶೀಲನೆ ನಡೆಸಲಾಗಿತ್ತು. ಆಗ ಸೋರಿಕೆ ಕಂಡು ಬರದಿದ್ದುದರಿಂದ ಪಂಪ್ ವ್ಯವಹಾರ ಆರಂಭಿಸಿತ್ತು.
ಮೂರೂ ಬಾವಿಗಳ ನೀರು ಖಾಲಿ ಮಾಡಿಸಿ ಮತ್ತೆ ನೀರು ತುಂಬಿದಾಗ ಒಂದು ಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡುಬಂದಿತ್ತು. ಈ ನಿಟ್ಟಿನಲ್ಲಿ ಮೂರು ಬಾವಿಗಳನ್ನು ಪಂಚಾಯತ್ ವಶಕ್ಕೆ ಪಡೆದಿತ್ತು. ಕಳೆದ ಶನಿವಾರ ಮತ್ತೆ ಬಂಕ್ ಬಂದ್ ಮಾಡಲಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಂಕ್ ಖಾಲಿ ಮಾಡಿ ನೀರು ತುಂಬಲಾಗಿತ್ತು. ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಟ್ಯಾಂಕ್ ತೆರೆದಾಗ ಪೆಟ್ರೋಲ್ ಟ್ಯಾಂಕ್ನಲ್ಲಿ ಸೋರಿಕೆಯಾಗಿದ್ದು ಕಂಡು ಬಂತು. ಬಿಸಿಲಿನಿಂದ ಇದಾಗಿದೆ ಎಂದು ಅಂದಾಜಿಸಲಾಯಿತಾದರೂ ಅನುಮಾನ ಪರಿಹಾರಕ್ಕಾಗಿ ಟ್ಯಾಂಕ್ನೊಳಗೆ ಕಂಪ್ರಸರ್ ಬಳಸಿ ಗಾಳಿ ತುಂಬಿಸಿದಾಗ ನೀರು ರಭಸವಾಗಿ ಹೊರಬಂತು. ಮತ್ತೂಮ್ಮೆ ಗಾಳಿ ತುಂಬಿಸಿ ನೀರು ಹಾಕಿದಾಗ ಸೋರಿಕೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ್ ನಾಯಕ್, ಪೆಟ್ರೋಲ್ ಟ್ಯಾಂಕ್ನಲ್ಲಿ ಸೋರಿಕೆ ಇರುವ ಕಾರಣ ಅದನ್ನು ಬದಲಾಯಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಐಒಸಿಎಲ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ