ಚಾಮುಂಡಿಬೆಟ್ಟದ ನಂದಿಗೆ ರುದ್ರಾಭಿಷೇಕ
Team Udayavani, Nov 26, 2018, 6:00 AM IST
ಮೈಸೂರು: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ 13ನೇ ವರ್ಷದ ಮಹಾಭಿಷೇಕವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಚಾಮುಂಡಿಬೆಟ್ಟದ ನಂದಿ ಆವರಣದಲ್ಲಿ ಭಾನುವಾರ ನಡೆದ ಮಹಾರುದ್ರಾಭಿಷೇಕಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಚಾಲನೆ ನೀಡಿದರು. ಬೆಳಗ್ಗೆ 10.30ರಿಂದ ಆರಂಭವಾದ ಮಹಾರುದ್ರಾಭಿಷೇಕಕ್ಕೂ ಮುನ್ನ ನಂದಿ ಮೂರ್ತಿಯನ್ನು ನೀರಿನಿಂದ ಸ್ವತ್ಛಗೊಳಿಸಲಾಯಿತು. ಬಳಿಕ ಹೂ ಹಾಗೂ ಕುಂಕುಮಾರ್ಚನೆ ಸಲ್ಲಿಸಿ, ಅಘÂì, ಪಾದ್ಯ, ಆಚಮನ,ಮಧುಪರ್ಕ, ಹಾಲು, ಮೊಸರಿಂದ ನಂದಿಗೆ ಅಭಿಷೇಕ ಮಾಡಲಾಯಿತು. ಬಳಿಕ, ಅರಿಶಿನ, ಕುಂಕುಮ, ಹಾಲು, ತುಪ್ಪ,ಜೇನು, ನಾಣ್ಯ, ಸುಗಂಧ ತೈಲ, ವಿಭೂತಿ, ನೀರು, ಎಳೆನೀರು, ಹಾಲು, ಶ್ರೀಗಂಧ ಸೇರಿದಂತೆ 32 ವಿವಿಧ ಬಗೆಯ ದ್ರವ್ಯಗಳಿಂದ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ನಂತರ, ನಂದಿಗೆ ಪುಷ್ಪಾಲಂಕಾರ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ