ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ನೆರವು: ಕಂದಕೂರ
Team Udayavani, Nov 27, 2018, 2:28 PM IST
ಸೈದಾಪುರ: ಹಾಲಿನಂತೆ ಪಾವಿತ್ರ್ಯತೆಯುಳ್ಳ ಹಾಲುಮತ ಸಮಾಜದ ಋಣ ತಮ್ಮ ಮೇಲಿದ್ದು, ಸೈದಾಪುರ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಶಾಸಕರ ಮನವೊಲಿಸಿ 50 ಲಕ್ಷ ರೂಪಾಯಿ ನೀಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಭರವಸೆ ನೀಡಿದರು.
ಇಲ್ಲಿನ ಪ್ರಭುಲಿಂಗ ವಾರದ್ ಲೇ ಔಟ್ನಲ್ಲಿ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ತಾವು ಕಂಕಣ ಬದ್ಧರಾಗಿದ್ದು, ಯಾವುದೇ ಸಮಸ್ಯೆಗಳಿರಲಿ ಗಮನಕ್ಕೆ ತಂದಲ್ಲಿ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ವರ್ಷದಿಂದ ಹಾಲುಮತ ಸಮಾಜದ ಮುಖಂಡರು ಸಾಧ್ಯವಾದಷ್ಟು ಬಡ ಕುಟುಂಬಗಳನ್ನು ಗುರುತಿಸಿ ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗೋಣ, ಕನಕದಾಸರ ಜಯಂತ್ಯುತ್ಸವದ ಮೂಲಕ ಅವರ ಜೀವನಾದರ್ಶಗಳನ್ನು ಪಾಲಿಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಪ್ರತಿ ಮನೆಯಿಂದ ಕನಕದಾಸರು ಹುಟ್ಟಿ ಬರಲಿ ಎಂದು ಆಶಿಸಿದರು. ಕನಕದಾಸರು ಕೇವಲ ಹಾಲುಮತ ಸಮಾಜಕ್ಕೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿ ಎಂದರು.
ಪ್ರತಿಭಾವಂತ ವಿದ್ಯಾರ್ಥಿ ಹಾಗೂ ನೂತನವಾಗಿ ಸರಕಾರಿ ನೌಕರಿ ಪಡೆದ ಹಾಲುಮತ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಹಂದರಿಕಿ ಭೋಜಲಿಂಗೇಶ್ವರ ಮಠದ ಲಿಂಗಪ್ಪ ತಾತನವರು ಸಾನ್ನಿಧ್ಯ ವಹಿಸಿದ್ದರು. ಪರಮೇಶ ವಾರದ ಅಧ್ಯಕ್ಷತೆ ವಹಿಸಿದ್ದರು. ಶಿವುಕುಮಾರ ಮುನಗಾಲ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲ ಪೂಜಾರಿ ಉಪನ್ಯಾಸ ನೀಡಿದರು.
ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಚಂದ್ರಶೇಖರ ವಾರದ, ಪ್ರಭುಲಿಂಗ ವಾರದ, ತಾಪಂ ಉಪಾಧ್ಯಕ್ಷೆ ರಾಮಲಿಂಗಮ್ಮ ಕವಡೆ, ಸಿದ್ದಪ್ಪ ಕಡೇಚೂರ, ಸಣ್ಣ ಭೀಮಶಪ್ಪ ಜೇಗರ್, ಶೇಷಪ್ಪ ಜೇಗರ್, ಶಾಮಲಾ ವಾರದ, ಹೊನ್ನಪ್ಪ ಮುಷ್ಟೂರ, ಜೆಡಿಎಸ್ ಪಕ್ಷದ ಸೈದಾಪುರ ವಲಯ ಅಧ್ಯಕ್ಷ ಸುದರ್ಶನ ಜೈಗ್ರಾಂ, ಗ್ರಾಪಂ ಅಧ್ಯಕ್ಷೆ ರಾಮಲಿಂಗಮ್ಮ ಬಾಲಚೇಡ, ಸಾಯಿಬಣ್ಣ ಎಎಸ್ಐ, ವೆಂಕಣ್ಣ ಮೇಟಿ, ದೇವೆಂದ್ರಪ್ಪ ಮುನಮುಟಗಿ ಸೇರಿದಂತೆ ಮುಂತಾದವರಿದ್ದರು. ಅರುಣಕುಮಾರ ಜೇಗರ ಸ್ವಾಗತಿಸಿದರು. ಸಿದ್ದು ಪೂಜಾರಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ
MUST WATCH
ಹೊಸ ಸೇರ್ಪಡೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ