ಕಾವೇರಿ ಸಂಗಮದಲ್ಲಿ ಅಂಬರೀಷ್ ಅಸ್ಥಿ ವಿಸರ್ಜನೆ; ಅಭಿಮಾನಿಯ ಹಣ ಕಳವು
Team Udayavani, Nov 28, 2018, 5:09 PM IST
ಶ್ರೀರಂಗಪಟ್ಟಣ: ಇತ್ತೀಚೆಗೆ ಇಹಲೋಕ ತ್ಯಜಿಸಿದ್ದ ಮಾಜಿ ಸಚಿವ, ಸ್ಯಾಂಡಲ್ ವುಡ್ ಹಿರಿಯ ನಟ ಅಂಬರೀಷ್ ಅವರ ಚಿತಾಭಸ್ಮವನ್ನು ಪುತ್ರ ಅಭಿಷೇಕ್, ಪತ್ನಿ ಸುಮಲತಾ ಬುಧವಾರ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಕಾವೇರಿ ಸಂಗಮದಲ್ಲಿ ವಿಸರ್ಜನೆ ಮಾಡಿದ್ದಾರೆ.
ಚಿತಾ ಭಸ್ಮದೊಂದಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ದರ್ಶನ್ ಹಾಗೂ ಕುಟುಂಬ ವರ್ಗದವರು ಕಾವೇರಿ ಸಂಗಮಕ್ಕೆ ಆಗಮಿಸಿದ್ದರು. ಕಾವೇರಿ ನದಿ ಸಂಗಮದಲ್ಲಿ ಪುತ್ರ ಅಭಿಷೇಕ್ ಹಿಮ್ಮುಖವಾಗಿ ನಿಂತುಕೊಂಡು ಅಸ್ಥಿಯನ್ನು ವಿಸರ್ಜಿಸಿದ್ದರು.
ಅಭಿಮಾನಿಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಪಶ್ಚಿಮ ವಾಹಿನಿ ಬದಲು ಕಾವೇರಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ನೂರಕ್ಕೂ ಅಧಿಕ ಪೊಲೀಸರು ಹಾಗೂ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಬಲರಾಮೇಗೌಡ, ಡಿವೈಎಸ್ಪಿ ರವೀಂದ್ರ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಕಾವೇರಿ ಸಂಗಮದಲ್ಲಿ ಹಣ ಕಳೆದುಕೊಂಡ ಅಂಬಿ ಅಭಿಮಾನಿ:
ಅಂಬರೀಷ್ ಅಸ್ಥಿ ವಿಸರ್ಜನೆಯನ್ನು ನೋಡಲು ಕಾವೇರಿ ಸಂಗಮಕ್ಕೆ ಆಗಮಿಸಿದ್ದ ಅಂಬಿ ಅಭಿಮಾನಿಯೊಬ್ಬರ 70 ಸಾವಿರ ರೂಪಾಯಿ ಹಣವನ್ನು ಪಿಕ್ ಪಾಕೆಟ್ ಮಾಡಿರುವ ಘಟನೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಿಂದ ಆಗಮಿಸಿದ್ದ ಮಹೇಂದ್ರ ಅವರು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ 70 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ