ಸರ್ವಧರ್ಮಿಯರಿಂದ ಚಂದಾವರ ಹಬ್ಬ ಸಂಭ್ರಮ


Team Udayavani, Dec 2, 2018, 3:41 PM IST

2-december-16.gif

ಹೊನ್ನಾವರ: ಹೊನ್ನಾವರ-ಕುಮಟಾ ಮಧ್ಯೆ ಸಹ್ಯಾದ್ರಿ ಮಡಿಲಲ್ಲಿರುವ ಚಂದಾವರದ ಸಂತ್‌ ಫ್ರಾನ್ಸಿಸ್‌ ಚರ್ಚಿನ ವಾರ್ಷಿಕ ಹಬ್ಬ (ಫೆಸ್ಟ್‌) ಡಿ. 3ರಂದು ನಡೆಯಲಿದೆ. ಅಂದು ನಾಡಿನ ನಾನಾಭಾಗದಿಂದ ಬಂದ ಸರ್ವಧರ್ಮಿಯರು ಮೊಂಬತ್ತಿ ಬೆಳಗಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆ ಈಡೇರಿದ್ದಕ್ಕೆ ನಮಿಸುತ್ತಾರೆ. ಗೆಳೆಯರ, ಬಂಧುಗಳ ಮನೆಯಲ್ಲಿ ಉಳಿದು, ಉಂಡು ಸಂತೋಷ ಹಂಚಿಕೊಳ್ಳುತ್ತಾರೆ.

ಜಗವೆಲ್ಲ ಗೆದ್ದು ತನ್ನ ಆತ್ಮವನ್ನು ಕಳೆದುಕೊಂಡರೆ ಅದರಿಂದ ಏನು ಲಾಭ ಎಂಬ ಏಸುಕ್ರಿಸ್ತರ ವಾಣಿಯಿಂದ ಆಕರ್ಷಿತರಾದ ಸ್ಪೇನ್‌ ದೇಶದ ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಅಲ್ಲಿ ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದವರು. ಲೌಕಿಕ ಬದುಕಿಗೆ ಬೆನ್ನುಹಾಕಿ ಮನುಕುಲದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು 11 ಸಾವಿರ ಮೈಲಿ ದೂರ ಪ್ರಯಾಣಮಾಡಿ ಗೋವೆಗೆ ಬಂದಿದ್ದರು.

ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಹಡಗಿನಲ್ಲಿ ಚೀನಾಕ್ಕೆ ಹೊರಟಿದ್ದಾ ಮಾಕ್ವಾ ಎಂಬ ದ್ವೀಪದಲ್ಲಿ ಕಠಿಣ ಜ್ವರ ಪೀಡಿತರಾಗಿ 1552ರಲ್ಲಿ ದೈವಾದೀನರಾದರು. ಹಡಗಿನ ನಾವಿಕರು ಅಲ್ಲಿಯೇ ಅವರ ದೇಹವನ್ನು ಸಮಾಧಿ ಮಾಡಿದ್ದರು. ಕೆಲವು ತಿಂಗಳ ನಂತರ ನಾವಿಕರು ಮರಳಿ ಬರುವಾಗ ದ್ವೀಪದಲ್ಲಿ ಹಡಗು ನಿಲ್ಲಿಸಿ ಸಮಾಧಿಯನ್ನು ತೆರೆದಾಗ ಅವರ ಪಾರ್ಥಿವ ಶರೀರ ಯಥಾಸ್ಥಿತಿ ಇತ್ತು. ಅದನ್ನು ಮೇಲೆತ್ತಿ ಗೋವಾಕ್ಕೆ ತಂದ ನಾಗರಿಕರು ಬೋಮ್‌ ಜೀಸಸ್‌ ದೇವಾಲಯಕ್ಕೆ ಒಪ್ಪಿಸಿದ್ದರು. ಅಲ್ಲಿ ಅವರ ಪಾರ್ಥಿವ ಶರೀರ ಇಂದೂ ಇದೆ. ಅವರ ಒಂದು ಉಗುರು ಚಂದಾವರ ಚರ್ಚಿನಲ್ಲಿದೆ.

ಸಂತ ಫ್ರಾನ್ಸಿಸ್‌ ಝೇವಿಯರ್‌ ಅವರನ್ನು ಪ್ರಾರ್ಥಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಗೋವಾದಲ್ಲಿ ನಡೆಯುವ ಹಬ್ಬಕ್ಕೆ ಜಗತ್ತಿನ ನಾನಾಭಾಗದ ಜನ ಸೇರುತ್ತಾರೆ. 1678ರಲ್ಲಿ ಚಂದಾವರದಲ್ಲಿ ಕ್ರೈಸ್ತ ದೇವಾಲಯ ಇತ್ತು. ಸಂತ್‌ ಫ್ರಾನ್ಸಿಸ್‌ ಝೇವಿಯರ್‌ ಅವರಲ್ಲಿ ಪ್ರಾರ್ಥನೆಮಾಡಿಕೊಂಡ ಮಿರ್ಜಾನಿನ ಮೀನುಗಾರರೊಬ್ಬರಿಗೆ ಹೇರಳ ಮೀನು ದೊರಕಿತ್ತು. ಆತನ ಕುಟುಂಬ ಅಭಿವೃದ್ಧಿಯಾಯಿತು. ಆತ ಸಂತರ ಮೂರ್ತಿಯನ್ನು ಚಂದಾವರ ಚರ್ಚ್‌ಗೆ ನೀಡಿದ್ದ.

1934ರಲ್ಲಿ ಗೋವಾ ಚರ್ಚ್‌ನಿಂದ ಸಂತ ಫ್ರಾನ್ಸಿಸ್‌ ಝೇವಿಯರ್‌ ಅವರ ಉಗುರನ್ನು ಚಂದಾವರ ಚರ್ಚ್‌ಗೆ ತರಲಾಯಿತು. ಅದನ್ನು ಈಗಲೂ ಕರಂಡಕದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಆದ್ದರಿಂದ ಚಂದಾವರ ಚರ್ಚ್‌ಗೆ ಇಷ್ಟಾರ್ಥ ಈಡೇರಿಸುವ ಚರ್ಚ್‌ ಎಂಬ ಹೆಸರು ಬಂದಿದ್ದು ಸಮಾಜದ ನಾನಾಸ್ತರದ, ಜಾತಿ ಧರ್ಮಗಳ ಜನ ಬಂದು, ಮೊಂಬತ್ತಿ ಬೆಳಗಿ ಹೋಗುತ್ತಾರೆ. ಫೆಸ್ಟ್‌ಗಾಗಿ ವಿಶೇಷ ಬಸ್ಸುಗಳನ್ನು ಕುಮಟಾ- ಹೊನ್ನಾವರದಿಂದ ಚಂದಾವರಕ್ಕೆ ಬಿಡಲಾಗುತ್ತದೆ. ಸೋಮವಾರ ದಿನವಿಡೀ ಚಂದಾವರದಲ್ಲಿ ಸಂಭ್ರಮ, ರಾತ್ರಿ ಮನರಂಜನೆಯಿದೆ.

ಗಡ್ಡೆ ಗೆಣಸು ಮಾರಾಟ ಜೋರು
ಚಂದಾವರದಲ್ಲಿ ಕ್ರಿಶ್ಚಿಯನ್‌, ಮುಸ್ಲಿಂ, ಹಿಂದು ಸಹಿತ ಎಲ್ಲ ಧರ್ಮ, ಜಾತಿಯವರಿದ್ದಾರೆ. ಈ ಹಬ್ಬವನ್ನು ಅವರು ಬಹುಪಾಲು ಒಟ್ಟಾಗಿಯೇ ಆಚರಿಸುತ್ತಾರೆ. ಚಂದಾವರ ಸೀಮೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಈ ಪ್ರದೇಶದಲ್ಲಿ ಮಾತ್ರ ಬೆಳೆಯುವ ಕೆಸುವು, ಗೆಣಸು, ಗುಟ್ಟಗೆಣಸು, ಮತ್ತು ಹಲವಾರು ಜಾತಿಯ ಗಡ್ಡೆ, ಗೆಣಸುಗಳನ್ನು ಅಂದುಮಾತ್ರ ಮಾರಾಟಕ್ಕೆ ತರುತ್ತಾರೆ. ಹೊನ್ನಾವರದ ಮಲಬಾರ ಬೇಕರಿಯವರು ಚಂದಾವರ ಪೇಸ್ತಿನ ನೆನಪಿಗಾಗಿ ವಿಶೇಷ ರೀತಿಯ ಬಿಸ್ಕತ್ತುಗಳನ್ನು ತಯಾರಿಸುತ್ತಾರೆ. ಬೇರೆಲ್ಲೂ, ಬೇರಾವ ದಿನವೂ ಈ ಗಡ್ಡೆ, ಗೆಣಸುಗಳು, ಬಿಸ್ಕತ್ತುಗಳು ಮಾರಾಟಕ್ಕೆ ಸಿಗುವುದಿಲ್ಲ.

„ಜೀಯು ಹೊನ್ನಾವರ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.