ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನಿಗೆ ನೆರವು ಬೇಕಿದೆ
Team Udayavani, Dec 7, 2018, 3:05 AM IST
ಕೋಟ: ಯಡ್ತಾಡಿ ಗ್ರಾಮದ ರಾಮ ನಾಯ್ಕ ಹಾಗೂ ಬೇಬಿ ಬಾೖ ದಂಪತಿಗಳ ಪುತ್ರ ರಾಜೇಂದ್ರನಿಗೆ ಹುಟ್ಟಿನಿಂದಲೂ ಒಂದು ಕಿಡ್ನಿಯಲ್ಲಿ ಸಮಸ್ಯೆ ಇತ್ತು. ಆದರೆ ಚಿಕಿತ್ಸೆ ಪಡೆದು ಹಲವು ವರ್ಷದಿಂದ ಒಂದೇ ಕಿಡ್ನಿಯಲ್ಲಿ ಲವ-ಲವಿಕೆಯಿಂದ ಜೀವನ ನಡೆಸುತ್ತಿದ್ದ ಹಾಗೂ ಸ್ಥಳೀಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ. ಆದರೆ ಇದೀಗ ಒಂದು ತಿಂಗಳಿಂದ ಆತನ ಇನ್ನೊಂದು ಕಿಡ್ನಿಯಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಲವಲವಿಕೆಯಿಂದ ಇದ್ದ ಬಾಲಕ ಇದೀಗ ಸಂಪೂರ್ಣ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದ್ದು, ಮುಂದಿನ ಚಿಕಿತ್ಸೆಗಾಗಿ ಆರೇಳು ಲಕ್ಷ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಹಲವು ಬಾರಿ ಸರಕಾರದ ವಿವಿಧ ಆರೋಗ್ಯ ವಿಮೆಯ ಪ್ರಯೋಜನ ಪಡೆದಿರುವುದರಿಂದ ಪ್ರಸ್ತುತ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂದು ಸಂಬಂಧಪಟ್ಟವರು ತಿಳಿಸಿದ್ದಾರಂತೆ. ಹೀಗಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈತನ ಹೆತ್ತವರು ಇದೀಗ ಸಂಕಷ್ಟ ಸಿಲುಕಿದ್ದಾರೆ. ನೆರವಿಗಾಗಿ ಎಲ್ಲರ ಬಳಿ ಧಾವಿಸುತ್ತಿದ್ದಾರೆ. ಆದರೂ ತುರ್ತು ಅಗತ್ಯವಿರುವ ಚಿಕಿತ್ಸೆಗಳನ್ನು ನೀಡಲು ಹಣ ಸಾಕಾಗುತ್ತಿಲ್ಲ ಎನ್ನಲಾಗಿದೆ.
ಈ ಬಾಲಕನ ಚಿಕಿತ್ಸೆಗೆ ನೆರವು ನೀಡಬಯಸುವವರು ರಾಮ ನಾಯ್ಕ ಅವರ ವಿಜಯಾ ಬ್ಯಾಂಕ್ ಸಾೖಬ್ರಕಟ್ಟೆ ಶಾಖೆಯ ಖಾತೆ ಸಂಖ್ಯೆ 118501011001174, ಐ.ಎಫ್.ಎಸ್. ಸಂಖ್ಯೆ VIJB0001185, ಇದಕ್ಕೆ ಹಣ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ 9632301739 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು