ಟಿಕೆಟ್ ಇನ್ಸ್ಪೆಕ್ಟರ್ಗೆ ಅಕಾಡೆಮಿ ಪ್ರಶಸ್ತಿ: ರೈಲ್ವೆ ಇಲಾಖೆ ಸಂತಸ
Team Udayavani, Dec 11, 2018, 6:00 AM IST
ಹೊಸದಿಲ್ಲಿ: ಪೂರ್ವ ರೈಲ್ವೆ ವಲಯದ ಅಸಾನ್ಸೊಲ್ ವಿಭಾಗದಲ್ಲಿ ಮುಖ್ಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ ಸುಂದರ್ ಬೆಸ್ರಾ ಅವರ “ಮರೊಮ್’ ಎಂಬ ಕಾದಂಬರಿಗೆ ಪ್ರಶಸ್ತಿ ಸಿಕ್ಕಿರುವುದು ತನಗೆ ಹೆಮ್ಮೆ ತಂದಿದೆ ಎಂದು ರೈಲ್ವೆ ಇಲಾಖೆ ಸಂತಸ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಇಲಾಖೆಯ ಅಧಿಕಾರಿಯೊಬ್ಬರಿಗೆ ಈ ಪ್ರತಿಷ್ಠಿತ ಗೌರವ ಸಂದಿರುವುದು ಖುಷಿಯ ವಿಚಾರ ಎಂದಿದೆ. ಅಂದ ಹಾಗೆ, “ಮರೋಮ್’ ಕಾದಂಬರಿ ಜಾರ್ಖಂಡ್ನ ಬುಡಕಟ್ಟು ಜನಾಂಗವಾದ “ಸಂಥಾಲಿ’ ಭಾಷೆಯಲ್ಲಿದೆ. ಜಾರ್ಖಂಡ್ನ ಆರು ಜಿಲ್ಲೆಗಳಾದ ಗೊಡ್ಡ, ದೇವಗಢ, ಡುಮ್ಕ, ಜಮ್ತಾರಾ, ಸಾಹಿಬ್ಗಂಜ್ ಹಾಗೂ ಪಾಕುರ್ ಜಿಲ್ಲೆ ಗಳು ಸೇರಿರುವ ಪ್ರಾಂತ್ಯಕ್ಕೆ “ಸಂಥಾಲ್ ಪರ್ಗಣ’ದಲ್ಲಿ ಈ ಬುಡಕಟ್ಟು ಜನಾಂಗ ಕಾಣ ಸಿಗುತ್ತದೆ. ಇವರ ಪ್ರಸ್ತುತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು “ಮರೋಮ್’ ಕಾದಂಬರಿಯಲ್ಲಿ ಬೆಸ್ರಾ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆಂದು ರೈಲ್ವೆ ಇಲಾಖೆ ಶ್ಲಾಘಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ