ಕಾಂಗ್ರೆಸ್ ಮಣಿಸಿದ ಎಂ.ಎನ್.ಎಫ್.
Team Udayavani, Dec 12, 2018, 8:55 AM IST
ಹೊಸದಿಲ್ಲಿ: ಮಿಜೋರಂನ ಪ್ರಾದೇಶಿಕ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ (ಎಂ.ಎನ್.ಎಫ್.) 26 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತ ಪಡೆದಿದೆ. ಸತತ 2 ವರ್ಷಗಳ ಕಾಲ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಕೇವಲ ಐದು ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ ಕೇವಲ ಒಂದು ಸ್ಥಾನ ಗಳಿಸುವಲ್ಲಿ ಸಫಲವಾಗಿದೆ.
10 ವರ್ಷಗಳಿಂದ ಅಧಿಕಾರ ವಂಚಿತವಾಗಿದ್ದ ಎಂ.ಎನ್.ಎಫ್. ಸ್ಪಷ್ಟ ಬಹುಮತದೊಂದಿಗೆ ಸ್ವತಂತ್ರವಾಗಿ ಸರಕಾರ ರಚಿಸಲಿದೆ. ಝೊರಾಂತಾಂಗ ನೇತೃತ್ವದ ಎಂ.ಎನ್.ಎಫ್., ಈ ಮೊದಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. 5 ಅವಧಿಗೆ ಮಿಜೋ ಮುಖ್ಯಮಂತ್ರಿಯಾಗಿದ್ದ, 2008ರಿಂದ 2018ರವರೆಗೆ ಸರಕಾರ ಮುನ್ನಡಿಸಿದ್ದ ಲಾಲ್ ತನ್ಹಾವ್ಲ (76) ಚಂಪೈ ದಕ್ಷಿಣ ಮತ್ತು ಸರ್ಫಿಪ್ ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ. ಚುನಾವಣೆ ವೇಳೆ ಪ್ರಮುಖ ಪಕ್ಷ ಎಂದೇ ಬಿಂಬಿತವಾಗಿದ್ದ ಬಿಜೆಪಿ 39 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಕೇವಲ 1 ಸ್ಥಾನ ಮಾತ್ರ ಗೆದ್ದು ಖಾತೆ ತೆರೆಯುವಲ್ಲಿ ಸಫಲವಾಗಿದೆ. ಅತ್ತ, ತನ್ನ ಪಾಲಿಗಿದ್ದ ಕಡೇ ಈಶಾನ್ಯ ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಗೆಲುವಿಗೆ ಕಾರಣ
1. ಕಾಂಗ್ರೆಸ್ ಕಡೇ ದಿನಾಂಕದವರೆಗೂ ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಎಂಎನ್ಎಫ್ ಬಹಳ ಮುಂಚೆಯೇ ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡಿ, ಪ್ರಚಾರ ಆರಂಭಿಸಿತ್ತು.
2. ಕಾಂಗ್ರೆಸ್ನ ಆಂತರಿಕ ಬಿಕ್ಕಟ್ಟಿನ ಸದುಪಯೋಗ ಪಡೆದ ಎಂ.ಎನ್.ಎಫ್., ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರನ್ನು ತನ್ನೆಡೆ ಸೆಳೆಯಿತು.
3. ಉದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯ ಒದಗಿಸುವುದು, ಪಾನ ನಿಷೇಧ ತಮ್ಮ ಮುಖ್ಯ ಗುರಿ ಎಂದು ಎಂ.ಎನ್.ಎಫ್. ಬಿಂಬಿಸಿಕೊಂಡಿದ್ದು.
ಸೋಲಿಗೆ ಕಾರಣ
1. ಕಾಂಗ್ರೆಸ್ನ ಬಾರದ ಒಳಜಗಳ, ಆಡಳಿತ ವಿರೋಧಿ ಅಲೆ.
2. ಭ್ರಷ್ಟಾಚಾರ ಕಾರಣ ಗೃಹ ಸಚಿವ ಉಚ್ಚಾಟನೆ, ಮತ್ತೂಬ್ಬ ಸಚಿವರ ಮೇಲೆ ಶೋಕಾಸ್ ನೋಟಿಸ್.
3. ಉಚ್ಚಾಟಿತರಾಗಿದ್ದ ಮತ್ತೂಬ್ಬ ಸಚಿವ ರಾಬರ್ಟ್ ರೊಮಾವಿಯ ರೋಯ್ಟೆ ಎಂ.ಎನ್.ಎಫ್. ಸೇರ್ಪಡೆಗೊಂಡ ಬಳಿಕ ಹೆಚ್ಚಾದ ಆಂತರಿಕ ಕಲಹ.
ಗೆದ್ದ ಪ್ರಮುಖರು (ಮತಗಳ ಅಂತರ)
ಝೊರಂತಂಗ (ಎಂಎನ್ಎಫ್) 2,504
ಬುದ್ಧ ಧನ್ ಚಕ್ಮ(ಬಿಜೆಪಿ) 1,594
ಸೋತ ಪ್ರಮುಖರು (ಮತಗಳ ಅಂತರ)
ಲಾಲ್ ತನ್ಹಾವ್ಲ (ಕಾಂಗ್ರೆಸ್) 4,010/1,049
ಜೆ.ವಿ. ಹ್ಲುನ (ಬಿಜೆಪಿ) 4,940
ಮುಂದೇನು?
ರಾಜ್ಯಪಾಲ ಕೆ. ರಾಜಶೇಖರನ್ಗೆ ಮುಖ್ಯಮಂತ್ರಿ ಲಾಲ್ ತನ್ಹಾಲ್ವ ಮಂಗಳವಾರ ರಾಜಿನಾಮೆ ನೀಡಿದ್ದಾರೆ. ಎಂ.ಎನ್.ಎಫ್. ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ. ಪಕ್ಷವನ್ನು ಮುನ್ನಡೆಸಿದ್ದ ಮತ್ತು 1998ರಿಂದ 2008ರವರೆಗೆ 2 ಅವಧಿಗಳಿಗೆ ಸಿಎಂ ಆಗಿದ್ದ ಝೊರಂತಂಗ ಅವರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ಅವರು ಮಂಗಳವಾರ ಸಂಜೆ 6 ಗಂಟೆಗೆ ರಾಜ್ಯಪಾಲರಿಗೆ ಸರ್ಕಾರ ರಚಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ