ಅಸಲ್ಫಾ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ


Team Udayavani, Dec 12, 2018, 5:14 PM IST

1112mum07.jpg

ಮುಂಬಯಿ: ನಾವು ಹುಟ್ಟಿ ಬೆಳೆದು ಸಾಧಕರಾಗಿ ಮೆರೆಯಲು ಪ್ರೇರಣಾಶಕ್ತಿಯಾದ ಕನ್ನಡ ಭಾಷೆಯ ಉಳಿವು ನಮ್ಮ ಪರ ಕರ್ತವ್ಯವಾಗಿದೆ. ಇದು ನಮ್ಮರಾಜ್ಯ ಭಾಷೆಯಾಗಿದ್ದು, ಎಂಟನೇ ಪರಿಚ್ಛೇದದಲ್ಲಿ ಮೇರು ಭಾಷೆಯಾಗಿ ವಿಶ್ವಾದ್ಯಂತ ಪಸರಿಸಿ ಕಂಗೊಳಿಸುತ್ತಿದೆ. ಹೊರನಾಡಿನಲ್ಲಿ ಇಂತಹ ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಒಳನಾಡ ಕರ್ನಾಟಕ ಬಿಟ್ಟರೆ, ಹೊರನಾಡ ಮಹಾರಾಷ್ಟ್ರದಾದ್ಯಂತ ಲಕ್ಷಾಂತರ ಕನ್ನಡಿಗರಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಸಂಘ ಅಸಲ್ಪಾ ಇಂತಹ ಸಂಸ್ಥೆಗಳ ಕೊಡುಗೆಯೂ ಅನುಪಮವಾಗಿದೆ. ಆದ್ದರಿಂದ ವ್ಯವ ಹಾರಿಕವಾಗಿ ಅಲ್ಲದಿದ್ದರೂ ಬದುಕಿನ ಭಾಗವಾಗಿ ಮಕ್ಕಳಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದು ನಾಡಿನ ಕನ್ನಡಾಭಿಮಾನಿ, ಕರ್ನಾಟಕ ಸಂಘ ಅಸಲ್ಪಾ ಇದರ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಕರೆ ನೀಡಿದರು.

ಘಾಟ್ಕೊàಪರ್‌ ಪಶ್ಚಿಮದ ಅಸ ಲ್ಪಾದ ಎನ್‌ಎಸ್‌ಎಸ್‌ ರಸ್ತೆಯ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿಯನ್ನು  ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘಸಂಸ್ಥೆ,  ಶಾಲೆಗಳನ್ನು ಆರಂಭಿಸುವುದು ಅತೀ ಸುಲಭ. ಆದರೆ ಸಮಯಕ್ಕನುಸಾರವಾಗಿ ಪರಿವರ್ತಿಸುತ್ತಾ ಮುನ್ನಡೆಸುವುದು ಬಹಳ ಕಷ್ಟ. ಅಸಲ್ಪಾ  ಕ್ಷೇತ್ರದಲ್ಲಿ 1965 ರಲ್ಲಿ ಆರಂಭವಾದ ಕನ್ನಡ ಶಾಲೆಯಲ್ಲಿ  ಸುಮಾರು 800 ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.  ಶಾಲೆಯಲ್ಲಿ ಇಂದು ಕೇವಲ 75 ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ಕಟ್ಟಡದಲ್ಲಿ ನಾಲ್ಕು ತರಗತಿಗಳು ಸುಮಾರು 2000 ಚದರಡಿಯ ಶಾಲಾ ಕಟ್ಟಡವನ್ನು ವಿದ್ಯಾ ಕೇಂದ್ರವನ್ನಾಗಿಸಿಯೇ ಉಳಿಸಿಕೊಳ್ಳಬೇಕಾದರೆ  ಕನ್ನಡ ಮಾಧ್ಯಮ ದೊಂದಿಗೆ ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭಿಸಿದರೆ ಕಟ್ಟಡವು ತುಳು ಕನ್ನಡಿಗರ ಅಧೀನ ದಲ್ಲಿಯೇ ಇರಲು ಸಾಧ್ಯವಿದೆ ಎಂದರು.

ಕ್ಷೇತ್ರದ ನಗರ ಸೇವಕ ಕಿರಣ್‌ ಲಾಂಡೆY ಅವರು ಅತಿಥಿಯಾಗಿ  ಮಾತನಾಡಿ,  ತಾನು ಬಾಲ್ಯದಲ್ಲಿ ತುಂಟಾಟ ಮಾಡುತ್ತಾ ಬೆಳೆದ ಈ ವಠಾರದ ಅಭಿವೃದ್ಧಿಗಾಗಿ ಸಹಕಾರ ನೀಡುವೆ ಎಂದು  ಭರವಸೆ ನೀಡಿದರು. ನಿಧಿ ಸಂಗ್ರಹಕ್ಕಾಗಿ ಬಿಡುಗಡೆ ಮಾಡಲಾದ ಲಕ್ಕೀಡಿಪ್‌ ಉದ್ದೇಶವನ್ನು ವಿವರಿಸಿ ಇನ್ನೂ ಮೂರು ವರ್ಗಗಳ ಸುಶೋಭಿಕರಣದ ಕಾರ್ಯವನ್ನು ಶೀಘ್ರದಲ್ಲಿ ಮಾಡಲು ಸಹಕರಿಸ ಬೇಕು. ಸಂಘದ ಕನ್ನಡ ಶಾಲೆಯ ಕಟ್ಟಡದಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನು ಆರಂಭಿಸುವರೇ ಮುಂಬುನ ಆಸಕ್ತ ಮತ್ತು ನುರಿತ  ವಿದ್ಯಾಭಿಮಾನಿ ಆಡಳಿತಗಾರರು ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಬಹುದು ಎಂದು ಕಾರ್ಯದರ್ಶಿ ಎಂ. ಪದ್ಮನಾಭ ಸಫಲಿಗ ವಿನಂತಿಸಿದರು.

ಕನ್ನಡ ಶಾಲೆಯ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಂಘದ ಉಪಾಧ್ಯಕ್ಷೆ ಯಶೋಧಾ ಬಟ್ಟಪಾಡಿ ಕಾರ್ಯ ಕರ್ತರ ಪರಿಶ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷ ಸುರೇಶ್‌ ಭಂಡಾರಿ ಅವರ ನೇತೃತ್ವದಲ್ಲಿ ಈ ವಿದ್ಯಾಭವನದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಆಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರಸ್ವತಿ ಮಾತೆಗೆ ಪೂಜೆ ನೆರವೇರಿಸಿ ದೀಪ ಪ್ರಜ್ವಲಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪುಟ್ಟ ಮಕ್ಕಳ ಹಸ್ತದಿಂದ ಅಧ್ಯಕ್ಷರು ಲಕ್ಕಿ ಕೂಪನ್‌ ಡ್ರಾಗೊಳಿಸಿ ವಿಜೇತರ ಹೆಸರುಗಳನ್ನು ಪ್ರಕಟಿಸಿ ಶುಭ ಹಾರೈಸಿದರು. ಹಾಗೂ ಧನ ಸಂಗ್ರಹದ ಕಾರ್ಯದಲ್ಲಿ  ಶ್ರಮಿಸಿದ ಕಾರ್ಯಕರ್ತರು, ನವೀ ಕರಣ ಕಾರ್ಯದಲ್ಲಿ ಸಹಕರಿಸಿದ  ಸುಧಾಕರ್‌ ಶೆಟ್ಟಿ, ಸತೀಶ್‌ ಶೆಟ್ಟಿ, ವಿಶ್ವನಾಥ ದೊಡ್ಮನೆ, ರಾಜವರ್ಮ ಜೈನ್‌, ಶ್ರೀಕಾಂತ್‌ ಸಫಲಿಗ ಅವರನ್ನು  ಪುಷ್ಪಗುಚ್ಚವನ್ನಿತ್ತು ಸಮ್ಮಾನಿಸಿದರು. ಪದ್ಮನಾಭ ಸಫಲಿಗ ಕಾರ್ಯ ಚಟುವಟಿಕೆಗಳನ್ನು ಸ್ಥೂಲವಾಗಿ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ   ಜಯರಾಂ ಜಿ. ರೈ   ಸ್ವಾಗತಿಸಿ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.